ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಬರೀಶ್ ಅಂತಿಮ ಸಂಸ್ಕಾರದಲ್ಲೂ ಡಿ ಕೆ ಶಿವಕುಮಾರ್ ಟ್ರಬಲ್ ಶೂಟರ್

|
Google Oneindia Kannada News

Recommended Video

Ambareesh : ಅಂಬರೀಷ್ ಅಂತ್ಯಕ್ರಿಯೆಯಲ್ಲೂ ಡಿ ಕೆ ಶಿವಕುಮಾರ್ ಟ್ರಬಲ್ ಶೂಟರ್ | Oneindia Kannada

ಸ್ನೇಹಜೀವಿ ಅಂಬರೀಶ್ ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ಕಂಠೀರವ ಸ್ಟುಡಿಯೋದಲ್ಲಿ ಸೋಮವಾರ (ನ 26) ಸಂಜೆ ನಡೆಯಿತು. ಪುರೋಹಿತ ನಾಗರಾಜ್ ದೀಕ್ಷಿತ್ ನೇತೃತ್ವದಲ್ಲಿ ನಡೆದ ಅಂತಿಮ ಸಂಸ್ಕಾರ ಹಿಂದೂ, ಒಕ್ಕಲಿಗ ಸಂಪ್ರದಾಯದಂತೆ ಸಂಪನ್ನಗೊಂಡಿತು.

ಕಂಠೀರವ ಸ್ಟುಡಿಯೋದಲ್ಲಿ ನಡೆದ ಅಂತಿಮ ಸಂಸ್ಕಾರದ ವೇಳೆ, ರಾಜ್ಯದ ಜಲಸಂಪನ್ಮೂಲ ಖಾತೆಯ ಸಚಿವ ಡಿ ಕೆ ಶಿವಕುಮಾರ್, ಮೈಕ್ ಹಿಡಿದುಕೊಂಡು, ಓಡಾಡುತ್ತಾ ಪರಿಸ್ಥಿತಿಯನ್ನು ನಿಯಂತ್ರಿಸುತ್ತಿದ್ದದ್ದು ಗಮನಿಸಬೇಕಾದ ವಿಚಾರ.

ಹಲವಾರು ಬಾರಿ, ಕರ್ನಾಟಕ ಕಾಂಗ್ರೆಸ್ಸಿಗೆ ಟ್ರಬಲ್ ಶೂಟರ್ ಆಗಿ ಕೆಲಸ ಮಾಡಿದ್ದ ಡಿಕೆಶಿ, ಸೂತಕದ ವಾತಾವರಣದಲ್ಲೂ, ಅಭಿಮಾನಿಗಳ ಮೆಚ್ಚಿನ 'ಜಲೀಲ'ನ ಅಂತ್ಯ ಸಂಸ್ಕಾರ ಕೆಲಸಗಳು ಕ್ರಮ ಬದ್ದವಾಗಿ ನಡೆಯುವಂತೆ ಮುತುವರ್ಜಿ ವಹಿಸಿಕೊಂಡಿದ್ದು, ಎಲ್ಲರ ಗಮನ ಸೆಳೆಯಿತು.

ಪಕ್ಷಬೇಧ ಮೆರೆತು ಅಂಬರೀಶ್ ಅವರ ಅಂತ್ಯಕ್ರಿಯೆಗೆ ಹೆಚ್ಚಿನ ರಾಜಕೀಯ ಮುಖಂಡರು ಆಗಮಿಸಿದ್ದರು. ಖುತ್ವಿಜರು ವಿಷ್ಣುಸಹಸ್ರನಾಮ ಪಠಣ ಮಾಡುತ್ತಿದ್ದರು. ಕಂಠೀರವ ಸ್ಟುಡಿಯೋಗೆ ಬಂದವರೆಲ್ಲಾ, ಅಂಬಿಯವರ ಚಿತೆಗೆ ಗಂಧದ ಕೋಡು, ತುಪ್ಪ ಮತ್ತು ಕರ್ಪೂರವನ್ನು ಇಡುತ್ತಿದ್ದರು.

