ಬಜೆಟ್ 2017: ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ 2000 ಪಿಂಚಣಿ
ಬೆಂಗಳೂರು, ಮಾರ್ಚ್ 15: ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಸಿದ್ದರಾಮಯ್ಯ ವಿಧಾನಸಭೆಯಲ್ಲಿ 2017-18 ಬಜೆಟ್ ಮಂಡಿಸುತ್ತಿದ್ದಾರೆ.
ಬಜೆಟಿನಲ್ಲಿ ರಾಜ್ಯದ ಕೃಷಿ ಸಮುದಾಯಕ್ಕೆ ಹಲವು ಘೋಷಣೆಗಳನ್ನು ಸಿದ್ದರಾಮಯ್ಯನವರು ನೀಡಿದ್ದಾರೆ.
ಇದೇ ವರ್ಷದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಮತ್ತು ಮೇಕೆದಾಟು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಕೆರೆಗಳ ಪುನಶ್ಚೇತನಗೊಳಿಸಲು ಕೆರೆ ಸಂಜೀವಿನಿ ಯೋಜನೆಯನ್ನು ಬಜೆಟಿನಲ್ಲಿ ಘೋಷಿಸಲಾಗಿದೆ. ಕೋಲಾರ ಚಿಕ್ಕಾಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಗೇರು ಅಭಿವೃದ್ಧಿ ಮಂಡಳಿ ರಚಿಸಲು ಸರಕಾರ ನಿರ್ಧರಿಸಿದ್ದು 10 ಕೋಟಿ ಅನುದಾನದಲ್ಲಿ 10,000 ಎಕರೆ ಪ್ರದೇಶದಲ್ಲಿ ಗೇರು ಬೆಳೆಯುವ ಉದ್ದೇಶ ಹಾಕಿಕೊಳ್ಳಲಾಗಿದೆ.
ಕೃಷಿ ಭಾಗ್ಯ ಯೋಜನೆಯನ್ನು ಎಲ್ಲ ತಾಲ್ಲೂಕುಗಳಿಗೆ ವಿಸ್ತರಣೆ. 600 ಕೋಟಿ ರೂ. ಅನುದಾನ (ಕರಾವಳಿ ಮತ್ತು ಮಲೆನಾಡು ಹೊರತುಪಡಿಸಿ)#JanaparaBudget
— CM of Karnataka (@CMofKarnataka) March 15, 2017
ಕರ್ನಾಟಕದಲ್ಲಿ ನೀರಾ ತೆಗೆಯಲು ಲೈಸನ್ಸ್ ನೀಡಲಾಗುವುದು. ಹಾಗೂ ಸಂಸ್ಕರಣ ಘಟಕಗಳಿಗೆ 100 ಕೋಟಿ ಅನುದಾನ ನೀಡಲಾಗುವುದು ಎಂದೂ ಮುಖ್ಯಮಂತ್ರಿ ಹೇಳಿದ್ದಾರೆ.
ಫಸಲ್ ಬಿಮಾ ಯೋಜನೆ 845 ಕೋಟಿ ರೂ ಒದಗಿಸಲಾಗಿದ್ದು, ಒಟ್ಟು 31.5 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಣೆ#JanaparaBudget
— CM of Karnataka (@CMofKarnataka) March 15, 2017
ಇನ್ನು ಬರ ಪರಿಹಾರಕ್ಕೆ 850 ಕೋಟಿ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಬರ ಪೀಡಿತ ಪ್ರದೇಶಗಳಲ್ಲಿ 30 ಕೋಟಿ ರೂಪಾಯಿ ವೆಚ್ಚದಲ್ಲಿ ಮೋಡ ಭಿತ್ತನೆ ಮಾಡಲಾಗುವುದು ಎಂದು ಹಣಕಾಸು ಸಚಿವರು ಹೇಳಿದ್ದಾರೆ.
