ಲಾಕ್ ಡೌನ್; ವಲಸೆ ಕಾರ್ಮಿಕರ ನೋಂದಣಿಗೆ ಆಹ್ವಾನ
ಬೆಂಗಳೂರು, ಜೂನ್ 14 : ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಇದರ ಪರಿಣಾಮ ರಾಜ್ಯ, ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ವಲಸೆ ಕಾರ್ಮಿಕರು/ಉದ್ಯೋಗಿಗಳ ರಾಜ್ಯಕ್ಕೆ ವಾಪಸ್ ಆಗಿದ್ದಾರೆ.
Recommended Video
ಕರ್ನಾಟಕಕ್ಕೆ ವಲಸೆ ಬಂದಿರುವ ಕಾರ್ಮಿಕರು/ಉದ್ಯೋಗಿಗಳಿಗೆ ಅವರ ವಿದ್ಯಾರ್ಹತೆ ಮತ್ತು ಅನುಭವದ ಆಧಾರದ ಮೇಲೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಉದ್ಯೋಗ ಮತ್ತು ತರಬೇತಿ ನೀಡಲಾಗುವುದು.
ಕಾರ್ಮಿಕರಿಗೆ 10 ಗಂಟೆ ಕೆಲಸ; ಆದೇಶ ವಾಪಸ್ ಪಡೆದ ಸರ್ಕಾರ
ಆಸಕ್ತಿಯುಳ್ಳ ರಾಜ್ಯ, ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ವಲಸೆ ಕಾರ್ಮಿಕರು/ಉದ್ಯೋಗಿಗಳು ವೆಬ್ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಲಾಕ್ ಡೌನ್; 1,400 ಉದ್ಯೋಗ ಕಡಿತ ಓಲಾ ಘೋಷಣೆ
ಲಾಕ್ ಡೌನ್ ಘೋಷಣೆಯಾದ ಬಳಿಕ ವಿವಿಧ ವಲಯಗಳ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಬೇರೆ ರಾಜ್ಯ/ದೇಶದಲ್ಲಿ ಕೆಲಸ ಮಾಡುತ್ತಿದ್ದವರು ಕರ್ನಾಟಕಕ್ಕೆ ವಾಪಸ್ ಆಗಿದ್ದಾರೆ.
ಲಾಕ್ಡೌನ್ನಲ್ಲಿ ಕೆಲಸ ಕಳೆದುಕೊಂಡ ವಲಸೆ ಕಾರ್ಮಿಕ ಆತ್ಮಹತ್ಯೆ
ರಾಜ್ಯಕ್ಕೆ ವಾಪಸ್ ಆದವರಿಗೆ ಉದ್ಯೋಗ ಮತ್ತು ತರಬೇತಿ ನೀಡಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಆಸಕ್ತಿ ಹೊಂದಿರುವವರು ಹೆಸರು ನೋಂದಣಿ ಮಾಡಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.
ಇಂತಹ ನೋಂದಣಿಯಿಂದಾಗಿ ಎಷ್ಟು ಜನರು ವಾಪಸ್ ಆಗಿದ್ದಾರೆ? ಎಂಬ ಅಂಕಿ ಅಂಶಗಳು ಸರ್ಕಾರಕ್ಕೆ ಸಿಗಲಿದೆ. ರಾಜ್ಯಕ್ಕೆ ವಾಪಸ್ ಆದವರು ಕೆಲಸವಿಲ್ಲದೇ ಇಲ್ಲಿ ಪರದಾಡುವುದು ತಪ್ಪಲಿದೆ.
ಆಸಕ್ತರು ನೋಂದಣಿ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