ಎಲ್ಲಾ ಹಳ್ಳಿಗಳಿಗೂ ಸಮರ್ಪಕ ಕುಡಿಯುವ ನೀರು ಕಲ್ಪಿಸಲು ಸಿಎಂರಿಂದ ಯೋಜನೆ : ಪುಟ್ಟರಾಜು
ಬೆಂಗಳೂರು,
ನವೆಂಬರ್
14:
ಕುಡಿಯುವ
ನೀರಿನ
ಕೊರತೆ
ನೀಗಿಸಲು
ಬ್ಯಾರೇಜ್
ಮತ್ತು
ಅಣೆಕಟ್ಟುಗಳನ್ನು
ನಿರ್ಮಿಸಲು
ರಾಜ್ಯ
ಸರ್ಕಾರ
ತೀರ್ಮಾನಿಸಿದೆ.
ಈ
ಯೋಜನೆ
ಅನುಷ್ಠಾನಕ್ಕೆ
3,000
ಕೋಟಿ
ರೂ.
ಅಗತ್ಯವಿದ್ದು,
ಹಣಕಾಸು
ಇಲಾಖೆ
ಹೊಣೆ
ಹೊತ್ತಿರುವ
ಎಚ್.ಡಿ.
ಕುಮಾರಸ್ವಾಮಿ
ಅವರಿಗೆ
ಪ್ರಸ್ತಾವನೆ
ಸಲ್ಲಿಸಲಾಗಿದೆ
ಎಂದು
ಸಣ್ಣ
ನೀರಾವರಿ
ಸಚಿವ
ಪುಟ್ಟರಾಜು
ಅವರು
ಹೇಳಿದ್ದಾರೆ.
ಸುದ್ದಿಗಾರರ
ಜತೆ
ಮಾತನಾಡಿದ
ಅವರು,
ನದಿ
ಪಾತ್ರ
ಹಾಗೂ
ಮಳೆಯಿಂದ
ಹರಿಯುವ
ನೀರನ್ನು
ಸಂಗ್ರಹಿಸಲು
ಬ್ಯಾರೇಜ್
ಮತ್ತು
ಸಣ್ಣ
ಪ್ರಮಾಣದ
ಅಣೆಕಟ್ಟುಗಳನ್ನು
ನಿರ್ಮಿಸಲಾಗುವುದು
ಎಂದು
ಹೇಳಿದರು.
ಇಸ್ರೇಲ್ ಕೃಷಿ ಪದ್ಧತಿ ಬಗ್ಗೆ ರೈತರಿಗೆ ಸಿಎಂ ಎಚ್ಡಿಕೆರಿಂದ ಪಾಠ
ಗ್ರಾಮೀಣ
ಭಾಗದಲ್ಲಿ
ಕುಡಿಯುವ
ನೀರಿನ
ಕೊರತೆ
ಅಗಾಧವಾಗಿದೆ.
ರಾಜ್ಯದ
ಎಲ್ಲಾ
ಹಳ್ಳಿಗಳಿಗೂ
ಸಮರ್ಪಕ
ಕುಡಿಯುವ
ನೀರು
ಕಲ್ಪಿಸಲು
ಮುಖ್ಯಮಂತ್ರಿಯವರು
ತೀರ್ಮಾನಿಸಿದ್ದಾರೆ.
ಈ
ಹಿನ್ನೆಲೆಯಲ್ಲೇ
ಈಗಾಗಲೇ
ಯೋಜನೆ
ರೂಪಿತವಾಗಿದ್ದು,
ಬಹುಗ್ರಾಮಗಳಿಗೆ
ಅನುಕೂಲ
ವಾಗುವಂತೆ
ಅಣೆಕಟ್ಟುಗಳನ್ನು
ಹಾಗೂ
ಬ್ಯಾರೇಜ್
ಗಳನ್ನು
ನಿರ್ಮಿಸಲಾಗುವುದು.
ಕುಡಿಯುವ
ನೀರಿನ
ಯೋಜನೆಗಳಿಗೆ
ಕೇಂದ್ರದ
ಅನುದಾನ
ದೊರೆಯಲಿದ್ದು,
ಅದನ್ನೂ
ಬಳಕೆ
ಮಾಡಿಕೊಂಡು
ಕಾರ್ಯ
ರೂಪಕ್ಕೆ
ತರಲಾಗುವುದು.
