ಕೃಷ್ಣಾಗೆ ರಿಲೀಫ್, ಧರಂ-ಕುಮಾರಸ್ವಾಮಿಗೆ 'ಗಣಿ' ಟ್ರಬಲ್
ಕಬ್ಬಿಣದ ಅದಿರು ಗಣಿಗಾರಿಕೆ ಪ್ರಕರಣದಲ್ಲಿ ವಿಶೇಷ ತನಿಖಾ ದಳಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಮತ್ತು ಎನ್ ಧರಂ ಸಿಂಗ್ ವಿರುದ್ಧ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಬೆಂಗಳೂರು, ಮಾರ್ಚ್ 29: ಕರ್ನಾಟಕ ಪೊಲೀಸರ ವಿಶೇಷ ತನಿಖಾ ದಳ (ಎಸ್ಐಟಿ) ಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಮತ್ತು ಎನ್ ಧರಂ ಸಿಂಗ್ ವಿರುದ್ಧ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಕಬ್ಬಿಣದ ಅದಿರು ಗಣಿಗಾರಿಕೆ ಪ್ರಕರಣದಲ್ಲಿ ಈ ಇಬ್ಬರು ಮಾಜಿ ಮುಖ್ಯಮಂತ್ರಿಗಳ ವಿರುದ್ಧದ ತನಿಖೆಗೆ ಈ ಹಿಂದೆ ಹೈಕೋರ್ಟ್ ತಡೆ ನೀಡಿತ್ತು. ಈ ತಡೆ ತೆರವುಗೊಳಿಸಿರುವು ಸರ್ವೋಚ್ಚ ನ್ಯಾಯಾಲಯ ತನಿಖೆ ಮುಂದುವರೆಸುವಂತೆ ಸೂಚನೆ ನೀಡಿದೆ. ಮಾತ್ರವಲ್ಲ ಈ ಕುರಿತು ಮುಂದೆ ಯಾವುದೇ ಆದೇಶ ನೀಡದಂತೆಯೂ ಹೈ ಕೋರ್ಟಿಗೆ ಸೂಚನೆ ನೀಡಿದೆ.[ಧರ್ಮ-ಕೃಷ್ಣ-ಸ್ವಾಮಿ ವಿರುದ್ಧ FIR ದಾಖಲೆ]
ಇನ್ನು ಮೂರು ತಿಂಗಳೊಳಗೆ ವರದಿ ನೀಡುವಂತೆ ಸುಪ್ರೀಂ ಕೋರ್ಟ್ 'ಎಸ್ಐಟಿ'ಗೆ ಸೂಚನೆ ನೀಡಿದೆ.[ಮಾಜಿ ಸಿಎಂಗಳ ವಿರುದ್ಧ ತನಿಖೆಗೆ ಕೋರ್ಟ್ ಅಸ್ತು]
ಇದೇ ವೇಳೆ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣರನ್ನು ತನಿಖೆಯಿಂದ ಕೋರ್ಟ್ ಹೊರಗಿಟ್ಟಿದೆ. ಇದರಿಂದ ಎಸ್ ಎಂ ಕೃಷ್ಣ ನಿರಾಳರಾಗಿದ್ದಾರೆ.[ಎಸ್ಸೆಂಕೃಷ್ಣ ಎಚ್ಡಿಕೆಗೆ ರಿಲೀಫ್, ಧರಂ ಸಿಂಗ್ ಇನ್ ಟ್ರಬಲ್]