ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರಿಯ ಸಾಹಿತ್ಯ ವಿಮರ್ಶಕ ಗಿರಡ್ಡಿ ಗೋವಿಂದರಾಜ (79) ನಿಧನ

|
Google Oneindia Kannada News

ಧಾರವಾಡ, ಮೇ 11: ರಾಜ್ಯದ ಹಿರಿಯ ಸಾಹಿತ್ಯ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ಶುಕ್ರವಾರ ಸಂಜೆ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಬಳಿ ಇರುವ ತಮ್ಮ ಮನೆಯಲ್ಲಿ ತೀವ್ರ ಹೃದಯಾಘಾತದಿಂದ ಅವರು ನಿಧನರಾದರು. ಅವರ ತಮ್ಮ ಅಪಾರ ಅಭಿಮಾನಿಗಳು ಮತ್ತು ಶಿಷ್ಯವೃಂದವನ್ನು ಅಗಲಿದ್ದಾರೆ.

senior literature reviewer Giraddi Govindaraju passes away

ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್ ಅಧ್ಯಕ್ಷರಾಗಿದ್ದ ಅವರು 'ರಂಗ ಮಾಧ್ಯಮ' ನಾಟಕ ಸಂಸ್ಥೆಯ ಸ್ಥಾಪಿಸಿ ಅಭಿನಯ, ನಟನೆ, ನಿರ್ದೇಶನದಲ್ಲಿ ಖ್ಯಾತಿ ಪಡೆದರು.

ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಹಲವಾರು ಕತೆ, ಕವಿತೆ ಹಾಗೂ ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ. ಅವರ ಪ್ರಮುಖ ಕೃತಿಗಳು ಶಾರದಾ ಲಹರಿ (ಕಾವ್ಯ), ರಸವಂತಿ (ಕವನ ಸಂಕಲನ), ಮರ್ಲಿನ್ ಮನ್ರೋ, ಆ ಮುಖ ಈ ಮುಖ, ಹಂಗು ಮತ್ತು ಇತರ ಕಥೆಗಳು(ಕಥಾಸಂಕಲನ) (ಹಂಗು ಕಥೆ ಪುಟ್ಟಣ್ಣ ಕಣಗಾಲರ ನಿರ್ದೇಶನದ ಕಥಾಸಂಗಮದ ಚಲನಚಿತ್ರದಲ್ಲಿ ಚಿತ್ರಿತವಾದ ಕಥೆ), ಒಂದು ಬೇವಿನ ಮರದ ಕಥೆ, ಸಣ್ಣ ಕಥೆಯ ಹೊಸ ಒಲವುಗಳು (ವಿಮರ್ಶೆ) ಇನ್ನೂ ಹಲವು.

English summary
Kannada Literature's senior reviewer Giraddi Govindaraju passes away today. He was 79 aged. He dies due to heart attack in his home in Dharwad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X