ಅರ್ಕಾವತಿ ಗಲಾಟೆ : ಕಾಂಗ್ರೆಸ್ ನಾಯಕರಿಗೆ ಎಚ್ಡಿಕೆ ಸವಾಲು
ಬೆಂಗಳೂರು, ಮಾ. 12 : ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣದಲ್ಲಿ ರಾಜಕೀಯ ನಾಯಕರ ಮಾತಿನ ಸಮರ ಮುಂದುವರೆದಿದೆ. ಡಿನೋಟಿಫಿಕೇಶನ್ ಪ್ರಕರಣದ ಬಗ್ಗೆ ಬಹಿರಂಗವಾಗಿ ಚರ್ಚೆ ನಡೆಸಲು ಸಿದ್ಧವಿದ್ದೇನೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ
ಬುಧವಾರ
ಮಾತನಾಡಿದ
ಎಚ್.ಡಿ.ಕುಮಾರಸ್ವಾಮಿ
ಅವರು,
ಜೈಲಿಗೆ
ಹೋಗುವ
ಭೀತಿಯಿಂದ
ಕುಮಾರಸ್ವಾಮಿ
ನ್ಯಾಯಮೂರ್ತಿ
ಕೆಂಪಣ್ಣ
ಆಯೋಗವನ್ನು
ರದ್ದುಪಡಿಸಲು
ಆಗ್ರಹಿಸುತ್ತಿದ್ದಾರೆ
ಎಂಬ
ಕಾಂಗ್ರೆಸ್
ಮುಖಂಡ
ವಿ.ಎಸ್.ಉಗ್ರಪ್ಪ
ಹೇಳಿಕೆಗೆ
ತಿರುಗೇಟು
ನೀಡಿದರು.
[ಅರ್ಕಾವತಿ
ಕರ್ಮಕಾಂಡ
:
ಕುಮಾರಸ್ವಾಮಿ
ಪುಸ್ತಕದಲ್ಲೇನಿದೆ?]
'ಅರ್ಕಾವತಿ ಅಕ್ರಮದ ಬಗ್ಗೆ ಚರ್ಚಿಸಲು ಬಹಿರಂಗ ಸಮಾವೇಶ ಆಯೋಜಿಸಿ. ನಾನು ಯಾರ ಜೊತೆಗೂ ಬೇಕಾದರೂ ಚರ್ಚೆಗೆ ಸಿದ್ಧನಿದ್ದೇನೆ' ಎಂದು ಉಗ್ರಪ್ಪಗೆ ಕುಮಾರಸ್ವಾಮಿ ಸವಾಲು ಹಾಕಿದರು. 'ಸಿದ್ದರಾಮಯ್ಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಡಿನೋಟಿಫಿಕೇಶನ್ ಮಾಡಿದ್ದಾರೆ' ಎಂದು ಕುಮಾರಸ್ವಾಮಿ ಆರೋಪಿಸಿದರು. [ಅರ್ಕಾವತಿ ವಿವಾದ : ಸಿಎಂ ವಿರುದ್ಧ ದೂರು, ದಾಖಲೆ ಸಲ್ಲಿಕೆ]
ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಹಗರಣದ ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಎಚ್.ಎಸ್. ಕೆಂಪಣ್ಣ ಅವರ ಆಯೋಗ ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಸಾಧ್ಯವಿಲ್ಲ. ಆದ್ದರಿಂದ ಈ ಬಗ್ಗೆ ಹೈಕೋರ್ಟ್ನಲ್ಲಿ ಕಾನೂನು ಹೋರಾಟವನ್ನು ನಡೆಸಬೇಕು ಎಂದು ಎಚ್ಡಿಕೆ ಹೇಳಿದರು.
ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಎಂ.ಸಿ.ನಾಣಯ್ಯ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ. ಆದ್ದರಿಂದ ಸರ್ಕಾರ ಕೆಂಪಣ್ಣ ಆಯೋಗವನ್ನು ರದ್ದುಗೊಳಿಸಲಿ, ಜೆಡಿಎಸ್ ಪಕ್ಷವೇ ಹೈಕೋರ್ಟ್ನಲ್ಲಿ ಕಾನೂನು ಹೋರಾಟ ನಡೆಸಲಿದೆ ಎಂದು ಕುಮಾರಸ್ವಾಮಿ ಹೇಳಿದರು.