ಕುರಿ ಮಾಂಸ ಪ್ರಿಯರಿಗೆ ಸುದ್ದಿ: ಜಿಲ್ಲೆ ಜಿಲ್ಲೆಗಳಲ್ಲಿ ಮಟನ್ ಕೇಂದ್ರ!
ಮೈಸೂರು, ಆಗಸ್ಟ್ 21: ಕೆಎಂಎಫ್ ನಂದಿನಿ ಬ್ರ್ಯಾಂಡ್ ಹೇಗೆ ಜನಪ್ರಿಯವಾಗಿರುವಂತೆ ಕುರಿ ಮಾಂಸ ಎಲ್ಲೆಡೆ ಸಿಗುವಂತೆ ಮಾಡಲು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಯೋಜನೆ ಹಾಕಿಕೊಂಡಿದೆ. ಕುರಿಗಳ ತಳಿ ಅಭಿವೃದ್ಧಿ, ಮಾಂಸ ಮಾರಾಟ ಕೇಂದ್ರ, ಉದ್ಯೋಗ ಅವಕಾಶ ಹೆಚ್ಚಳ ಎಲ್ಲವೂ ನಮ್ಮ ಗಮನದಲ್ಲಿದೆ ಎಂದು ನಿಗಮದ ಚೇರ್ಮನ್ ಪಂಡಿತರಾವ್ ಚಿದ್ರಿ ಘೋಷಿಸಿದ್ದಾರೆ.
ರಾಜ್ಯದ
ಪ್ರತಿ
ಜಿಲ್ಲೆಗಳಲ್ಲೂ
ಕುರಿ
ಮಾಂಸದ
ಅಂಗಡಿಗಳನ್ನು
ತೆರೆಯಲಾಗುವುದು,
ಕುರಿ
ಸಾಕಾಣಿಕೆ,
ಸ್ಥಳೀಯರಿಗೆ
ಉದ್ಯೋಗವಕಾಶ
ಸೃಷ್ಟಿ
ಮಾಡಲಾಗುವುದು.
ರಾಜ್ಯದಲ್ಲಿರುವ
ಸುಮಾರು
300ಕ್ಕೂ
ಅಧಿಕ
ಕುರಿ
ಮತ್ತು
ಉಣ್ಣೆ
ಉತ್ಪಾದಕರ
ಸಂಘಗಳನ್ನು
ಒಗ್ಗೂಡಿಸಿ,
ನೋಂದಣಿಗೆ
ಚಾಲನೆ
ನೀಡಲಾಗುವುದು.
ಈ
ಸಂಘಗಳ
ಅಭಿವೃದ್ಧಿಗೆ
ಸರ್ಕಾರದಿಂದ
25
ಕೋಟಿ
ರು
ಅನುದಾನ
ಸಿಕ್ಕಿದೆ
ಎಂದರು.
ನಿಂಬಾಳ್ಕರ್ ಕೃಷಿ ಸಂಶೋಧನಾ ಕೇಂದ್ರದಿಂದ ಹುಟ್ಟಿಕೊಂಡ ನಾರಿ ಸುವರ್ಣ ಕುರಿ ತಳಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಡೆಕ್ಕನಿ, ಕೆಂಗುರಿ, ಹಾಸನ್ ತಳಿಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಮಂಡ್ಯ, ಚಿತ್ರದುರ್ಗ, ಹಾವೇರಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ತಳಿ ಅಭಿವೃದ್ಧಿ ಕೇಂದ್ರಗಳಿವೆ ಎಂದು ಹೇಳಿದರು.
ಸುಮಾರು 18ಕ್ಕೂ ಅಧಿಕ ಆಂಬ್ಯುಲೆನ್ಸ್ ಗಳನ್ನು ರಸ್ತೆಗಿಳಿಸಲಾಗಿದ್ದು, ಕುರಿ/ಮೇಕೆಗಳ ಆರೋಗ್ಯ ರಕ್ಷಣೆಗೆ ಕ್ರಮ ಜರುಗಿಸಲಾಗಿದೆ.ಬಿಬಿಎಂಪಿ ಚುನಾವಣೆ ಬಳಿಕ ಕಾರ್ಯಕ್ರಮ ಆಯೋಜಿಸಿ ಹೊಸ ತಳಿ, ಸಂಘಗಳಿಗೆ ನೆರವು, ಮೊಬೈಲ್ ಆಂಬ್ಯುಲೆನ್ಸ್ ಗಳಿಗೆ ಚಾಲನೆ ನೀಡಲಾಗುತ್ತದೆ ಎಂದು ಚಿದ್ರಿ ಹೇಳಿದರು.