ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನ ಕೆಲವೆಡೆ ಮಳೆ ಸಾಧ್ಯತೆ
ಬೆಂಗಳೂರು,
ನವೆಂಬರ್
27:ರಾಜ್ಯದ
ಕರಾವಳಿ
ಹಾಗೂ
ದಕ್ಷಿಣ
ಒಳನಾಡಿನ
ಕೆಲವೆಡೆ
ಮಳೆಯಾಗುವ
ಸಾಧ್ಯತೆ
ಇದೆ
ಎಂದು
ಹವಾಮಾನ
ಇಲಾಖೆ
ಮುನ್ಸೂಚನೆ
ನೀಡಿದೆ.
ಉತ್ತರ
ಒಳನಾಡಿನಲ್ಲಿ
ಒಣಹವೆ
ಮುಂದುವರೆಯಲಿದೆ.
ದಕ್ಷಿಣ ಕನ್ನಡ, ಉಡುಪಿಯಲ್ಲಿ ಮಳೆಯಾಗಲಿದ್ದು, ಉತ್ತರ ಕನ್ನಡದಲ್ಲಿ ಎರಡು ದಿನ ಒಣಹವೆ ಮುಂದುವರೆಯಲಿದ್ದು, ನವೆಂಬರ್ 30 ಹಾಗೂ ಡಿಸೆಂಬರ್ 1ರಂದು ಮಳೆಯಾಗಲಿದೆ.
ಇನ್ನು ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಹಾಸನ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಡಿಸೆಂಬರ್ 1ರವರೆಗೂ ಮಳೆ ಮುಂದುವರೆಯಲಿದೆ. ಕೊಡಗು, ಶಿವಮೊಗ್ಗ, ಮೈಸೂರು, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಬಳ್ಳಾರಿಯಲ್ಲಿ ಒಣಹವೆ ಮುಂದುವರೆಯಲಿದೆ.
ರಾಜ್ಯಾದ್ಯಂತ ಮುಂದಿನ 4 ದಿನಗಳ ಕಾಲ ಮಳೆಯ ಮುನ್ಸೂಚನೆ
ಇನ್ನು ಉತ್ತ ಒಳನಾಡಿನ ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ ನವೆಂಬರ್ 29ರಿಂದ ಎರಡು ದಿನಗಳ ಕಾಲ ಮಳೆಯಾಗಲಿದೆ.
ಇಂದಿನಿಂದ ರಾಜ್ಯದಲ್ಲಿ 3 ದಿನ ಚಂಡಮಾರುತ ಮಳೆ ಆಗುವ ಎಚ್ಚರಿಕೆ ನೀಡಲಾಗಿದೆ. ಇವತ್ತು ತಮಿಳುನಾಡಿಗೆ ಚಂಡಮಾರುತ ಅಪ್ಪಳಿಸಲಿದೆ. ಇವತ್ತು, ನಾಳೆ, ನಾಡಿದ್ದು ಮೂರು ದಿನ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಧಾರಾಕಾರ ಮಳೆ ಆಗುವ ಆಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಎಚ್ಚರಿಕೆ ನೀಡಲಾಗಿದೆ.
ಭಾರೀ ಮಳೆಯಾಗುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಕಂದಾಯ ಇಲಾಖೆ ಎಲ್ಲ ಜಿಲ್ಲಾಧಿಕಾರಿಗಳಿಗೂ ಸೂಚಿಸಿದೆ. ಈಗಾಗಲೇ ತಮಿಳುನಾಡಿನ ತೀರ ಪ್ರದೇಶದ ಜಿಲ್ಲೆಗಳಲ್ಲಿ ಮಳೆಯಾಗ್ತಿದ್ದು, ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಕೆಲವು ದಿನಗಳಿಂದ ಸತತವಾಗಿ ಸುರಿದ ಮಳೆಯಿಂದಾಗಿ ಜನ ಜೀವನ ತತ್ತರಿಸಿ ಹೋಗಿತ್ತು. ಆದರೆ ಮೂರ್ನಾಲ್ಕು ದಿನಗಳಿಂದ ಜನರಿಗೆ ರಿಲೀಫ್ ಕೊಟ್ಟಿದ್ದ ಮಳೆರಾಯ ಮತ್ತೆ ಅಬ್ಬರಿಸಲಿದ್ದಾನೆ. ಜನರಲ್ಲಿ ಮತ್ತೆ ಮಳೆ ಆತಂಕ ಶುರುವಾಗಿದೆ.
