ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್‌ ನಾಯಕರು ದೆಹಲಿಯತ್ತ, ಅತೃಪ್ತರು ರೆಸಾರ್ಟ್‌ನತ್ತ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 18: ಕಾಂಗ್ರೆಸ್‌ನ ಟಾಪ್ ನಾಯಕರು ದೆಹಲಿಗೆ ತೆರಳಲು ಸಜ್ಜಾಗಿದ್ದರೆ ಇತ್ತ ಅತೃಪ್ತ ಶಾಸಕರು ರೆಸಾರ್ಟ್‌ನತ್ತ ತೆರಳಲು ತಯಾರಿ ನಡೆಸಿದ್ದಾರೆ.

ಜಾರಕಿಹೊಳಿ ಬ್ರದರ್ಸ್‌ ಬಂಡಾಯ ಶಮನ : ಯಾರು, ಏನು ಹೇಳಿದರು?ಜಾರಕಿಹೊಳಿ ಬ್ರದರ್ಸ್‌ ಬಂಡಾಯ ಶಮನ : ಯಾರು, ಏನು ಹೇಳಿದರು?

ರಮೇಶ್ ಜಾರಕಿಹೊಳಿ ಸೇರಿದಂತೆ ಹಲವು ಅತೃಪ್ತ ಶಾಸಕರ ಜೊತೆ ಸಿದ್ದರಾಮಯ್ಯ ಮಾಡಿದ ಸಂಧಾನ ಯತ್ನ ಫಲಪ್ರಧವಾಗದ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಇಂದು ಸಂಜೆ ದೆಹಲಿಗೆ ತೆರಳುತ್ತಿದ್ದಾರೆ. ದಿನೇಶ್ ಗುಂಡೂರಾವ್ ಈಗಾಗಲೇ ದೆಹಲಿಯಲ್ಲಿದ್ದಾರೆ. ನಾಳೆ ಪರಮೇಶ್ವರ್ ಅವರೂ ದೆಹಲಿಗೆ ಹಾರುವ ಸಂಭವ ಇದೆ.

ರಾಜಕೀಯ ಗೊಂದಗಳಿಗೆ ಸಿದ್ದರಾಮಯ್ಯರೇ ಕಾರಣ ಎಂದ ಆರ್.ಅಶೋಕ್ ರಾಜಕೀಯ ಗೊಂದಗಳಿಗೆ ಸಿದ್ದರಾಮಯ್ಯರೇ ಕಾರಣ ಎಂದ ಆರ್.ಅಶೋಕ್

ರಾಜ್ಯ ರಾಜಕಾರಣದಲ್ಲಿ ಮತ್ತೆ ರೆಸಾರ್ಟ್ ರಾಜಕೀಯ ಪ್ರಾರಂಭವಾಗಿದ್ದು, ನಿನ್ನೆಯಿಂದ ಸಚಿವರ ಅಧಿಕೃತ ನಿವಾಸದಲ್ಲಿ ತಂಗಿದ್ದ ರಮೇಶ್ ಜಾರಕಿಹೊಳಿ ಅವರು ಖಾಸಗಿ ರೆಸಾರ್ಟ್‌ನತ್ತ ತೆರಳಿದ್ದಾರೆ. ಇತರ ಅತೃಪ್ತ ಶಾಸಕರು ಅಲ್ಲಿಗೆ ಬಂದು ಸೇರಲಿದ್ದಾರೆ ಎನ್ನಲಾಗಿದೆ.

Siddaramaiah going to Delhi to meet high command

ಈಗಾಗಲೇ ಅತೃಪ್ತಶಾಸಕರಾದ ಎಂಟಿಬಿ ನಾಗರಾಜು, ನಾಗೇಂದ್ರ ಆನಂದ್ ಸಿಂಗ್ ಅವರುಗಳು ರಮೇಶ್ ಜಾರಕಿಹೊಳಿ ಜತೆಗಿದ್ದಾರೆ. ನಾಳೆ ಸುದ್ದಿಗೋಷ್ಠಿ ನಡೆಸಿ ಮಹತ್ವದ ನಿರ್ಣಯವನ್ನು ಹೊರಹಾಕುತ್ತೇವೆ ಎಂದು ಈಗಾಗಲೇ ಎಂಟಿಬಿ ನಾಗರಾಜು ಹೇಳಿದ್ದಾರೆ. ರಾಜಕೀಯದ ಎಲ್ಲ ಕುತೂಹಲ ನಾಳೆಗೆ ಶಿಫ್ಟ್‌ ಆಗಿದೆ.

ಕುಮಾರಸ್ವಾಮಿ ಯಶಸ್ವಿ ಸಂಧಾನ, ಜಾರಕಿಹೊಳಿ ಬ್ರದರ್ಸ್ ರೋಷ ಶಮನ ಕುಮಾರಸ್ವಾಮಿ ಯಶಸ್ವಿ ಸಂಧಾನ, ಜಾರಕಿಹೊಳಿ ಬ್ರದರ್ಸ್ ರೋಷ ಶಮನ

ದೆಹಲಿಗೆ ತೆರಳುವ ಸಿದ್ದರಾಮಯ್ಯ ಅವರು ಹೈಕಮಾಂಡ್ ಜತೆ ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಪ್ರಸ್ತುತ ರಾಹುಲ್ ಗಾಂಧಿ ಕರ್ನೂಲಿನಲ್ಲಿದ್ದು ರಾತ್ರಿ ವೇಳೆಗೆ ದೆಹಲಿಗೆ ತೆರಳುವ ಸಾಧ್ಯತೆ ಇದೆ.

English summary
Siddaramaiah going to Delhi to meet high command. Today evning Siddaramaiah catching flight. Dinesh Gundu Rao already in Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X