ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ; ಕಾಂಗ್ರೆಸ್ ಸರಣಿ ಟ್ವೀಟ್
ಬೆಂಗಳೂರು, ಮಾರ್ಚ್ 02; ಕರ್ನಾಟಕದ ಬಿಜೆಪಿ ಸರ್ಕಾರಕ್ಕೆ ಭಾರೀ ಮುಜುಗರ ಉಂಟು ಮಾಡುವ ಘಟನೆ ನಡೆದಿದೆ. ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ರಾಜ್ಯ ರಾಜಕೀಯದಲ್ಲಿ ಮಂಗಳವಾರ ಸದ್ದು ಮಾಡಿದೆ.
ಬೆಳಗಾವಿಯ ಪ್ರಭಾವಿ ರಾಜಕೀಯ ನಾಯಕ, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿಯೊಂದನ್ನು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಬಿಡುಗಡೆ ಮಾಡಿದ್ದಾರೆ. ಸಚಿವರು ಯುವತಿ ಜೊತೆ ರಾಸಲೀಲೆಯಲ್ಲಿ ತೊಡಗಿರುವ ಸಿಡಿ ಇದಾಗಿದೆ.
ರಾಜ್ಯ ರಾಜಕೀಯದಲ್ಲಿ ಸಿಡಿ ಸ್ಫೋಟ; ರಮೇಶ್ ಜಾರಕಿಹೊಳಿ ವಿರುದ್ಧ ದೂರು
ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ದು, ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿ ಜೊತೆ ಸಚಿವರು ರಾಸಲೀಲೆ ನಡೆಸಿದ್ದಾರೆ. ಬಳಿಕ ಕೆಲಸ ಕೊಡಿಸದೇ ಆಕೆಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
'ಸಿಡಿ ಸ್ಫೋಟ': ಈಗ ಎಲ್ಲಿದ್ದಾರೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ?
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸಿಡಿ ವಿಚಾರ ಮುಜುಗರ ಉಂಟು ಮಾಡಿದೆ. ಪ್ರತಿಪಕ್ಷ ಕಾಂಗ್ರೆಸ್ ಸಿಡಿ ವಿಚಾರವನ್ನು ಮುಂದಿಟ್ಟುಕೊಂಡು ಸರಣಿ ಟ್ವೀಟ್ಗಳನ್ನು ಮಾಡಿದೆ.
ನಾನು ಓದಿದ್ದು ಸಹ ಸರ್ಕಾರಿ ಶಾಲೆಯಲ್ಲಿ; ರಮೇಶ್ ಜಾರಕಿಹೊಳಿ
|
ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ
ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಬಹಿರಂಗವಾಗುತ್ತಿದ್ದಂತೆ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ. ಏನ್ರಿ @BJP4Karnataka ಇದೆಲ್ಲ?. ಏನು ಹೇಳ್ತೀರಾ ಅದರ ಬಗ್ಗೆ?" ಎಂದು ಪ್ರಶ್ನೆ ಮಾಡಿದೆ.
|
ಉದ್ಯೋಗ ಕೊಡಿ ಎಂದರೆ
"ಯುವಸಮುದಾಯಕ್ಕೆ
ಉದ್ಯೋಗ
ಕೊಡಿ
ಎಂದರೆ
ಉದ್ಯೋಗ
ಕೇಳಿ
ಬಂದವರಿಗೆ
ನೀವು
ಏನನ್ನ
ಕೊಡಲು
ಹೊರಟಿದ್ದೀರಿ"
ಎಂದು
ಕಾಂಗ್ರೆಸ್
ಪ್ರಶ್ನಿಸಿದೆ.
|
ಬಿಜೆಪಿಗೆ ಹೆಸರು ಕೊಟ್ಟಿದ್ದು ಇದಕ್ಕಾ?
ಕರ್ನಾಟಕ ಕಾಂಗ್ರೆಸ್, "ಡಿಯರ್ @BJP4Karnataka ನಿಮ್ಮವರೇ ನಿಮಗೆ #BlackmailJanataParty ಹೆಸರು ಕೊಟ್ಟಿದ್ದು ಇದಕ್ಕೇನಾ?" ಎಂದು ಟ್ವೀಟ್ ಮೂಲಕ ಪ್ರಶ್ನಿಸಿದೆ.
|
ಕರ್ನಾಟಕ ಭವನ
ಸಚಿವ
ರಮೇಶ್
ಜಾರಕಿಹೊಳಿ
ದೆಹಲಿಯಲ್ಲಿರುವ
ಕರ್ನಾಟಕ
ಭವನದಲ್ಲಿ
ರಾಸಲೀಲೆ
ನಡೆಸಿದ್ದಾರೆ
ಎಂದು
ಆರೋಪಿಸಿಲಾಗಿದೆ.
ಕರ್ನಾಟಕ
ಕಾಂಗ್ರೆಸ್,
"ಕರ್ನಾಟಕ
ಭವನವೇನು
@BJP4Karnataka
ಪಕ್ಷದ
ಬೆಡ್
ರೂಮಾ?
ಮೊದಲು
ತಿಳಿಸಿ"
ಎಂದು
ಟ್ವೀಟ್
ಮಾಡಿದೆ.