ಜೆಡಿಎಸ್ ಶಾಸಕ ಪುತ್ರನಿಂದ ಕೋಟ್ಯಂತರ ವಂಚನೆ
ಸಂಜಯನಗರ
ನಿವಾಸಿ,
ವೈದ್ಯ
ಡಾ.
ಲಕ್ಷ್ಮಣ್
ಅವರು
ಅತ್ತಿಬೆಲೆ
ಹೋಬಳಿ
ಬಳ್ಳೂರಲ್ಲಿ
ಆಸ್ಪತ್ರೆ
ನಿರ್ಮಾಣಕ್ಕಾಗಿ
100
ಎಕರೆ
ಜಮೀನು
ಖರೀದಿಸಲು
ಯೋಜಿಸಿದ್ದರು.
ಅದಕ್ಕಾಗಿ
ಸಂತೋಷ್
ಮಾಲೀಕತ್ವದ
ಪ್ರಮೀಳಾ-ಸಂತೋಷ್
ಲ್ಯಾಂಡ್
ಡೆವಲಪರ್ಸ್
ಜತೆ
2012ರಲ್ಲಿ
ಒಡಂಬಡಿಕೆ
ಮಾಡಿಕೊಂಡಿದ್ದರು.
(ನಟಿ
ಆರತಿ
ಬಂಗಲೆ
ರು.14
ಕೋಟಿಗೆ
ಮಾರಾಟ?)
ಈ ವೇಳೆ ಡಾ. ಲಕ್ಷ್ಮಣ್, ಸಂತೋಷ ಅವರಿಗೆ 9 ಕೋಟಿ ರೂ ಪಾವತಿಸಿದ್ದರಂತೆ. ಆದರೆ ಸಂತೋಷ್ ಜಮೀನು ಕೊಡಿಸಿಲ್ಲ. ಅಲ್ಲದೇ ಮಂಗಡ ಹಣವನ್ನೂ ಪಾವತಿಸಿಲ್ಲ. ಹೀಗಾಗಿ ಡಾ. ಲಕ್ಷ್ಮಣ್ ಅವರು 2013ರ ಮೇ 29 ರಂದು ಸಿಟಿ ಸಿವಿಲ್ ನ್ಯಾಯಾಲಯದ ಮೊರೆ (8th Additional Chief Metropolitan Magistrate court) ಹೋಗಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯವು ಸಂಜಯನಗರ ಪೊಲೀಸರಿಗೆ ಸೋಮವಾರ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸಂತೋಷ್ ಅವರಿಗೆ ನೋಟಿಸ್ ನೀಡಿದ್ದರು. ಪೊಲೀಸರಿಂದ ನೋಟಿಸ್ ಪಡೆದಿರುವ ಸಂತೋಷ್ ಸೋಮವಾರ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಸದ್ಯದಲ್ಲೇ ವಿಚಾರಣೆ ಪೂರ್ಣಗೊಳಿಸಿ, ಕೋರ್ಟಿಗೆ ವರದಿ ಸಲ್ಲಿಸುವುದಾಗಿ DCP (North) ಸಂದೀಪ್ ಪಾಟೀಲ್ ತಿಳಿಸಿದ್ದಾರೆ.