233 ಕೋಟಿ ರೂ. ವೆಚ್ಚದಲ್ಲಿ ಶೇ. 90 ಸಹಾಯಧನದೊಂದಿಗೆ 35000 ರೈತರಿಗೆ ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ. #JanaparaBudget
— CM of Karnataka (@CMofKarnataka) March 15, 2017
ರಾಜ್ಯದ ರೈತರ ಸಾಲ ಮನ್ನಾ ಇಲ್ಲ. ಆದರೆ ರಾಜ್ಯದಲ್ಲಿರುವ ಒಟ್ಟು 25 ಲಕ್ಷ ರೈತರಿಗೆ 13,500 ಕೋಟಿ ರೂಪಾಯಿ ಸಾಲ ನೀಡಲಾಗುವುದು. ಇನ್ನು ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡಲಾಗುತ್ತಿರುವ ಸಾಲವನ್ನು 3 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗುವುದು ಎಂದು ಹೇಳಿದ್ದಾರೆ.
ಮೂರು ವರ್ಷಗಳ ಅವಧಿಯಲ್ಲಿ ಒಟ್ಟು ೧೦೦ ಕೋಟಿ ರೂ.ಗಳ ವೆಚ್ಚದಲ್ಲಿ ಲಸಿಕೆ ತಯಾರಿಕಾ ಘಟಕ ಸ್ಥಾಪಿಸಿ ಕಾಲುಬಾಯಿ ರೋಗ ಲಸಿಕೆ ಉತ್ಪಾದನೆಯಲ್ಲಿ ಸ್ವಾವಲಂಬನೆ.#JanaparaBudget
— CM of Karnataka (@CMofKarnataka) March 15, 2017
ರಾಜ್ಯದ ನೋಂದಾಯೊತ ಕೃಷಿ ಸಹಕಾರಿ ಸಂಘಗಳಿಗೆ 705 ಲಕ್ಷ ಸಹಾಯಧನವನ್ನು ನೀಡಲಾಗುವುದು. ಬಳ್ಳಾರಿಯಲ್ಲಿ ಕುರಿ ತಳಿ ಸಂವರ್ಧನಾ ಕೇಂದ್ರ ಸ್ಥಾಪಿಸಲು ಬಜೆಟಿನಲ್ಲಿ 1 ಕೋಟಿ ಮೀಸಲಿಡಲಾಗಿದೆ.
ಶೂನ್ಯ ಬಡ್ಡಿದರದಲ್ಲಿ ೩ ಲಕ್ಷದವರೆಗೆ ಅಲ್ಪಾವದಿ ಹಾಗೂ ಶೇ.೩ ರ ದರದಲ್ಲಿ ೧೦ ಲಕ್ಷದವರೆಗೆ ಮಧ್ಯಮಾವಧಿ, ಧೀರ್ಘಾವಧಿ ಕೃಷಿ ಸಾಲ ನೀಡಿಕೆ ಮುಂದುವರಿಕೆ. #JanaparaBudget
— CM of Karnataka (@CMofKarnataka) March 15, 2017
ಬಜೆಟಿನಲ್ಲಿ ಪಶುಸಂಗೋಪನೆಗೆ 2245 ಕೋಟಿ ರೂಪಾಯಿಗಳನ್ನು ಎತ್ತಿಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕೃಷಿಗೆ ತೆರಿಗೆ ವಿನಾಯ್ತಿಯನ್ನೂ ಬಜೆಟಿನಲ್ಲಿ ಘೋಷಿಸಲಾಗಿದೆ. ದ್ವಿದಳ ಧಾನ್ಯ ಮತ್ತು ತೆಂಗಿನಕಾಯಿ ಸಿಪ್ಪೆಗಳ ಮೇಲೆ ತೆರಿಗೆ ವಿನಾಯಿತಿಯನ್ನು ಸಿದ್ದರಾಮಯ್ಯ ಗೋಷಿಸಿದ್ದಾರೆ.
— CM of Karnataka (@CMofKarnataka) March 15, 2017
ಇನ್ನು ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ ಮಾಸಿಕ 2 ಸಾವಿರ ರೂಪಾಯಿ ಪಿಂಚಣಿ ನೀಡಲಾಗುತ್ತದೆ.