ಮುಂಗಡ ಪತ್ರದಲ್ಲಿ ಸಣ್ಣ ನೀರಾವರಿ ಇಲಾಖೆಗೆ ಎರಡು ಸಾವಿರ ಕೋಟಿ ರೂ.ಗಳಷ್ಟು ಅನುದಾನ ನೀಡಿದ್ದು, ಈಗ ರಾಜ್ಯಾದ್ಯಂತ ಅಂತರ್ಜಲ ಹೆಚ್ಚಳಕ್ಕೆ ಅನುಕೂಲವಾಗುವಂತೆ ನೀರು ಸಂಗ್ರಹಿಸಲು ಅಣೆಕಟ್ಟುಗಳು ಮತ್ತು ಬ್ಯಾರೇಜುಗಳನ್ನು ನಿರ್ಮಿಸಬೇಕಾದ ಅಗತ್ಯವಿದೆ ಎಂದರು.
ಕೆರೆ ಸಂಜೀವಿನಿ ಕಾರ್ಯಕ್ರಮದಡಿ ಕ್ರಮ
ಹೀಗಾಗಿ ಈಗಾಗಲೇ ಕೆರೆಗಳ ಅಭಿವೃದ್ಧಿಗೆ ಒದಗಿಸಿರುವ ಎರಡು ಸಾವಿರ ಕೋಟಿ ರೂ.ಗಳ ಜತೆ ಹೆಚ್ಚುವರಿಯಾಗಿ ಮೂರು ಸಾವಿರ ಕೋಟಿ ರೂ. ಒದಗಿಸುವಂತೆ, ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ 3600 ಕೆರೆಗಳಿದ್ದು ಇವುಗಳಲ್ಲಿರುವ ಹೂಳನ್ನೆತ್ತಲು ಕೆರೆ ಸಂಜೀವಿನಿ ಕಾರ್ಯಕ್ರಮದಡಿ ಕ್ರಮ ಕೈಗೊಳ್ಳಲಾಗಿದೆ. ಹಾಗೆಯೇ ಇದಕ್ಕೆ ಪೂರ್ವಭಾವಿಯಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕೆರೆ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ
ಎಲ್ಲಾ
ಜಿಲ್ಲಾಧಿಕಾರಿಗಳಿಗೂ
ಆದೇಶ
ನೀಡಿ
ಆಯಾ
ಜಿಲ್ಲೆಯ
ವ್ಯಾಪ್ತಿಯಲ್ಲಿರುವ
ಕೆರೆಗಳ
ವ್ಯಾಪ್ತಿ,
ಅಚ್ಚುಕಟ್ಟು
ಪ್ರದೇಶವನ್ನು
ಗುರುತಿಸಿ,
ಒತ್ತುವರಿಯಾಗಿದ್ದರೆ
ತೆರವು
ಮಾಡಿಸಲು
ಹೇಳಲಾಗಿದೆ.
ಕೆರೆ
ಸಹಕಾರ
ಸಂಘಗಳನ್ನು
ಸಕ್ರಿಯಗೊಳಿಸುವ
ಕಾರ್ಯ
ನಡೆದಿದ್ದು,
ಒಂದು
ವೇಳೆ
ನಿಮ್ಮ
ವ್ಯಾಪ್ತಿಯಲ್ಲಿ
ಯಾವುದಾದರೂ
ಕೆರೆ
ಭೂಮಿ
ಒತ್ತುವರಿಯಾಗಿದ್ದರೆ,
ಕಲ್ಮಶಗೊಳಿಸುವ
ಕೆಲಸ
ನಡೆದಿದ್ದರೆ
ತಕ್ಷಣ
ಮಾಹಿತಿ
ನೀಡುವಂತೆ
ಅವುಗಳಿಗೆ
ಸೂಚಿಸಲಾಗಿದೆ
ಎಂದು
ನೀರಾವರಿ
ಸಚಿವ
ಸಿಎಸ್
ಪುಟ್ಟರಾಜು
ಹೇಳಿದರು.