ಮುಖ್ಯಮಂತ್ರಿಗಳ ಉಸ್ತುವಾರಿಯಲ್ಲಿ ಅಂಬರೀಶ್ ಅಂತ್ಯಕ್ರಿಯೆ ಮುಖ್ಯಮಂತ್ರಿಗಳ ಉಸ್ತುವಾರಿಯಲ್ಲಿ ಅಂಬರೀಶ್ ಅಂತ್ಯಕ್ರಿಯೆ

ಚಿತ್ರನಟ ಯಶ್, ನಿರ್ಮಾಪಕರಾದ ರಾಕ್ಲೈನ್ ವೆಂಕಟೇಶ್, ಮುನಿರತ್ನಂ ನಾಯ್ಡು ಮುಂತಾದವರು, ಅಂಬಿ ಕುಟುಂಬದ ಬೆನ್ನಿಗೆ ನಿಂತು, ಮೂರು ದಿನದಿಂದ, ಆಗಬೇಕಾಗಿರುವ ಕೆಲಸದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಇವರ ಜೊತೆಗೆ, ಅಂತಿಮ ಸಂಸ್ಕಾರದ ದಿನದಂದು, ಡಿಕೆಶಿ ಕೂಡಾ ಅವರ ಜೊತೆ ಕೈಜೋಡಿಸಿದ್ದು, ವೇದಿಕೆ ಎಂತದ್ದೇ ಇರಲಿ, ಲೀಡರ್ಶಿಪ್ ವಹಿಸಿಕೊಳ್ಳಲು ಸಿದ್ದ ಎಂದು ಸಾರುವಂತಿತ್ತು. ಮುಂದೆ ಓದಿ..

ಇಕ್ಕೆಲಗಳಲ್ಲಿ ಭಾರೀ ಜನಸ್ತೋಮ

ಇಕ್ಕೆಲಗಳಲ್ಲಿ ಭಾರೀ ಜನಸ್ತೋಮ

ಅಂತ್ಯಕ್ರಿಯ ನಡೆಯುವ ಸ್ಥಳಕ್ಕೆ ಡಿಕೆಶಿ ಆಗಮಿಸಿದಾಗಲೇ, ಸಾಕಷ್ಟು ರಾಜಕೀಯ ಮುಖಂಡರು, ಚಿತ್ರೋದ್ಯಮದವರು ಹಾಜರಿದ್ದರು. ಆ ವೇಳೆಗೆ, ಅಂಬಿಯವರ ಪಾರ್ಥಿವ ಶರೀರ ಹೊತ್ತ ಅಂತಿಮ ಯಾತ್ರೆ, ಬೆಂಗಳೂರಿನ ಗುರುಗುಂಟೆಪಾಳ್ಯದಿಂದ, ಕಂಠೀರವ ಸ್ಟುಡಿಯೋ ಕಡೆಗೆ ಬರುತ್ತಿತ್ತು. ಇಕ್ಕೆಲಗಳಲ್ಲಿ ಭಾರೀ ಜನಸ್ತೋಮ ನೆರೆದಿದ್ದರಿಂದ, ಅಂತಿಮಯಾತ್ರೆ ಸ್ಥಳಕ್ಕೆ ತಲುಪುವುದು ಕೊಂಚ ವಿಳಂಬವಾಯಿತು.

ಅಂಬರೀಶ್ ನಿಧನ: ಕುಮಾರಸ್ವಾಮಿ ಎದುರಿಸುತ್ತಿರುವ 2ನೇ ಅತ್ಯಂತ ಕಠಿಣ ಸವಾಲು ಅಂಬರೀಶ್ ನಿಧನ: ಕುಮಾರಸ್ವಾಮಿ ಎದುರಿಸುತ್ತಿರುವ 2ನೇ ಅತ್ಯಂತ ಕಠಿಣ ಸವಾಲು