ಬೆಂಗಳೂರು ಹವಾಮಾನ ವರದಿ
ಬೆಂಗಳೂರಲ್ಲಿ
ಮೋಡಕವಿದ
ವಾತಾವರಣವಿರಲಿದ್ದು,
ಅಲ್ಲಲ್ಲಿ
ಮಳೆಯಾಗುವ
ಸಾಧ್ಯತೆ
ಇದೆ.
27
ಡಿಗ್ರಿ
ಸೆಲ್ಸಿಯಸ್
ಗರಿಷ್ಠ
ಉಷ್ಣಾಂಶ,
19
ಡಿಗ್ರಿ
ಸೆಲ್ಸಿಯಸ್
ಕನಿಷ್ಠ
ಉಷ್ಣಾಂಶ
ದಾಖಲಾಗಿದೆ.
ಎಚ್ಎಎಲ್ನಲ್ಲಿ
27.4
ಡಿಗ್ರಿ
ಸೆಲ್ಸಿಯಸ್
ಗರಿಷ್ಠ
ಉಷ್ಣಾಂಶ,
18.0
ಡಿಗ್ರಿ
ಸೆಲ್ಸಿಯಸ್
ಕನಿಷ್ಠ
ಉಷ್ಣಾಂಶ,
ನಗರದಲ್ಲಿ
27.0
ಡಿಗ್ರಿ
ಸೆಲ್ಸಿಯಸ್
ಗರಿಷ್ಠ
ಉಷ್ಣಾಂಶ,
19.1
ಡಿಗ್ರಿ
ಸೆಲ್ಸಿಯಸ್
ಕನಿಷ್ಠ
ಉಷ್ಣಾಂಶ,
ಕೆಐಎಎಲ್ನಲ್ಲಿ
26.8
ಡಿಗ್ರಿ
ಸೆಲ್ಸಿಯಸ್
ಗರಿಷ್ಠ
ಉಷ್ಣಾಂಶ,
18.8
ಡಿಗ್ರಿ
ಸೆಲ್ಸಿಯಸ್
ಕನಿಷ್ಠ
ಉಷ್ಣಾಂಶ
ದಾಖಲಾಗಿದೆ.
ಮಳೆಯಾಗಲಿರುವ ಪ್ರದೇಶಗಳು
ಮುಂದಿನ
24
ಗಂಟೆಗಳಲ್ಲಿ
ಕರಾವಳಿ
ಹಾಗೂ
ದಕ್ಷಿಣ
ಒಳನಾಡಿನ
ಒಂದೆರಡು
ಕಡೆಗಳಲ್ಲಿ
ಗುಡುಗು
ಸಹಿತ
ಬಹಳ
ಮಳೆಯಾಗುವ
ಸಾಧ್ಯತೆ
ಇದೆ,
ಉತ್ತರ
ಒಳನಾಡಿನಲ್ಲಿ
ಒಣಹವೆ
ಮುಂದುವರೆಯಲಿದೆ.
ದಕ್ಷಿಣ
ಕನ್ನಡ,
ಉಡುಪಿಯಲ್ಲಿ
ಮಳೆಯಾಗಲಿದ್ದು,
ಉತ್ತರ
ಕನ್ನಡದಲ್ಲಿ
ಎರಡು
ದಿನ
ಒಣಹವೆ
ಮುಂದುವರೆಯಲಿದ್ದು,
ನವೆಂಬರ್
30
ಹಾಗೂ
ಡಿಸೆಂಬರ್
1ರಂದು
ಮಳೆಯಾಗಲಿದೆ.
