ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ ಆಚರಣೆ
ಕರ್ನಾಟಕ, ನವೆಂಬರ್ 1: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಬೆಂಗಳೂರಿನಲ್ಲಿ 66ನೇ ಕರ್ನಾಟಕ ರಾಜ್ಯೋತ್ಸವ ದಿನದಂದು ಭುವನೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ನಂತರ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದರು.
ಈ ವೇಳೆ ಶಿಕ್ಷಣ ಸಚಿವ ಬಿಸಿ ನಾಗೇಶ್, ಶಾಸಕ ರಿಜ್ವಾನ್ ಅರ್ಷದ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. ಅದೇ ರೀತಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಉಸ್ತವಾರಿ ಸಚಿವರಿಂದ ಕನ್ನಡ ಧ್ವಜಾರೋಹಣ ನೆರವೇರಿಸಲಾಯಿತು.
ಕರ್ನಾಟಕ ರಾಜ್ಯೋತ್ಸವಕ್ಕೆ ಪ್ರಧಾನಿ ಮೋದಿ ಸೇರಿದಂತೆ ರಾಜಕೀಯ ಗಣ್ಯರ ಶುಭಾಶಯ
ಉತ್ತರ
ಕನ್ನಡದಲ್ಲಿ
ಧ್ವಜಾರೋಹಣ
ಮಾಡಿದ
ಸಚಿವ
ಹೆಬ್ಬಾರ್
ಉತ್ತರ
ಕನ್ನಡದಲ್ಲೂ
66ನೇ
ಕನ್ನಡ
ರಾಜ್ಯೋತ್ಸವವನ್ನು
ಸಂಭ್ರಮದಿಂದ
ಆಚರಿಸಲಾಯಿತು.
ಕಾರವಾರದ
ಪೊಲೀಸ್
ಪರೇಡ್
ಮೈದಾನದಲ್ಲಿ
ಜಿಲ್ಲಾ
ಉಸ್ತುವಾರಿ
ಸಚಿವ
ಶಿವರಾಮ
ಹೆಬ್ಬಾರ್
ಧ್ವಜಾರೋಹಣ
ನೆರವೇರಿಸಿದರು.
ನಿಗದಿಯಾಗಿದ್ದ ಸಮಯಕ್ಕಿಂತ ತಡವಾಗಿ ಬಂದ ಸಚಿವ ಶಿವರಾಮ ಹೆಬ್ಬಾರ್, 9:20ಕ್ಕೆ ಧ್ವಜಾರೋಹಣ ಮಾಡಿದರು. ಧ್ವಜಾರೋಹಣ ಬಳಿಕ ಆಕರ್ಷಕ ಪಥಸಂಚಲನ ನಡೆಸಿದ ಪರೇಡ್ ತಂಡಗಳ ಪರಿವೀಕ್ಷಣೆ ಮಾಡಿದರು.
ಪೊಲೀಸ್, ಡಿಎಆರ್, ಮಹಿಳಾ ಪೊಲೀಸ್, ಅರಣ್ಯ, ಗೃಹರಕ್ಷಕ ದಳ, ಎನ್ಸಿಸಿ ಸೇರಿ 8 ತಂಡಗಳಿಂದ ಪರೇಡ್ ಮಾಡಲಾಯಿತು. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಭಾಗಿಯಾಗಿದ್ದರು.
ಬಳಿಕ ಮಾತನಾಡಿದ ಸಚಿವ ಶಿವರಾಮ ಹೆಬ್ಬಾರ್, ನಾಡಿನ ಸಮೃದ್ಧಿ ಎಂದರೆ ಅದು ಅಭಿವೃದ್ಧಿಯ ಪ್ರತೀಕ. ಅದಕ್ಕೆ ಪೂರಕವಾಗಿ ಅಂದಿನಿಂದ ಇಂದಿನವರೆಗೆ ಆಳಿದ ಸರ್ಕಾರಗಳು ರಾಜ್ಯದ ಅಭಿವೃದ್ಧಿಗೆ ಅದರದೇ ಕೊಡುಗೆ ನೀಡಿವೆ. ಅಂತೆಯೇ ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರ ನೇತೃತ್ವದ ನಮ್ಮ ಸರ್ಕಾರ ಕನ್ನಡ ನಾಡಿನ ಕಲೆ, ಸಂಸ್ಕೃತಿ, ಭಾಷೆ, ನೆಲ, ಜಲ ಸಂರಕ್ಷಣೆ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಹಲವಾರು ಕನ್ನಡ ಪರ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದರು.