ಪರಮೇಶ್ವರ್ ಕಡೆಯಿಂದ ಡಿಸಿಪಿಗೆ ಫೋನ್

ಪರಮೇಶ್ವರ್ ಕಡೆಯಿಂದ ಡಿಸಿಪಿಗೆ ಫೋನ್

ಉಪಮುಖ್ಯಮಂತ್ರಿ, ಗೃಹಸಚಿವರೂ ಆಗಿರುವ ಪರಮೇಶ್ವರ್ ಕಡೆಯಿಂದ ಡಿಸಿಪಿಗೆ ಫೋನ್ ಮಾಡಿಸಿ, ಅಂತಿಮಯಾತ್ರೆಯ ಅಪ್ಡೇಟ್ ಪಡೆದುಕೊಳ್ಳುತ್ತಿದ್ದ ಡಿಕೆಶಿ, ಒಬ್ಬರಹಿಂದೆ ಒಬ್ಬರು ಬರುತ್ತಿದ್ದವರನ್ನು ಆಸನದ ವ್ಯವಸ್ಥೆ ಮಾಡಿದ್ದ ಕಡೆ, ಕಳುಹಿಸುತ್ತಿದ್ದರು. ದೇವೇಗೌಡ, ಆದಿಚುಂಚನಗಿರಿ ಶ್ರೀಗಳು ಬಂದಾಗ, ಖುದ್ದಾಗಿ ಅವರ ಬಳಿಗೆ ಹೋಗಿ, ಅವರನ್ನು ಕರೆದುಕೊಂಡು ಬಂದು, ಚಿತೆಗೆ ಗಂಧದ ಕಟ್ಟಿಗೆಯನ್ನು ಅವರ ಕೈಯಿಂದ ಇರಿಸಿದರು.

ಅಂಬಿ ಆಯುಷ್ಯದ ಬಗ್ಗೆ ಎಚ್ಚರಿಸಿದ್ದ ಜ್ಯೋತಿಷಿ ಅಮ್ಮಣ್ಣಾಯರ ಸಂದರ್ಶನ ಅಂಬಿ ಆಯುಷ್ಯದ ಬಗ್ಗೆ ಎಚ್ಚರಿಸಿದ್ದ ಜ್ಯೋತಿಷಿ ಅಮ್ಮಣ್ಣಾಯರ ಸಂದರ್ಶನ

ಕುಮಾರಸ್ವಾಮಿ ಎಲ್ಲಾ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು

ಕುಮಾರಸ್ವಾಮಿ ಎಲ್ಲಾ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು

ಎಲ್ಲಾ ಶಿಷ್ಟಾಚಾರಗಳನ್ನು ಬದಿಗೊತ್ತಿ, ಅಂಬರೀಶ್ ನಿಧನದಿಂದ, ಅಂತ್ಯಕ್ರಿಯೆಯವರೆಗೆ ಕುಮಾರಸ್ವಾಮಿ ಎಲ್ಲಾ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಇವರೆಗೆ, ಅಂತಿಮ ಸಂಸ್ಕಾರದ ದಿನದಂದು, ಡಿ ಕೆ ಶಿವಕುಮಾರ್ ಸಾಥ್ ಕೊಟ್ಟರು. ಮೈಕ್ ಹಿಡಿದುಕೊಂಡು ಪುರೋಹಿತರಿಂದ ಹಿಡಿದು, ಅಭಿಮಾನಿಗಳವರೆಗೆ ಎಲ್ಲರಿಗೂ ಸೂಚನೆ ನೀಡುತ್ತಿದ್ದರು.

ಪಂಚಭೂತಗಳಲ್ಲಿ ಅಂಬಿ ಲೀನ: ಶಾಂತಿ ಕದಡದಂತೆ ನೋಡಿ ಕೊಂಡ ಬೆಂಗಳೂರು ಪೊಲೀಸರಿಗೆ ಧನ್ಯವಾದಪಂಚಭೂತಗಳಲ್ಲಿ ಅಂಬಿ ಲೀನ: ಶಾಂತಿ ಕದಡದಂತೆ ನೋಡಿ ಕೊಂಡ ಬೆಂಗಳೂರು ಪೊಲೀಸರಿಗೆ ಧನ್ಯವಾದ