ಇನ್ನು
ದಕ್ಷಿಣ
ಒಳನಾಡಿನ
ಬೆಂಗಳೂರು
ಗ್ರಾಮಾಂತರ,
ಬೆಂಗಳೂರು
ನಗರ,
ಹಾಸನ,
ಕೋಲಾರ,
ಮಂಡ್ಯ,
ರಾಮನಗರ,
ತುಮಕೂರು
ಜಿಲ್ಲೆಗಳಲ್ಲಿ
ಡಿಸೆಂಬರ್
1ರವರೆಗೂ
ಮಳೆ
ಮುಂದುವರೆಯಲಿದೆ.
ಕೊಡಗು,
ಶಿವಮೊಗ್ಗ,
ಮೈಸೂರು,
ದಾವಣಗೆರೆ,
ಚಿತ್ರದುರ್ಗ,
ಚಿಕ್ಕಮಗಳೂರು,
ಚಿಕ್ಕಬಳ್ಳಾಪುರ,
ಬಳ್ಳಾರಿಯಲ್ಲಿ
ಒಣಹವೆ
ಮುಂದುವರೆಯಲಿದೆ.
ಕನಿಷ್ಠ ಉಷ್ಣಾಂಶ ದಾಖಲಾಗಿರುವುದೆಲ್ಲಿ?
ಬೀದರ್ನಲ್ಲಿ 15.5 ಡಿಗ್ರಿ ಸೆಲ್ಸಿಯಸ್ ಅತಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
Recommended Video
ತಮಿಳುನಾಡಿನಲ್ಲಿ ಭಾರಿ ಮಳೆ
ತಮಿಳುನಾಡಿನಲ್ಲಿ ಮಳೆಯ ರೌದ್ರನರ್ತನ ಮುಂದುವರಿದಿದೆ. ರಾಜ್ಯದ ಐದು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.
ತಮಿಳುನಾಡಿನ ತಿರುನೆಲ್ವೇಲಿ, ತೂತುಕುಡಿ, ರಾಮನಾಥಪುರಂ, ಪುದುಕೊಟ್ಟೈ ಮತ್ತು ನಾಗಪಟ್ಟಣಂ ಜಿಲ್ಲೆಗಳಲ್ಲಿ ಅತಿಹೆಚ್ಚು ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 27 ಜಿಲ್ಲೆಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ರಾಜ್ಯದಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಸಾಕಷ್ಟು ಪ್ರಮಾಣದ ಬೆಳೆ ಹಾನಿಯಾಗಿದೆ. ಹಲವು ಪ್ರದೇಶಗಳಲ್ಲಿ ಕಟ್ಟಡಗಳು ಮುಳುಗಡೆಯಾಗಿದ್ದರೆ, ರಸ್ತೆಗಳು ಜಲಾವೃತಗೊಂಡಿದ್ದು, ಪ್ರವಾಹ ಪರಿಸ್ಥಿತಿಯನ್ನು ಸೃಷ್ಟಿಸಿವೆ.
ತಮಿಳುನಾಡಿನಲ್ಲಿ ಕಳೆದ ತಿಂಗಳಿನಿಂದ ಸುರಿಯುತ್ತಿರುವ ಸತತ ಮಳೆಯ ಹಿನ್ನೆಲೆಯಲ್ಲಿ ತೂತುಕುಡಿ, ಕನ್ಯಾಕುಮಾರಿ, ತಿರುನಲ್ವೇಲಿ, ಕಡಲೂರು, ತಿರುವರೂರು, ತೆಂಕಶಿ ಮತ್ತು ವಿಲ್ಲುಪುರಂ ಸೇರಿದಂತೆ 27 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪುದುಚೇರಿ ಮತ್ತು ಕಾರೈಕಲ್ನಲ್ಲಿ ಶಿಕ್ಷಣ ಸಂಸ್ಥೆಗಳಿಗೂ ರಜೆ ಘೋಷಿಸಲಾಗಿದೆ.