ಸರ್ಕಾರಿ ನೌಕರರೇ.. ಅಕಾಲಿಕವಾಗಿ ಸಿಹಿ ಸುದ್ದಿ ನಿರೀಕ್ಷಿಸಿ
ಬೆಂಗಳೂರು,ಏ.8: ಕೇಂದ್ರ ಸರ್ಕಾರ ತನ್ನ ನೌಕರರಿಗೆ ಶೇ.6ರಷ್ಟು ತುಟ್ಟಿಭತ್ಯೆ ನೀಡುವ ಘೋಷಣೆ ಮಾಡಿದ ಬೆನ್ನಲ್ಲೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದ ಸರ್ಕಾರಿ ನೌಕರರಿಗೆ ಅಕಾಲಿಕವಾಗಿ ಸಿಹಿ ಸುದ್ದಿ ನೀಡಲು ಸಿದ್ಧತೆ ನಡೆಸಿದೆ.
ಸಾಮಾನ್ಯವಾಗಿ ದಸರಾ, ಯುಗಾದಿ ಹೀಗೆ ಹಬ್ಬದ ಸಮಯದಲ್ಲಿ ತುಟ್ಟಿಭತ್ಯೆ ಹೆಚ್ಚಳ ಘೋಷಣೆ ಮಾಡುವುದು ಮಾಮೂಲಿ. ಅದರೆ, ಈಗ ಸಿದ್ದರಾಮಯ್ಯ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ಡಿಎ ನೀಡಲು ಸಜ್ಜಾಗಿದೆ.
ಜ.1ರಿಂದ ಪೂರ್ವನ್ವಯವಾಗುವಂತೆ ರಾಜ್ಯ ಸರ್ಕಾರಿ ನೌಕರರಿಗೆ ಶೇ 3.5ರಷ್ಟು ತುಟ್ಟಿಭತ್ಯೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಆರ್ಥಿಕ ಸಂಪನ್ಮೂಲ ಲಭ್ಯತೆ ಹಾಗೂ ಬೆಲೆ ಸೂಚ್ಯಂಕದ ಲೆಕ್ಕ ಹಾಕಿ ಮೂಲ ವೇತನದ ಮೇಲೆ ಶೇಕಡವಾರು ತುಟ್ಟಿಭತ್ಯೆ ನಿಗದಿ ಮಾಡಲಾಗುತ್ತಿದೆ. [ಸಿದ್ದು ಅವರಿಂದಸರ್ಕಾರಿ ನೌಕರರಿಗೆ ದಸರಾ ಗಿಫ್ಟ್ ]
ತುಟ್ಟಿಭತ್ಯೆ
ಹೆಚ್ಚಳದ
ಲಾಭ
ಸುಮಾರು
6
ಲಕ್ಷಕ್ಕೂ
ಅಧಿಕ
ನೌಕರರಿಗೆ
ಸಿಗಲಿದೆ.
ಇದರಿಂದ
ರಾಜ್ಯದ
ಬೊಕ್ಕಸಕ್ಕೆ
ಸುಮಾರು
700
ಕೋಟಿ
ರು
ಹೊರೆ
ಬೀಳಲಿದೆ.
ಅಧಿಕೃತ
ಆದೇಶ
ಹೊರ
ಬೀಳಲು
ಸುಮಾರು
7-10
ದಿನಗಳ
ಕಾಲವಾದರೂ
ಬೇಕು
ಎಂದು
ಹಣಕಾಸು
ಇಲಾಖೆ
ಮೂಲಗಳಿಂದ
ತಿಳಿದು
ಬಂದಿದೆ.
ನಿವೃತ್ತ ವೇತನದಾರರು ಮತ್ತು ಕುಟುಂಬ ನಿವೃತ್ತಿ ವೇತನದಾರರಿಗೂ ತುಟ್ಟಿಭತ್ಯೆ ಹೆಚ್ಚಳದ ಲಾಭ ದೊರೆಯಲಿದೆ. ಕಳೆದ ಏಪ್ರಿಲ್ 2014ರಲ್ಲಿ ಮೂಲ ವೇತನದ ಶೇ.15ರಷ್ಟಿದ್ದ ತುಟ್ಟಿಭತ್ಯೆಯನ್ನು ಶೇ.21ಕ್ಕೆ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿತ್ತು. [ಸರ್ಕಾರಿ ನೌಕರರ ಟೇಕ್ ಹೋಮ್ ಸ್ಯಾಲರಿ ಹೆಚ್ಚಳ?]
ನಂತರ ದಸರಾ ಸಂದರ್ಭದಲ್ಲಿ ಮೂಲವೇತನದ ಶೇ.4.25ರಷ್ಟು ತುಟ್ಟಿಭತ್ಯೆ ಹೆಚ್ಚಿಸಲಾಯಿತು. ಇದರಿಂದ ಶೇ.21ರಿಂದ ಶೇ.25.25ಕ್ಕೆ ತುಟ್ಟಿಭತ್ಯೆ ಹೆಚ್ಚಳವಾದಂತಾಗಿತ್ತು. [ಪಿಎಫ್ ಹೊಸ ನಿಮಯ : ಟೇಕ್ ಹೋಮ್ ಸಂಬಳಕ್ಕೆ ಕುತ್ತು !]
ತುಟ್ಟಿ ಭತ್ಯೆ(dearness allowance): ಭಾರತದಲ್ಲಿ, ತುಟ್ಟಿಭತ್ಯೆಯು ಒಬ್ಬ ವ್ಯಕ್ತಿಯ ಸಂಬಳದ ಭಾಗವಾಗಿದೆ. ತುಟ್ಟಿಭತ್ಯೆಯನ್ನು ಮೂಲ ಸಂಬಳದ ಶೇಕಡಾವಾರು ಲೆಕ್ಕ ಆಧಾರಿಸಿ ಲೆಕ್ಕಮಾಡಲಾಗುತ್ತದೆ. ನಂತರ, ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ. ದರಗಳು ಗ್ರಾಮೀಣ/ನಗರ ಪ್ರದೇಶಗಳ ಪ್ರಕಾರ ಬದಲಾಗುತ್ತವೆ. ತುಟ್ಟಿ ಭತ್ಯೆಯನ್ನು 12 ತಿಂಗಳಿನ ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇರೆಗೆ ನಿಗದಿಪಡಿಸಲಾಗುತ್ತದೆ.