ಸಮಯ ಸಂದರ್ಭ ಅನ್ನೋದು ಇಲ್ವೇನ್ರೀ

ಸಮಯ ಸಂದರ್ಭ ಅನ್ನೋದು ಇಲ್ವೇನ್ರೀ

ಒಂದು ಹಂತದಲ್ಲಿ ಅಭಿಮಾನಿಗಳನ್ನೂ ತರಾಟೆಗೂ ತೆಗೆದುಕೊಂಡು, ' ಸಮಯ ಸಂದರ್ಭ ಅನ್ನೋದು ಇಲ್ವೇನ್ರೀ... ಊರೆಲ್ಲಾ ನೋಡುತ್ತಿದ್ದಾರೆಂದು ಗೊತ್ತಾಗಲ್ವಾ' ಎಂದು ಡಿಕೆಶಿ ಗದರಿದರು. ಕಂಠೀರವ ಸ್ಟುಡಿಯೋದ ಒಳಾವರಣದ ಸಾಮರ್ಥ್ಯ ಮುಗಿದ ನಂತರ, ಗೇಟ್ ಬಂದ್ ಮಾಡಲಾಗಿತ್ತು. ಅಭಿಮಾನಿಗಳು ಒಳಗೆ ಬಿಡಿ ಎಂದು ಆಗ್ರಹಿಸುತ್ತಿದ್ದರು. ಅದಕ್ಕಾಗಿ, ಅಭಿಮಾನಿಗಳ ಮೇಲೆ ಒಂದು ನಿಮಿಷ ಡಿಕೆಶಿ ರೇಗಿದ್ದರು.

ಅಂಬರೀಶ್ ಅಂತಿಮ ಸಂಸ್ಕಾರದಲ್ಲೂ ಡಿಕೆಶಿ ಟ್ರಬಲ್ ಶೂಟರ್

ಅಂಬರೀಶ್ ಅಂತಿಮ ಸಂಸ್ಕಾರದಲ್ಲೂ ಡಿಕೆಶಿ ಟ್ರಬಲ್ ಶೂಟರ್

ಅಂತ್ಯಕ್ರಿಯೆ ಆರಂಭವಾಗುವುದಕ್ಕೂ ಮುನ್ನ, ಸುಮಲತಾ ಮತ್ತು ಮತ್ತೋರ್ವ ಕುಟುಂಬದ ಸದಸ್ಯೆ ಕುಸಿದು ಬಿದ್ದಾಗ, ' ಯಾರಲ್ಲಿ, ಕುಟುಂಬದ ಸದಸ್ಯರು, ಸರಕಾರೀ ವೈದ್ಯರು ಕೂಡಲೇ ಬನ್ನಿ' ಮೈಕಿನಲ್ಲಿ ಮನವಿ ಮಾಡಿದರು. ಅಭಿಮಾನಿಗಳಲ್ಲಿ ಮನವಿ ಮಾಡುತ್ತಲೇ ಇದ್ದ ಡಿ ಕೆ ಶಿವಕುಮಾರ್, ಅಂತ್ಯ ಸಂಸ್ಕಾರದ ಸ್ಥಳದ ಸುತ್ತಮುತ್ತ, ಮೈಕ್ ಹಿಡಿದುಕೊಂಡು, ಓಡಾಡುತ್ತಲೇ ಅಂತಿಮ ಸಂಸ್ಕಾರದ ವಿಧಿವಿಧಾನ ಸಾಂಗ ನಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಒಟ್ಟಿನಲ್ಲಿ, ಅಂಬರೀಶ್ ಅಂತಿಮ ಸಂಸ್ಕಾರದಲ್ಲೂ ಡಿ ಕೆ ಶಿವಕುಮಾರ್ ಟ್ರಬಲ್ ಶೂಟರ್ ರೀತಿ ಕೆಲಸ ನಿರ್ವಹಿಸಿದರು.

English summary
Actor turned politician and former Union Minister Ambareesh funeral concluded peacefully on Nov 26. Karnataka Minister and known also as Trouble Shooter, DK Shivakumar controlling the entire event very well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X