ರಾಮನಗರ ಮೆಮು ರೈಲು ಮೈಸೂರಿನ ತನಕ ವಿಸ್ತರಣೆ
ಬೆಂಗಳೂರು, ಡಿಸೆಂಬರ್ 18 : ಬೆಂಗಳೂರು-ಮೈಸೂರು ನಡುವೆ ವಿಶೇಷ ವಿದ್ಯುತ್ ರೈಲು (ಮೆಮು) ಸಂಜೆ ಹೊತ್ತಿನಲ್ಲಿ ಸಂಚಾರ ನಡೆಸುವ ಸಾಧ್ಯತೆ ಇದೆ. ನೈಋತ್ಯ ರೈಲ್ವೆ ವಾರದಲ್ಲಿ ನಾಲ್ಕು ದಿನ ರೈಲು ಸಂಚಾರ ನಡೆಸಲು ಅನುಮತಿ ನೀಡುವಂತೆ ಕೇಂದ್ರ ರೈಲ್ವೆ ಮಂಡಳಿಗೆ ಪತ್ರ ಬರೆದಿದೆ.
ಕಣ್ಣೂರು/ಕಾರವಾರ ಎಕ್ಸ್ಪ್ರೆಸ್ ರೈಲು ವಾರದಲ್ಲಿ ನಾಲ್ಕು ದಿನ ಶ್ರವಣಬೆಳಗೊಳ ಮಾರ್ಗವಾಗಿ ಸಂಚಾರ ನಡೆಸುತ್ತಿದೆ. ಫೆಬ್ರವರಿಯಲ್ಲಿ ಮಾರ್ಗ ಬದಲಾವಣೆ ಮಾಡಿದ ಬಳಿಕ ಮೈಸೂರಿಗೆ ಸಂಜೆ 7ಗಂಟೆ ಬಳಿಕ ಬೆಂಗಳೂರಿನಿಂದ ರೈಲುಗಳಿಲ್ಲ.
ಬೆಂಗಳೂರು-ಮೈಸೂರು ನಡುವೆ ರಾತ್ರಿ ರೈಲು ಸಂಚಾರಕ್ಕೆ ಬೇಡಿಕೆ
ಆದ್ದರಿಂದ, ರಾಮನಗರದ ತನಕ ಸಂಚಾರ ನಡೆಸುವ ವಿಶೇಷ ಮೆಮು (06576) ರೈಲನ್ನು ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ಮೈಸೂರಿನ ತನಕ ಓಡಿಸಲು ಕೇಂದ್ರ ರೈಲ್ವೆ ಮಂಡಳಿ ಒಪ್ಪಿಗೆ ಕೇಳಲಾಗಿದೆ.
ಬೆಂಗಳೂರು ನಗರದ 2 ರೈಲ್ವೆ ಯೋಜನೆಗೆ ಇಲಾಖೆಯ ಒಪ್ಪಿಗೆ
ರಾಮನಗರ ಮೆಮು ರೈಲು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ 7.55ಕ್ಕೆ ಹೊರಡಲಿದೆ. 9 ಗಂಟೆಗೆ ರಾಮನಗರದಿಂದ ಹೊರಡಲಿದ್ದು, ಮೈಸೂರನ್ನು 11.15ಕ್ಕೆ ತಲುಪುವ ನಿರೀಕ್ಷೆ ಇದೆ. ರೈಲು ವಾಪಸ್ ಬರುವ ಸಮಯವನ್ನು ಇನ್ನೂ ಅಂತಿಮಗೊಳಿಸಿಲ್ಲ.
7 ದಿನದಲ್ಲಿ ಭದ್ರಾನದಿ ಸೇತುವೆ ಸ್ಟೀಲ್ ಗ್ರೀಡರ್ ಬದಲಾಯಿಸಿದ ರೈಲ್ವೇ
ರಾಮನಗರ ವಿಶೇಷ ಮೆಮು ರೈಲು ವಿಶೇಷ ರೈಲಾಗಿದ್ದು 2019ರ ಫೆಬ್ರವರಿ ತನಕ ಮಾತ್ರ ಸಂಚಾರ ನಡೆಸಲಿದೆ. ಬಳಿಕ ಮತ್ತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ರೈಲು ನೀಡುವಂತೆ ಕೋರಬೇಕಿದೆ.
ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಈ ಕುರಿತು ಟ್ವೀಟ್ ಮಾಡಿದ್ದಾರೆ.
After d diversion of Blr-Karwar Express via Mys, the commuters of my constituency had no train between 7.30 n 10.30 PM weekly 4 days. So requested @PiyushGoyal ji to extend Blr-Ramnagar MEMU upto Mys n he immediately instructed d officials. It vl be a reality soon. Thanq Piyushji pic.twitter.com/3GX168uCp1
— Pratap Simha (@mepratap) December 17, 2018