ಕನ್ನಡದ ಮುಂದಿನ ರಾಷ್ಟ್ರಕವಿಗಾಗಿ ಹುಡುಕಾಟ
ಬೆಂಗಳೂರು, ಡಿ.5 : ಕರ್ನಾಟಕ ಸರ್ಕಾರ ಮತ್ತೆ ರಾಷ್ಟ್ರಕವಿ ಪ್ರಶಸ್ತಿ ನೀಡಲು ಮುಂದಾಗಿದ್ದು, ಪುರಸ್ಕಾರಕ್ಕೆ ಅರ್ಹರನ್ನು ಆಯ್ಕೆ ಮಾಡಲು ಹಿರಿಯ ನ್ಯಾಯವಾದಿ ಹಾಗೂ ನಿವೃತ್ತ ನ್ಯಾಯಮೂರ್ತಿ ಡಾ.ಕೊ.ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚನೆ ಮಾಡಿದೆ.
ಕನ್ನಡ
ಸಾಹಿತ್ಯ
ಕ್ಷೇತ್ರದ
ಅತ್ಯುನ್ನತ
ಪುರಸ್ಕಾರವಾದ
'ರಾಷ್ಟ್ರಕವಿ'ಗೆ
ರಾಜ್ಯದಲ್ಲಿ
ಸಾಕಷ್ಟು
ಅರ್ಹ
ಕವಿ,
ಸಾಹಿತಿಗಳಿದ್ದರೂ
ಆಯ್ಕೆ
ವಿಚಾರದಲ್ಲಿ
ಸರ್ಕಾರ
ನಿರ್ಲಕ್ಷ್ಯ
ತೋರಿದೆ
ಎಂಬ
ದೂರುಗಳಿತ್ತು.
ಆದ್ದರಿಂದ
ಸರ್ಕಾರ
ಮತ್ತೆ
ರಾಷ್ಟ್ರಕವಿ
ಪುರಸ್ಕಾರ
ನೀಡಲು
ಮುಂದಾಗಿದೆ.
[ರಾಷ್ಟ್ರಕವಿ
ಜಿಎಸ್
ಶಿವರುದ್ರಪ್ಪ
ವಿಧಿವಶ]
ಸಮಿತಿ ಅರ್ಹರನ್ನು ಆಯ್ಕೆ ಮಾಡಲಿದೆ : ರಾಷ್ಟ್ರಕವಿ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಸರ್ಕಾರ ಡಾ.ಕೊ.ಚನ್ನಬಸಪ್ಪ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಿದೆ. ಸಮಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ, ಡಾ.ಎಚ್.ಎಲ್.ಪುಷ್ಪಾ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ಕಾಳೇಗೌಡ ನಾಗವಾರ, ಡಾ.ಗಿರಡ್ಡಿ ಗೋವಿಂದರಾಜ ಮುಂತಾದವರು ಸದಸ್ಯರಾಗಿದ್ದಾರೆ. [ಕನ್ನಡ ಶುಭಾಶಯ ವಿನಿಮಯಕ್ಕೊಂದು App]
ಸಮಿತಿಯ ಪದನಿಮಿತ್ತ ಸದಸ್ಯರಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ.ಮಾಲತಿ ಪಟ್ಟಣಶೆಟ್ಟಿ ಅವರಿದ್ದಾರೆ.[ಕನ್ನಡ ಅಧ್ಯಯನ ಕೇಂದ್ರ ಶೀಘ್ರ ಬೆಂಗಳೂರಿಗೆ ಬರಲಿ]
ಈ ಸಮಿತಿ ಸರ್ಕಾರಕ್ಕೆ ವರದಿ ನೀಡಲು ಯಾವುದೇ ಕಾಲಮಿತಿ ನಿಗದಿ ಪಡಿಸಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಾಹಿತ್ಯಕ್ಕೆ ಅಪಾರವಾದ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಿದೆ.
ಅಂದಹಾಗೆ ಸರ್ಕಾರ ಇದುವರೆಗೂ ಮಂಜೇಶ್ವರ ಗೋವಿಂದ ಪೈ, ಕುವೆಂಪು ಮತ್ತು ಡಾ.ಜಿ.ಎಸ್.ಶಿವರುದ್ರಪ್ಪ ಅವರಿಗೆ ರಾಷ್ಟ್ರಪತಿ ಪುರಸ್ಕಾರ ನೀಡಿತ್ತು. ಈಗ ಪುನಃ ಪ್ರಶಸ್ತಿ ನೀಡಲು ನಿರ್ಧರಿಸಿದೆ.