ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಶಿವಸೇನೆ ಬೆಂಬಲ
ಬೆಂಗಳೂರು, ಮೇ 16: ಕರ್ನಾಟಕದಲ್ಲಿ ರಚನೆಯಾಗಿರುವ ಜೆಡಿಎಸ್-ಕಾಂಗ್ರೆಸ್ ಚುನಾವಣೋತ್ತರ ಮೈತ್ರಿಗೆ ಇದೀಗ ಜೆಡಿಎಸ್ ಬೆಂಬಲ ನೀಡಿದೆ. ಒಂದೊಮ್ಮೆ ಮೈತ್ರಿಗೆ ಅವಕಾಶ ನೀಡದೆ, ಸರಕಾರ ರಚನೆಗೆ ಆಹ್ವಾನಿಸದಿದ್ದರೆ ಲೋಕಸಭೆಯಲ್ಲಿ ಪ್ರತಿಭಟನೆ ಮಾಡುವುದಾಗಿ ಶಿವಸೇನೆ ವಕ್ತಾರ ಸಂಜಯ್ ರಾವತ್ ಎಚ್ಚರಿಸಿದ್ದಾರೆ.
ರಾಜ್ಯಪಾಲರ ಆಹ್ವಾನ ಸಿಗದಿದ್ದರೆ ಕೋರ್ಟ್ ಬಾಗಿಲು ತಟ್ಟಲಿದೆ ಕಾಂಗ್ರೆಸ್
ಸರಕಾರ ರಚನೆಗೆ ಅವಕಾಶ ಕೊಡಬೇಕು ಎಂದು ಸಂಜಯ್ ರಾವತ್ ಇದೇ ವೇಳೆ ರಾಜ್ಯಪಾಲರು ಮತ್ತು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
"ಬಿಜೆಪಿಗೆ 104 ಸ್ಥಾನಗಳಿವೆ. ಸರಕಾರ ರಚನೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಬಹುಮತ ಇದೆ. ರಾಜ್ಯ ರಾಜಕಾರಣ ಗಬ್ಬೆದ್ದು ಹೋಗಿದೆ. ಶಾಸಕರ ಮೇಲೆ ಒತ್ತಡ ಹೇರಲು ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ಇತರ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದ್ದು ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರ ಜೊತೆಗೆ 100 ಕೋಟಿ ರೂಪಾಯಿಯ ಆರೋಪ ಕೇಳಿ ಬಂದಿದೆ. ಇದೆಲ್ಲಾ ಜಾಗತಿಕ ಮಟ್ಟದಲ್ಲಿ ಭಾರತದ ಪ್ರಜಾಪ್ರಭುತ್ವದ ಮಾನ ಹರಾಜು ಹಾಕುತ್ತಿದೆ," ಎಂದು ಸಂಜೀವ್ ರಾವತ್ ಕಿಡಿಕಾರಿದ್ದಾರೆ.