ರಾಜ್ಯಸಭೆ ಚುನಾವಣಾ ವೇಳಾಪಟ್ಟಿ 2016
ಬೆಂಗಳೂರು, ಮೇ 23 : ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾದ ನಾಲ್ವರು ಸದಸ್ಯರ ಪೈಕಿ ಮೂವರು ನಿವೃತ್ತರಾಗಲಿದ್ದು, ಒಂದು ಸ್ಥಾನ ರಾಜೀನಾಮೆಯಿಂದ ತೆರವಾಗಿದೆ. ಈ ಸ್ಥಾನಗಳನ್ನು ಭರ್ತಿ ಮಾಡಲು 2016ರ ಜೂನ್ 11ರಂದು ಚುನಾವಣೆ ನಡೆಸಲಾಗುತ್ತದೆ.
ಮೇ
24ರಂದು
ಚುನಾವಣೆ
ಅಧಿಸೂಚನೆ
ಹೊರಡಿಸಲಾಗುತ್ತದೆ.
ನಾಮಪತ್ರ
ಸಲ್ಲಿಸಲು
ಮೇ
31
ಕೊನೆಯ
ದಿನವಾಗಿದೆ.
ಜೂನ್
1ರಂದು
ನಾಮಪತ್ರಗಳ
ಪರಿಶೀಲನೆ
ನಡೆಯಲಿದೆ.
ನಾಮಪತ್ರ
ವಾಪಸ್
ಪಡೆಯಲು
ಜೂನ್
3
ಕೊನೆಯ
ದಿನವಾಗಿದೆ.
ಜೂನ್
11ರಂದು
ಬೆಳಗ್ಗೆ
9
ರಿಂದ
ಸಂಜೆ
4
ಗಂಟೆಯ
ತನಕ
ಮತದಾನ
ನಡೆಯಲಿದೆ.
ಅಂದು
ಸಂಜೆ
ಫಲಿತಾಂವನ್ನು
ಪ್ರಕಟಿಸಲಾಗುತ್ತದೆ.
[ಕರ್ನಾಟಕದಿಂದ
ರಾಜ್ಯಸಭೆಗೆ
ಮತ್ತೆ
ಎಂ
ವೆಂಕಯ್ಯನಾಯ್ಡು]
ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿ ಎಸ್. ಮೂರ್ತಿ ಅವರು ಚುನಾವಣಾಧಿಕಾರಿಯಾಗಿ ಹಾಗೂ ಉಪ ಕಾರ್ಯದರ್ಶಿ ಎಂ.ಎಸ್. ಕುಮಾರಸ್ವಾಮಿ ಅವರು ಸಹಾಯಕ ಚುನಾವಣಾಧಿಕಾರಿಯಾಗಿ ಕೆಲಸ ಮಾಡಲಿದ್ದಾರೆ. [ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸಿನಲ್ಲಿ ಪೈಪೋಟಿ]
ಚುನಾವಣೆಗೆ ಸ್ಪರ್ಧಿಸುವವರು ಮೇ 24 ರಿಂದ 31ರ ತನಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬಹುದು. ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯ ತನಕ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಮೇ 29 ರ ಭಾನುವಾರ ಸಾರ್ವತ್ರಿಕ ರಜಾದಿನ. ಅಂದು ನಾಮಪತ್ರ ಸ್ವೀಕರಿಸುವುದಿಲ್ಲ. [ಕುಮಾರಸ್ವಾಮಿ ರಾಜ್ಯಸಭೆಗೆ, ಗೌಡರ ಸ್ಪಷ್ಟನೆಗಳು]
ನಾಮಪತ್ರ ಸಲ್ಲಿಸುವ ಪ್ರತಿ ಅಭ್ಯರ್ಥಿಯು ತಮ್ಮ ನಾಮಪತ್ರವನ್ನು ನಿಗದಿತ ನಮೂನೆ 2ಸಿಯಲ್ಲಿ ಸಲ್ಲಿಸಬೇಕು ಮತ್ತು ಅವರ ಉಮೇದುವಾರಿಕೆಗೆ ಸೂಚಕರಾಗಿ ಕನಿಷ್ಟ ಹತ್ತು ಜನ ಹಾಲಿ ಶಾಸಕರು ಸಹಿ ಮಾಡಿಬೇಕು. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ನಾಮಪತ್ರದೊಂದಿಗೆ ರೂ 5000 ರೂ., ಇತರ ಅಭ್ಯರ್ಥಿಗಳು 10 ಸಾವಿರ ರೂ. ಠೇವಣಿ ಇಡಬೇಕು.
ನಿವೃತ್ತರಾಗಲಿರುವವರು
*
ಎಂ.ವೆಂಕಯ್ಯ
ನಾಯ್ಡು
(ಬಿಜೆಪಿ)
*
ಆಯನೂರು
ಮಂಜುನಾಥ್
(ಬಿಜೆಪಿ)
*
ಆಸ್ಕರ್
ಫರ್ನಾಂಡೀಸ್
(ಕಾಂಗ್ರೆಸ್)
ರಾಜೀನಾಮೆ
ನೀಡಿದವರು
*
ವಿಜಯ್
ಮಲ್ಯ
(ಪಕ್ಷೇತರ)