ಅಪಘಾತದ ಗಾಯಾಳುವಿಗೆ ಆರೈಕೆ ನೀಡಿದ ಸದಾನಂದ ಗೌಡ
ಸೋಮವಾರ ಪೇಟೆಯಲ್ಲಿ ನಡೆಯಲಿದ್ದ ಆದಿ ಚುಂಚನಗಿರಿ ಮಠದ ಕಾರ್ಯಕ್ರಮವೊದರಲ್ಲಿ ಪಾಲ್ಗೊಳ್ಳಲು ಕಾರಿನಲ್ಲಿ ಆಗಮಿಸುತ್ತಿದ್ದ ಕೇಂದ್ರ ಸಚಿವ.
ಸೋಮವಾರ ಪೇಟೆ (ಕೊಡಗು), ಫೆಬ್ರವರಿ 27: ಕೇಂದ್ರ ಅಂಕಿ ಅಂಶ ಹಾಗೂ ಯೋಜನಾ ಅನುಷ್ಠಾನ ಇಲಾಖೆ ಸಚಿವ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರು, ಕೊಡಗಿನ ಶನಿವಾರ ಸಂತೆಯಲ್ಲಿ ಅಪಘಾತವೊಂದರಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರಿಗೆ ಆರೈಕೆ ಮಾಡಿ ಗಮನ ಸೆಳೆದರು.
ಸೋಮವಾರ ಪೇಟೆಯಲ್ಲಿರುವ ಆದಿ ಚುಂಚನಗಿರಿ ಮಠದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತಮ್ಮ ಕಾರಿನಲ್ಲಿ ಆಗಮಿಸುತ್ತಿದ್ದ ಸದಾನಂದ ಗೌಡರು, ಶನಿವಾರ ಸಂತೆಗೆ ಬರುವಷ್ಟರಲ್ಲಿ ಅಲ್ಲೊಂದು ಪುಟ್ಟ ಅಪಘಾತವಾಗಿತ್ತು. ಸಚಿವರು ಬರಬೇಕಿದ್ದ ರಸ್ತೆಯಲ್ಲಿ ಮುಂದೆ ಹೋಗುತ್ತಿದ್ದ ಕಾರೊಂದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಬಿದ್ದ ಬೈಕ್ ಸವಾರನೊಬ್ಬ ಗಾಯಗೊಂಡಿದ್ದ.[ಮೈತ್ರಿಯಾ- ಕಾರ್ತೀಕ್ ಗೌಡಗೆ ಸಂಧಾನ ಪಾಠ ಹೇಳಿದ ಹೈಕೋರ್ಟ್]
ಅಪಘಾತ ನಡೆದು ಕೆಲವೇ ನಿಮಿಷಗಳಲ್ಲಿ ಸಚಿವರ ಕಾರು ಅದೇ ಮಾರ್ಗವಾಗಿ ಎದುರು ದಿಕ್ಕಿನಿಂದ ಆಗಮಿಸಿತು. ಜನ ಜಮಾಯಿಸಿದ್ದನ್ನು ಗಮನಿಸಿದ ಗೌಡರು, ಏನೆಂದು ವಿಚಾರಿಸಿದರು. ಆಗ, ಬೈಕ್ ಸವಾರನು ಗಾಯಗೊಂಡಿದ್ದ ವಿಚಾರ ತಿಳಿಯಿತು.[ಮಡಿಕೇರಿ ರಾಜಾಸೀಟಿನಲ್ಲಿ ಅಭಿವೃದ್ಧಿ ಮರೀಚಿಕೆ!]
ತಕ್ಷಣ ಕಾರಿಳಿದು ಬಂದ ಅವರು, ಬೈಕ್ ಸವಾರನ್ನು ಸಂತೈಸಿದರಲ್ಲದೆ, ತಮ್ಮ ಕಾರಿನಲ್ಲಿದ್ದ ಪ್ರಥಮ ಚಿಕಿತ್ಸೆ ಕಿಟ್ ತರಿಸಿ ಆತನಿಗೆ ಪ್ರಥಮ ಚಿಕಿತ್ಸೆ ಕೊಡಿಸಿದರು. ಆನಂತರ, ಆತನಿಗೆ ಆಸ್ಪತ್ರೆಗೆ ಹೋಗುವಂತೆ ಸಲಹೆ ನೀಡಿದರು.[ಇಷ್ಟಾರ್ಥ ನೆರವೇರಲು ಶಿವರಾತ್ರಿ ಮರುದಿನ ಇರ್ಪು ಜಲಧಾರೆಯಲ್ಲಿ ಸ್ನಾನ!]
ಸಚಿವರ ಈ ಮಾನವೀಯತೆ ಹಾಗೂ ಔದಾರ್ಯ ಜನರ ಮೆಚ್ಚುಗೆ ಗಳಿಸಿತು.