Breaking: ಕರ್ನಾಟಕದಿಂದ ರಾಜ್ಯಸಭೆ ಜಗ್ಗೇಶ್, ನಿರ್ಮಲಾ ಸೀತಾರಾಮನ್ಗೆ ಬಿಜೆಪಿ ಟಿಕೆಟ್
ಬೆಂಗಳೂರು, ಮೇ 29: ಕರ್ನಾಟಕದಿಂದ ರಾಜ್ಯಸಭೆ ಚುನಾವಣೆಗೆ ಯಾರಿಗೆ ಟಿಕೆಟ್ ನೀಡಲಾಗುತ್ತದೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಕನ್ನಡದ ಖ್ಯಾತ ನಟ ಹಾಗೂ ನವರಸ ನಾಯಕ ಜಗ್ಗೇಶ್ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ.
ರಾಜ್ಯಸಭೆ ಚುನಾವಣೆ ನಾಮಪತ್ರ ಸಲ್ಲಿಕೆಗೆ ಇನ್ನೂ ಮೂರು ದಿನ ಬಾಕಿ ಇರುವಂತೆ ಭಾರತೀಯ ಜನತಾ ಪಕ್ಷವು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಬಿಡುಗಡೆಗೊಳಿಸಿದೆ. ಕರ್ನಾಟಕವೂ ಸೇರಿದಂತೆ 15 ರಾಜ್ಯಗಳಲ್ಲಿನ 57 ರಾಜ್ಯಸಭಾ ಸ್ಥಾನಗಳಿಗೆ ಜೂನ್ 10ರಂದು ಚುನಾವಣೆ ನಡೆಯಲಿದೆ.
Breaking news: ರಾಜ್ಯಸಭೆಗೆ ಬಿಜೆಪಿ 16 ಅಭ್ಯರ್ಥಿಗಳ ಪಟ್ಟಿ ಪ್ರಕಟ
ಉತ್ತರ ಪ್ರದೇಶವೊಂದರಲ್ಲೇ 11 ಸ್ಥಾನಗಳಿವೆ. ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ತಲಾ ಆರು ಸ್ಥಾನಗಳಿವೆ. ಬಿಹಾರದಲ್ಲಿ ಐದು, ಕರ್ನಾಟಕ, ಆಂಧ್ರಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ ನಾಲ್ಕು ಸ್ಥಾನಗಳು ತೆರವಾಗಿದ್ದು, ಚುನಾವಣೆ ನಡೆಯಲಿದೆ.
ಯಾವ ಪಕ್ಷಕ್ಕೆ ಎಷ್ಟು ಸ್ಥಾನ ದಕ್ಕಬಹುದು?:
57 ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷ ಎಂಟು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ರಾಜಸ್ಥಾನದಲ್ಲಿ 2, ಛತ್ತೀಸ್ಗಡದಲ್ಲಿ 2, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ಮಧ್ಯಪ್ರದೇಶದಲ್ಲಿ ತಲಾ ಒಂದೊಂದು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ. ರಾಜಸ್ಥಾನದಲ್ಲಿ ಬಿಜೆಪಿಯೇತರ ಎಲ್ಲಾ ಪಕ್ಷಗಳ ಬೆಂಬಲ ಸಿಕ್ಕರೆ ಒಂದು ಹೆಚ್ಚುವರಿ ಸ್ಥಾನ ಕೂಡ ಕಾಂಗ್ರೆಸ್ಗೆ ದಕ್ಕಬಹುದು.
Recommended Video
ಕರ್ನಾಟಕದಲ್ಲಿ
ಕಾಂಗ್ರೆಸ್
ಅಭ್ಯರ್ಥಿಗೆ
1
ಸ್ಥಾನ:
ಕರ್ನಾಟಕದಲ್ಲಿ
ನಾಲ್ಕು
ರಾಜ್ಯಸಭಾ
ಸ್ಥಾನಗಳಿಗೆ
ಚುನಾವಣೆ
ನಡೆಯಲಿದೆ.
ಈ
ಪೈಕಿ
ಕಾಂಗ್ರೆಸ್ಗೆ
ಒಂದು
ಸ್ಥಾನ
ಗೆಲ್ಲುವ
ಅವಕಾಶವಿದೆ.
ಬಿಜೆಪಿಗೆ
ಎರಡು
ಸ್ಥಾನಗಳು
ನಿಶ್ಚಿತವಾಗಿವೆ.
ಇನ್ನೊಂದು
ಸ್ಥಾನಕ್ಕೆ
ಮಾತ್ರ
ಅತಂತ್ರ
ಸ್ಥಿತಿಯಲ್ಲಿದೆ.
ಜೆಡಿಎಸ್
ಬೆಂಬಲ
ಇದ್ದವರಿಗೆ
ಆ
ಸ್ಥಾನ
ಸಿಗಲಿದೆ.
ಜೆಡಿಎಸ್
ಆ
ಒಂದು
ಸ್ಥಾನದ
ನಿರೀಕ್ಷೆಯಲ್ಲಿದೆ.
ಬಿಜೆಪಿ
ಮೂರು
ಅಭ್ಯರ್ಥಿಗಳನ್ನು
ನಿಲ್ಲಿಸಿದರೆ
ಜೆಡಿಎಸ್ಗೆ
ಕಷ್ಟವಾಗುತ್ತದೆ.
ಹೀಗಾಗಿ,
ಮೂರನೇ
ಅಭ್ಯರ್ಥಿ
ನಿಲ್ಲಿಸಬೇಡಿ
ಎಂದು
ಮಾಜಿ
ಪ್ರಧಾನಿ
ಎಚ್
ಡಿ
ದೇವೇಗೌಡರು
ಬಿಜೆಪಿಯ
ವರಿಷ್ಠರನ್ನು
ಕೇಳಿಕೊಂಡಿದ್ದಾರೆ
ಎಂದು
ಹೇಳಲಾಗುತ್ತಿದೆ.
ಕಾಂಗ್ರೆಸ್
ಪಕ್ಷದಿಂದ
ಜೈರಾಮ್
ರಮೇಶ್
ಅವರಿಗೆ
ಟಿಕೆಟ್
ಸಿಗುವ
ನಿರೀಕ್ಷೆ
ಇದೆ.
ಇದು
ಇಂದಿನ
ಸಭೆಯಲ್ಲಿ
ತೀರ್ಮಾನವಾಗಲಿದೆ.