ಯಡಿಯೂರಪ್ಪಗೆ ಹಿನ್ನಡೆ, ಡಿನೋಟಿಫಿಕೇಷನ್ ಕೇಸ್ ಮತ್ತೆ ವಿಚಾರಣೆಗೆ
ಬೆಂಗಳೂರು,
ಆಗಸ್ಟ್
01:
ಮಾಜಿ
ಮುಖ್ಯಮಂತ್ರಿ,
ಬಿಜೆಪಿ
ರಾಜ್ಯಾಧ್ಯಕ್ಷ
ಬಿಎಸ್
ಯಡಿಯೂರಪ್ಪ
ಅವರಿಗೆ
ಮತ್ತೆ
ಭೂ
ಕಂಟಕ
ಎದುರಾಗಿದೆ.
ಯಡಿಯೂರಪ್ಪ
ಅವರ
ವಿರುದ್ಧದ
15
ಎಫ್
ಐಆರ್
ರದ್ದುಗೊಳಿಸಿ
ಹೈಕೋರ್ಟ್
ನೀಡಿರುವ
ಆದೇಶವನ್ನು
ಪ್ರಶ್ನಿಸಿ,
ಕರ್ನಾಟಕ
ಸರ್ಕಾರವು
ಸುಪ್ರೀಂಕೋರ್ಟಿನಲ್ಲಿ
ಮೇಲ್ಮನವೈ
ಸಲ್ಲಿಸಿತ್ತು.
ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟಿನ ನ್ಯಾಯಪೀಠವು ಮೇಲ್ಮನವಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ ಸಮ್ಮತಿ ಸೂಚಿಸಿದೆ.
ರಾಜ್ಯ ಸರ್ಕಾರದ ಪರ ವಕೀಲ ಜೋಸೆಫ್ ಅರಿಸ್ಟಾಟಲ್ ಅವರು ಈ ಪ್ರಕರಣದ ಸಮಗ್ರ ವಿಚಾರಣೆ ನಡೆಸುವಂತೆ ಮನವಿ ಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಹಾಗೂ ಅಶೋಕ್ ಭೂಷಣ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ಸೆಪ್ಟೆಂಬರ್ ಮೂರನೇ ವಾರದಲ್ಲಿ ವಿಚಾರಣೆ ನಡೆಸಲು ನಿರ್ಧರಿಸಿದೆ.
ಯಡಿಯೂರಪ್ಪಅವರು ತಮ್ಮ ಅಧಿಕಾರ ಅವಧಿಯಲ್ಲಿ ಬೆಂಗಳೂರಿನ ಸುತ್ತಾ ಮುತ್ತಾ 15ಕ್ಕೂ ಹೆಚ್ಚು ಕಡೆಗಳಲ್ಲಿ ಭೂಮಿಯನ್ನು ಡಿನೋಟಿಫೈ ಮಾಡಿದ್ದರ ಬಗ್ಗೆ ಸಿಎಜಿ ವರದಿ ನೀಡಿತ್ತು. ಈ ವರದಿ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು, ಎಫ್ ಐಆರ್ ಹಾಕಿದ್ದರು. ಆದರೆ, ಜನವರಿ ತಿಂಗಳಿನಲ್ಲಿ 15 ಎಫ್ ಐಆರ್ ಗಳನ್ನು ಹೈಕೋರ್ಟ್ ರದ್ದುಗೊಳಿಸಿತ್ತು.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ, ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಸಿಎಜಿ ವರದಿ ಆಧರಿಸಿ ತನಿಖೆ ನಡೆಸಲು ಅವಕಾಶ ಇಲ್ಲದಿದ್ದರೂ ತಮ್ಮ ವಿರುದ್ಧ ತನಿಖೆ ನಡೆಸಿರುವುದು ಕಾನೂನುಬಾಹಿರ ಎಂದು ಯಡಿಯೂರಪ್ಪ ವಾದಿಸಿದ್ದರು. ಎಫ್ ಐಆರ್ ರದ್ದುಗೊಳಿಸಲು ಹೈಕೋರ್ಟಿಗೆ ಅಧಿಕಾರವಿದೆಯೇ ಎಂದು ಕರ್ನಾಟಕ ಸರ್ಕಾರ ಪ್ರಶ್ನಿಸಿತ್ತು.