ಒತ್ತುವರಿ ಭೂಮಿ, ಯಾವ ಮುಲಾಜೂ ಇಲ್ಲದೆ ಸ್ವಾಧೀನ
ಇಂತಹ ನಿರ್ವಹಣೆಗಾಗಿಯೇ ಪ್ರತಿ ಕೆರೆ ಸಹಕಾರ ಸಂಘಗಳಿಗೆ ಐದರಿಂದ ಹತ್ತು ಕೋಟಿ ರೂ.ಗಳನ್ನು ಒದಗಿಸಲಾಗಿದ್ದು ಒಟ್ಟಾರೆ ಎಂಟು ಕೋಟಿ ರೂ.ಗಳನ್ನು ಬಿಡುಗಡೆ ಮಾಡಿರುವುದಾಗಿ ಅವರು ವಿವರ ನೀಡಿದರು. ಕೆರೆ ಒತ್ತುವರಿ ಸಂಬಂಧ ಈಗಾಗಲೇ ಕೆ.ಬಿ.ಕೋಳಿವಾಡ ಅಧ್ಯಕ್ಷತೆಯ ಸಮಿತಿ ನೀಡಿದ ವರದಿಯಲ್ಲಿದೆ. ಎ.ಟಿ ರಾಮಸ್ವಾಮಿ ಸಮಿತಿ ನೀಡಿದ್ದ ವರದಿಯನ್ನೂ ಮುಂದಿಟ್ಟುಕೊಂಡು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಮೂರು ಸುತ್ತಿನ ಸಭೆಗಳನ್ನು ನಡೆಸಲಾಗಿದೆ.
ಕೆರೆ
ಭೂಮಿಯ
ಒತ್ತುವರಿ
ತೆರವು
ಕಾರ್ಯ
ಆರಂಭವಾಗಲಿದ್ದು,
ಅಭಿವೃದ್ಧಿ
ಯೋಜನೆಗಳಿಗಾಗಿ
ಸರ್ಕಾರ
ಮಂಜೂರು
ಮಾಡಿದ
ಜಾಗವನ್ನು
ಹೊರತುಪಡಿಸಿ
ಸ್ವಂತಕ್ಕೆ
ಕೆರೆ
ಭೂಮಿಯನ್ನು
ಒತ್ತುವರಿ
ಮಾಡಿರುವ
ಪ್ರಭಾವಿಗಳ
ಕೈಲಿರುವ
ಭೂಮಿಯನ್ನು
ಯಾವ
ಮುಲಾಜೂ
ಇಲ್ಲದೆ
ಸ್ವಾಧೀನಪಡಿಸಿಕೊಳ್ಳಲಾಗುವುದು
ಎಂದರು.
ಜಲ ಸಂವರ್ಧನ ಯೋಜನೆಯಡಿ ನೆರವು
ಈ
ಮಧ್ಯೆ
ನಗರ
ಸ್ಥಳೀಯ
ಸಂಸ್ಥೆಗಳ
ವ್ಯಾಪ್ತಿಯಲ್ಲಿರುವ
ಕೆರೆಗಳನ್ನು
ಅಭಿವೃದ್ಧಿ
ಪಡಿಸುವಂತೆ
ಆಯಾ
ನಗರ
ಸ್ಥಳೀಯ
ಸಂಸ್ಥೆಗಳಿಗೆ
ಸೂಚನೆ
ನೀಡಿದ್ದು
ಉಳಿದಂತೆ
ಸಣ್ಣ
ನೀರಾವರಿ
ಇಲಾಖೆಯೇ
ಕೆರೆ
ಅಭಿವೃದ್ಧಿ
ಪ್ರಾಧಿಕಾರ
ಮತ್ತು
ಕೆರೆ
ಸಹಕಾರ
ಸಂಘಗಳ
ನೆರವಿನಿಂದ
ಕೆರೆಗಳನ್ನು
ಅಭಿವೃದ್ಧಿಪಡಿಸಲಿದೆ
ಎಂದು
ವಿವರಿಸಿದರು.
ಈ ಹಿಂದೆ ಜಲ ಸಂವರ್ಧನ ಯೋಜನೆಯಡಿಯಲ್ಲಿ ಕೆರೆಗಳ ಹೂಳೆತ್ತಲು ವಿಶ್ವಬ್ಯಾಂಕ್ ನೆರವಿನಡಿ ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಹಣ ಪಡೆಯಲಾಗಿತ್ತು. ಆದರೆ, ಆ ಹಣ ಸಮರ್ಪಕವಾಗಿ ಬಳಕೆಯಾಗಿಲ್ಲ ಎಂಬ ದೂರುಗಳಿದ್ದು ಈ ಬಗ್ಗೆ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.