ಪಹಣಿಗಾಗಿ ರೈತರು ಇನ್ನು ತಹಶೀಲ್ದಾರ್ ಕಚೇರಿಗೆ ಅಲೆಯಬೇಕಿಲ್ಲ
ಬೆಂಗಳೂರು, ಆಗಸ್ಟ್ 9: ಇನ್ನುಮುಂದೆ ಮಹಣಿಗಾಗಿ ರೈತರು ತಹಶೀಲ್ದಾರ್ ಕಚೇರಿಗೆ ಅಲೆಯಬೇಕಿಲ್ಲ ಬದಲಾಗಿ ರೈತರ ಮನೆಗೇ ನೇರವಾಗಿ ಪಹಣಿ ಬರಲಿದೆ ಅದು ಹೇಗಂತೀರಾ..
ಆನ್ಲೈನ್ ಮೂಲಕ ಅಥವಾ ನೇರವಾಗಿ ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ ರೈತರು ಪಹಣಿ ಶುಲ್ಕದ ಜತೆ ಅಂಚೆ ವೆಚ್ಚ ಪಾವತಿಸಿದರೆ ಅಧಿಕೃತ ವಿಳಾಸಕ್ಕೆ ಬಂದು ತಲುಪಲಿದೆ.
ಆಗಸ್ಟ್ 10ರಿಂದ ಸಿಎಂ ರಾಜ್ಯ ಪ್ರವಾಸ, ಇಸ್ರೇಲ್ ಮಾದರಿ ಕೃಷಿಗೆ ಚಾಲನೆ
ಕಂದಾಯ ಇಲಾಖೆಯು ಇಂಥದ್ದೊಂದು ಯೋಜನೆಯನ್ನು ಜಾರಿಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅಂಚೆ ಮೂಲಕ ಪಹಣಿ ಪತ್ರ ತಲುಪಿಸುವ ವ್ಯವಸ್ಥೆ ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಪರಿಚಯಿಸಲಾಗುತ್ತಿದೆ. ರೈತರು ಮ್ಯುಟೇಶನ್ ಆಧರಿತ ಪಹಣಿ ಪತ್ರ ಬೇಕೆಂದು ಸಲ್ಲಿಸುವ ಅರ್ಜಿ ಜತೆಗೆ ವೆಚ್ಚ ಪಾವತಿಸಿದರೆ ಪಹಣಿ ಪತ್ರದಲ್ಲಿ ದಾಖಲಾದ ವಿಳಾಸ ಆಧರಿಸಿ ಪಹಣಿ ಮನೆಗೆ ಬಂದು ತಲುಪಲಿದೆ.
ಪಹಣಿ ಪತ್ರದ ವೆಚ್ಚ 15 ರೂ. ಜತೆಗೆ ರಿಜಿಸ್ಟರ್ಡ್ ಅಂಚೆ ವೆಚ್ಚ 20 ರೂ. ಸೇರಿ ಒಟ್ಟು 35 ರೂ. ಪಾವತಿಸಿದರೆ ರಿಜಿಸ್ಟರ್ಡ್ ಅಂಚೆ ಮೂಲಕ ಪಹಣಿ ಪಡೆಯಬಹುದಾಗಿದೆ. ಇದರಿಂದ ರೈತರು ಪದೇ ಪದೇ ತಹಸೀಲ್ದಾರ್ ಕಚೇರಿಗೆ ಅಲೆಯುವುದು ತಪ್ಪಲಿದೆ.