ರಾಜ್ಯದ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಆಯ್ಕೆಗೆ ಕಾರಣಗಳೇನು?
ಬೆಂಗಳೂರು, ಜುಲೈ 27: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ.
ಇಂದು ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಬಸ್ವರಾಜ ಬೊಮ್ಮಾಯಿಯನ್ನು ಆಯ್ಕೆ ಮಾಡಲಾಗಿದೆ.
Breaking News: ಬಿಜೆಪಿ ಶಾಸಕಾಂಗ ಸಭೆಯಲ್ಲಿ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಆಯ್ಕೆ
ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಆರ್.ಬೊಮ್ಮಾಯಿಯವರ ಪುತ್ರನಾಗಿರುವ ಅವರು, ಜನತಾದಳದಿಂದ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಜವಾಬ್ಧಾರಿ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಜತೆಗೆ 2008ರಿಂದ ಸತತ ಮೂರು ಬಾರಿ ಶಿಗ್ಗಾಂವ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದು, ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ ಮತ್ತು ಜಗದೀಶ ಶೆಟ್ಟರ ಸಿಎಂ ಆಗಿದ್ದ ವೇಳೆ ಐದು ವರ್ಷ ಜಲಸಂಪನ್ಮೂಲ ಖಾತೆ ನಿರ್ವಹಣೆ ಮಾಡಿದ ಅನುಭವ ಹೊಂದಿದ್ದಾರೆ.
ಅಷ್ಟೇ
ಅಲ್ಲದೆ
ಗೃಹ,
ಕಾನೂನು
ಮತ್ತು
ಸಂಸದೀಯ
ವ್ಯವಹಾರ,
ಶಾಸನ
ರಚನಾ
ಸಚಿವ
ಹಾಗೂ
ಹಾವೇರಿ
ಹಾಗೂ
ಉಡುಪಿ
ಜಿಲ್ಲಾ
ಉಸ್ತುವಾರಿ
ಸಚಿವರಾಗಿ
ಕೆಲಸ
ನಿರ್ವಹಿಸಿದ
ಅನುಭವಗಳನ್ನು
ಬಸವರಾಜ
ಬೊಮ್ಮಾಯಿ
ಹೊಂದಿದ್ದಾರೆ.
ಹಾಗಾದರೆ
ಬಸವರಾಜ
ಬೊಮ್ಮಾಯಿ
ಅವರನ್ನು
ನೂತನ
ಸಿಎಂ
ಆಗಿ
ಆಯ್ಕೆ
ಮಾಡಲು
ಕಾರಣವೇನಿತ್ತು
ಎನ್ನುವ
ಮಾಹಿತಿಯನ್ನು
ಇಲ್ಲಿ
ನೀಡಲಾಗಿದೆ.
ಮುಖ್ಯಮಂತ್ರಿ
ರೇಸ್ನಲ್ಲಿ
ಅರವಿಂದ್
ಬೆಲ್ಲದ್,
ಕೇಂದ್ರ
ಮಂತ್ರಿ
ಪ್ರಹ್ಲಾದ್
ಜೋಶಿ,
ಮುರುಗೇಶ್
ನಿರಾಣಿ,
ವಿಶ್ವೇಶ್ವರ
ಹೆಗಡೆ
ಕಾಗೇರಿ
ಸೇರಿ
ಹಲವರ
ಹೆಸರುಗಳು
ಕೇಳಿಬಂದಿತ್ತು.
ಆದರೆ
ಇಂದು
ದಿಢೀರ್
ಎಂದು
ಬಸವರಾಜ್
ಬೊಮ್ಮಾಯಿ
ಹೆಸರು
ಕೇಳಿಬಂದಿತ್ತು.
