ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೇಟೆಗೆ ಹೋಗಿದ್ದ ವ್ಯಕ್ತಿಗೆ ಗುಂಡು ತಗುಲಿ ಸಾವು; ಉಯ್ಯಂಬಳ್ಳಿ ಉದ್ವಿಗ್ನ
ರಾಮನಗರ, ಮಾರ್ಚ್ 16: ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಉಯ್ಯಂಬಳ್ಳಿ ವ್ಯಾಪ್ತಿಯ ಅರಣ್ಯ ಪ್ರದೇಶಕ್ಕೆ ಬೇಟೆಗೆಂದು ಹೋಗಿದ್ದ ಉಯ್ಯಂಬಳ್ಳಿ ಗ್ರಾಮದ ಯುವಕನೊಬ್ಬ ಆಕಸ್ಮಿಕವಾಗಿ ಗುಂಡು ತಗುಲಿ ಅಸುನೀಗಿದ್ದು, ಉದ್ವಿಗ್ನ ಪರಿಸ್ಥಿತಿಗೆಕಾರಣವಾಗಿದೆ.
ಬೇಟೆಗೆ ಹೋಗಿದ್ದ ಯುವಕನನ್ನು ಅರಣ್ಯಾಧಿಕಾರಿಗಳೇ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದು, ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದರು. ಇದರಿಂದ, ಪರಿಸ್ಥಿತಿಯು ಉದ್ವಿಗ್ನಗೊಂಡಿತ್ತು.
ಸ್ಥಳಕ್ಕೆ ಆಗಮಿಸಿದ್ದ ಪೊಲೀಸರ ಮೇಲೂ ಗ್ರಾಮಸ್ಥರು ಹಲ್ಲೆ ನಡೆಸಲು ಮುಂದಾಗಿದ್ದರು. ಆದರೂ, ಹರಸಾಹಸ ಮಾಡಿ ಪೊಲೀಸರು ಜನರನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೂ, ರೊಚ್ಚಿಗೆದ್ದಿರುವ ಗ್ರಾಮಸ್ಥರು, ರಾಮನಗರ- ಸಂಗಮ ರಸ್ತೆಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ರಸ್ತೆ ತಡೆ ನಡೆಸಿದರು.
Comments
ramanagara kanakapura forest department district news ರಾಮನಗರ ಕನಕಪುರ ಕರ್ನಾಟಕ ಅರಣ್ಯ ಇಲಾಖೆ ಜಿಲ್ಲಾಸುದ್ದಿ
English summary
On alleging that forest officials killed one of their villager who had been to forest for hunting on March 16, 2017 the Uyyamballi villagers raged and protested against forest department by blocking Ramanagar-Sanagama road on March 16, 2017.