ದ್ವಿತೀಯ ಪಿಯು ಪೂರಕ ಪರೀಕ್ಷೆ ವೇಳಾಪಟ್ಟಿ ಬದಲಾವಣೆ ಇಲ್ಲ
ಬೆಂಗಳೂರು, ಜೂನ್. 16: ಪಿಯು ಪೂರಕ ಪರೀಕ್ಷೆ ಮುಂದಕ್ಕೆ ಹಾಕಲು ಕ್ರಿಶ್ಚಿಯನ್ ಸಮುದಾಯದವರು ಸಲ್ಲಿಕೆ ಮಾಡಿದ್ದ ಮನವಿಯನ್ನು ಹೈಕೋರ್ಟ್ ವಜಾ ಮಾಡಿದೆ.
ಪ್ರೊಟೆಸ್ಟೆಂಟ್ ಕ್ರೈಸ್ತರು ಜುಲೈ 2 ಮತ್ತು 9ರಂದು ಸಬ್ಬತ್ ದಿನ ಆಚರಿಸುತ್ತಿರುವ ಕಾರಣ ಅಂದು ನಿಗದಿಯಾಗಿರುವ ದ್ವಿತೀಯ ಪಿಯುಸಿ ಅರ್ಥಶಾಸ್ತ್ರ ಮತ್ತು ಇತಿಹಾಸ ಪೂರಕ ಪರೀಕ್ಷೆ ಮುಂದಕ್ಕೆ ಹಾಕಬೇಕು ಎಂದು ಮನವಿ ಮಾಡಿಕೊಳ್ಳಲಾಗಿತ್ತು.[2ನೇ ಪಿಯುಸಿ ಫಲಿತಾಂಶ: ಯಾವ ಜಿಲ್ಲೆ ಯಾವ ಸ್ಥಾನ?]
ಸಬ್ಬತ್ ಆಚರಣೆ ಶ್ರಮಿಕರಿಗೆ ಮೀಸಲಾಗಿದೆ. ಅದು ವಿದ್ಯಾರ್ಥಿಗಳಿಗೆ ಅನ್ವಯಿಸುವುದಿಲ್ಲ. ವಾರದ ಆರು ದಿನ ಕೆಲಸ ಮಾಡುವವರು ಎಳನೇ ದಿನ ರಜೆ ಪಡೆದುಕೊಳ್ಳುವ ಸಂಪ್ರದಾಯವನ್ನು ವಿದ್ಯಾರ್ಥಿಗಳಿಗೆ ಹೇರಬೇಕಾದ ಅಥವಾ ವಿದ್ಯಾರ್ಥಿಗಳು ಅನುಸರಣೆ ಮಾಡಬೇಕಾದ ಅಗತ್ಯ ಇಲ್ಲ ಎಂದು ನ್ಯಾಯಾಲಯ ಹೇಳಿದೆ.[ಬಾಳೆಹಣ್ಣು ವ್ಯಾಪಾರಿ ಮಗಳು ರಾಜ್ಯಕ್ಕೆ ಪ್ರಥಮ]
ಸೆವೆಂತ್ ಡೇ ಆಫ್ ಅಡ್ವೆಂಟಿಸ್ಟ್ ಕ್ರೈಸ್ತರನ್ನು ಪ್ರತಿನಿಧಿಸುವ ಸೌತ್ ಸೆಂಟ್ರಲ್ ಇಂಡಿಯಾ ಯೂನಿಯನ್ ಆಫ್ ಕ್ರಿಶ್ಚಿಯನ್ಸ್ ಸಂಘಟನೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಅರವಿಂದ ಕುಮಾರ್ ಅವರ ಏಕಸದಸಯ ಪೀಠ ಬುಧವಾರ ವಜಾ ಮಾಡಿತು.[ಪಿಯು ಪ್ರಶ್ನೆ ಪ್ರತ್ರಿಕೆ ಸೋರಿಕೆಯಾಗಿದ್ದು ಹಾವೇರಿಯಲ್ಲಿ]
ದ್ವೀತಿಯ
ಪಿಯುಸಿ
ಪೂರಕ
ಪರೀಕ್ಷೆ
ವೇಳಾಪಟ್ಟಿ
*
ಜುಲೈ
1
:
ಸಮಾಜಶಾಸ್ತ್ರ,
ಲೆಕ್ಕಶಾಸ್ತ್ರ,
ಭೌತಶಾಸ್ತ್ರ
*
ಜುಲೈ
2:
ಅರ್ಥಶಾಶ್ತ್ರ,
ಗಣಿತ
*
ಜುಲೈ
4:
ಇಂಗ್ಲಿಷ್
*
ಜುಲೈ
5:
ಬಿಸಿನೆಸ್
ಸ್ಟಡೀಸ್,
ರಸಾಯನಶಾಸ್ತ್ರ,
ಶಿಕ್ಷಣ
*
ಜುಲೈ
7:
ಕನ್ನಡ,
ತಮಿಳು,
ತೆಲುಗು,
ಮಲಯಾಳಂ,
ಫ್ರೆಂಚ್
*
ಜುಲೈ
8:
ರಾಜ್ಯಶಾಸ್ತ್ರ,
ಸಂಖ್ಯಾಶಾಸ್ತ್ರ,
ಜೀವಶಾಶ್ತ್ರ
*
ಜುಲೈ
9:
ಇತಿಹಾಸ,
ಇಲೆಕ್ಟ್ರಾನಿಕ್ಸ್,
ಕಂಪ್ಯೂಟರ್
ಸೈನ್ಸ್
*ಜುಲೈ
11:
ಭೂಗೋಳಶಾಶ್ತ್ರ,
ಭೂಗರ್ಭಶಾಸ್ತ್ರ,
ಬೇಸಿಕ್
ಮ್ಯಾಥ್ಸ್
*
ಜುಲೈ
12:
ಹಿಂದಿ,
ಸಂಸ್ಕೃತ
*
ಜುಲೈ
13:
ಐಚ್ಛಿಕ
ಕನ್ನಡ