ಚಿಕ್ಕಮಗಳೂರಿನಲ್ಲಿ
ಧ್ವಜಾರೋಹಣ
ನೆರವೇರಸಿದ
ಗೃಹ
ಸಚಿವ
ಆರಗ
ಜ್ಞಾನೇಂದ್ರ
66ನೇ
ಕನ್ನಡ
ರಾಜ್ಯೋತ್ಸವ
ಹಿನ್ನೆಲೆ
ಗೃಹ
ಸಚಿವ
ಅರಗ
ಜ್ಞಾನೇಂದ್ರ
ಚಿಕ್ಕಮಗಳೂರು
ನಗರದ
ಸುಭಾಷ್
ಚಂದ್ರ
ಬೋಸ್
ಆಟದ
ಮೈದಾನದಲ್ಲಿ
ಧ್ವಜಾರೋಹಣ
ನೆರವೇರಿಸಿದರು.
ಧ್ವಜಾರೋಹಣಕ್ಕೂ ಮುನ್ನ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ಶಾಸಕ ಸಿ.ಟಿ. ರವಿ, ಎಂಎಲ್ಸಿ ಎಸ್.ಎಲ್. ಭೋಜೇಗೌಡ ಭಾಗಿಯಾಗಿದ್ದರು.
ಮೈಸೂರಿನಲ್ಲಿ
ಸಚಿವ
ಎಸ್.ಟಿ.
ಸೋಮಶೇಖರ್
ಧ್ವಜಾರೋಹಣ
ಸಾಂಸ್ಕೃತಿಕ
ನಗರಿ
ಮೈಸೂರಿನಲ್ಲಿ
66ನೇ
ಕನ್ನಡ
ರಾಜ್ಯೋತ್ಸವ
ಅಂಗವಾಗಿ
ಜಿಲ್ಲಾ
ಉಸ್ತುವಾರಿ
ಸಚಿವ
ಎಸ್.ಟಿ.
ಸೋಮಶೇಖರ್
ಧ್ವಜಾರೋಹಣ
ನೆರವೇರಿಸಿ
ಮಾತನಾಡಿದರು.
ಇಂದು ಕರ್ನಾಟಕ ಏಕೀಕರಣಗೊಂಡ ದಿನ. ಇದು ಕನ್ನಡಿಗರಾದ ನಮ್ಮೆಲ್ಲರಿಗೂ ಬಹಳ ವಿಶೇಷವಾದ ದಿನ. ಕನ್ನಡದ ಕಾರಣಕ್ಕೆ ಒಗ್ಗೂಡಿರುವ ಜನ ನಾವು. ಸ್ವಾತಂತ್ರ್ಯ ಪೂರ್ವದಲ್ಲಿ ಹಲವು ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರ ಹಲವು ಪ್ರದೇಶಗಳನ್ನು ಒಂದುಗೂಡಿಸಿ, 1956ರ ನವೆಂಬರ್ 1 ರಂದು ಕರ್ನಾಟಕ ಏಕೀಕರಣ ಮಾಡಲಾಯಿತು. ಅಂದಿನಿಂದ ಪ್ರತಿ ವರ್ಷ ನವೆಂಬರ್ 1 ರಂದು ನಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬಂದಿದ್ದೇವೆ ಎಂದು ಹೇಳಿದರು.
ಮಂಗಳೂರಿನಲ್ಲಿ
ರಾಷ್ಟ್ರಧ್ವಜಕ್ಕೆ
ಅಪಚಾರ
ಕನ್ನಡ
ರಾಜ್ಯೋತ್ಸವ
ಕಾರ್ಯಕ್ರಮ
ವೇಳೆ
ಮಂಗಳೂರಿನ
ನೆಹರೂ
ಮೈದಾನದಲ್ಲಿ
ದಕ್ಷಿಣ
ಕನ್ನಡ
ಜಿಲ್ಲಾ
ಉಸ್ತುವಾರಿ
ಸಚಿವ
ಎಸ್.
ಅಂಗಾರ
ತಲೆಕೆಳಗಾದ
ರಾಷ್ಟ್ರಧ್ವಜ
ಹಾರಿಸಿದ್ದು,
ಕನ್ನಡ
ರಾಜ್ಯೋತ್ಸವದ
ದಿನದಂದೇ
ರಾಷ್ಟ್ರಧ್ವಜಕ್ಕೆ
ಅಪಚಾರವಾಗಿದೆ.
ಹಾಸನದಲ್ಲಿ ಸಚಿವ ಕೆ. ಗೋಪಾಲಯ್ಯರಿಂದ ಧ್ವಜಾರೋಹಣ
Recommended Video