ಸರ್ಕಾರ ಬೀಳುತ್ತದೆ ಎಂದ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ದೇವೇಗೌಡ
Recommended Video
ನವ ದೆಹಲಿ, ಜೂನ್ 28: ಲೋಕಸಭೆಯ ನಂತರ ಮೈತ್ರಿ ಸರ್ಕರ ಬಿದ್ದು ಹೋಗುತ್ತದೆ ಎಂದ ಸಿದ್ದರಾಮಯ್ಯ ಅವರು ಆಪ್ತರ ಬಳಿ ಹೇಳಿರುವ ಮಾತಿಗೆ ಜೆಡಿಎಸ್ ವರಿಷ್ಠ ದೇವೇಗೌಡ ಟಾಂಗ್ ನಿಡಿದ್ದಾರೆ.
ನವ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, 'ನಾನು ಪ್ರಧಾನಿ ಆದಾಗ ಒಂದೇ ತಿಂಗಳಿಗೆ ಸರ್ಕಾರ ಬಿದ್ದುಹೋಗುತ್ತದೆ ಎಂದಿದ್ದರು ಆದರೆ ಹಾಗಾಯಿತೆ?' ಎನ್ನುವ ಮೂಲಕ ಸಿದ್ದರಾಮಯ್ಯ ಅವರದ್ದು ಕೇವಲ ಹೊಟ್ಟೆ ಕಿಚ್ಚಿನ ಮಾತು ಅದು ಸತ್ಯವಾಗದು ಎಂದಿದ್ದಾರೆ.
ಕಾಂಗ್ರೆಸ್ ಜೊತೆ ಮೈತ್ರಿಗೆ ತೃತೀಯ ರಂಗದಲ್ಲಿ ಒಮ್ಮತವಿಲ್ಲ: ದೇವೇಗೌಡ
ಸಿದ್ದರಾಮಯ್ಯ ಅವರ ಮಾತಿಗೆ ನೇರವಾಗಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದ ದೇವೇಗೌಡರು. ರಾಜ್ಯ ರಾಜಕಾರಣದಲ್ಲಿ ಎದ್ದಿರುವ ಅಸಮಾಧಾನವನ್ನು ರಾಹುಲ್ ಗಾಂಧಿ ಅಥವಾ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಬಗೆಹರಿಸಲಿದ್ದಾರೆ ಎಂದರು.
ಪೂರಕ ಬಜೆಟ್ ಸಲಹೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ ದೇವೇಗೌಡ
ಕುಮಾರಸ್ವಾಮಿ ಅವರು ಜುಲೈ 5 ರಂದು ಬಜೆಟ್ ಮಂಡಿಸುವುದು ಶತಸಿದ್ಧ ಎಂದ ಅವರು, ನಾನು ಪ್ರಧಾನಿ ಆದಾಗ ಕೂಡ ಚಿದಂಬರಂ ಅವರು ಪೂರ್ಣ ಪ್ರಮಾಣದ ಬಜೆಟ್ ಅನ್ನೇ ಮಂಡಿಸಿದ್ದರು ಎಂದರು.