ಕೊನೆಗೆ
ಯುವ
ಮುಖ
ಅರವಿಂದ್
ಬೆಲ್ಲದ್
ಮೆಟ್ಟಿನಿಂತು
ಬಸವರಾಜ
ಬೊಮ್ಮಾಯಿ
ಸಿಎಂ
ಗಾದಿಗೆ
ಆಯ್ಕೆಯಾಗಿದ್ದಾರೆ.
ಬಸವರಾಜ
ಬೊಮ್ಮಾಯಿ..
ಸಿಎಂ
ಆಯ್ಕೆಗೆ
ಕಾರಣಗಳು
*
ಕಾರಣ
1:
ಬಿಎಸ್
ಯಡಿಯೂರಪ್ಪ
ಪರಮಾಪ್ತ
*
ಕಾರಣ
2:ಲಿಂಗಾಯತ
ಮುಖಂಡ
*
ಕಾರಣ
3:ಬಿಎಸ್ವೈ
ಕೆಜೆಪಿ
ಕಟ್ಟಿದಾಗಲೂ
ಬಿಜೆಪಿಯಲ್ಲೇ
ಉಳಿದಿದ್ದು
*
ಕಾರಣ
4:ಬಿಜೆಪಿ
ಸೇರಿದ
ಮೇಲೆ
ತೋರಿದ
ಪಕ್ಷ
ನಿಷ್ಠೆ
*
ಕಾರಣ
5:ರಾಜಕೀಯ
ಅನುಭವ,
ಚಾಣಾಕ್ಷತನ
*
ಕಾರಣ
6:ಸಂಯಮಿ,
ಮೃದು
ಸ್ವಭಾವಿ
ಬಸವರಾಜ ಬೊಮ್ಮಾಯಿ 1960ರ ಜನವರಿ 18ರಂದು ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ಜನಿಸಿದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಆರ್. ಬೊಮ್ಮಾಯಿ ಪುತ್ರರಾದ ಇವರು ರಾಜಕೀಯ ಹಿನ್ನೆಲೆ ಹೊಂದಿದ್ದರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ. ಪತ್ನಿ ಹೆಸರು ಚೆನ್ನಮ್ಮ ಹಾಗೂ ಇಬ್ಬರು ಮಕ್ಕಳಿದ್ದಾರೆ. ಜನತಾದಳದೊಂದಿಗೆ ತಮ್ಮ ರಾಜಕೀಯ ಪ್ರಯಾಣ ಪ್ರಾರಂಭಿಸಿದ ಬಸವರಾಜ್ ಬೊಮ್ಮಾಯಿ ಕರ್ನಾಟಕ ವಿಧಾನಸೌಧಕ್ಕೆ ಎರಡು ಬಾರಿ ಧಾರವಾಡ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ. ರಾಜಕೀಯ ಜೀವನ: 2008ರಲ್ಲಿ ಅವರು ಪಕ್ಷವನ್ನು ಬದಲಾಯಿಸಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು. 2008ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆದು ಗೆಲುವು ಸಾಧಿಸಿದ ಅವರನ್ನು ಜಲಸಂಪನ್ಮೂಲ ಸಚಿವರಾಗಿ ನೇಮಕಗೊಳಿಸಲಾಯಿತು.
ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಾಗಿನಿಂದಲೂ ಅವರು ಸಹಕಾರ ಸಚಿವ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮತ್ತು ಗೃಹ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 1997, 2003ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ಗೆ ಆಯ್ಕೆ ಆಗಿದ್ದರು. 2008ರಲ್ಲಿ ಬಿಜೆಪಿಗೆ ಸೇರ್ಪಡೆ, ಶಿಗ್ಗಾಂವಿಯಿಂದ ವಿಧಾನಸಭೆಗೆ ಆಯ್ಕೆಯಾಗದರು ಬಿ.ಎಸ್.ವೈ, ಡಿ.ವಿ.ಎಸ್, ಶೆಟ್ಟರ್ ಸರ್ಕಾರದಲ್ಲಿ ಸಚಿವರಾಗಿದ್ದರು.