ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಗಳಲ್ಲಿ ಗಾಳಿ ಸಹಿತ ಧಾರಾಕಾರ ಮಳೆ
ಬೆಂಗಳೂರು, ಆಗಸ್ಟ್ 04: ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಗಳಲ್ಲಿ ಗಾಳಿ ಸಹಿತ ಧಾರಾಕಾರ ಮಳೆ ಸುರಿದಿದೆ.
Recommended Video
ಮಂಕಿ, ಸುಬ್ರಹ್ಮಣ್ಯ, ಮಾಣಿ,ಗೋಕರ್ಣ, ಸಿದ್ದಾಪುರ, ಮಂಗಳೂರು ಏರ್ಪೋರ್ಟ್ನಲ್ಲಿ 9 ರಿಂದ 11 ಸೆಂ.ಮೀನಷ್ಟು ಮಳೆಯಾಗಿದೆ.
ಮೂಡಬಿದಿರೆ, ಉಪ್ಪಿನಂಗಡಿ, ಸುಳ್ಯ, ಪಣಂಬೂರು, ಕುಂದಾಪುರ, ಕೊಲ್ಲೂರು, ಭಟ್ಕಳ, ಹೊನ್ನಾವರ, ಧರ್ಮಸ್ಥಳ, ಶಿರಾಲಿ, ಲಿಂಗನಮಕ್ಕಿ, ಮಡಿಕೇರಿ, ತಾಳಗುಪ್ಪ, ಮಂಚಿಕೆರೆ, ಹೊಸನಗರ, ಯಲ್ಲಾಪುರ, ಕಳಸ, ಮೂಡಿಗೆರೆ, ಹನುಮಸಾಗರ, ಶೃಂಗೇರಿ, ಅರಕಲಗೂಡು, ಜಯಪುರ, ಹಾರಂಗಿ, ಯಲ್ಲಾಪುರ, ಕಮ್ಮರಡಿ, ಹಾರಂಗಿ, ಜಯಪುರ, ಮಂಚಿಕೆರೆ, ತಾಳಗುಪ್ಪ, ಕಳಸ, ಬನವಾಸಿ, ಮುನಿರಾಬಾದ್, ಬಾದಾಮಿ, ಆಲೂರು, ಮಾಲೂರು, ಮೈಸೂರು, ಹುಣಸೂರು, ಪೆರಿಯಾಪಟ್ಟಣ, ಎನ್ಆರ್ ಪುರ, ಟಿ ನರಸೀಪುರ, ಯಳಂದೂರು, ಎಲೆಕ್ಟ್ರಾನಿಕ್ ಸಿಟಿ, ಜಿಕೆವಿಕೆಯಲ್ಲಿ ಮಳೆಯಾಗಿದೆ. ಆಗಸ್ಟ್ 8ರವರೆಗೆ ಭಾರಿ ಮಳೆಯಾಗಲಿದೆ.
ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗದಲ್ಲಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್, ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ. ಎರಡು ದಿನಗಳ ನಿರಂತರ ಮಳೆಗೆ ಕುಮಾರಾಧಾರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟ ಮುಳುಗಡೆಯಾಗಿದೆ. ಚಿಕ್ಕಮಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆಗೆ ಚಾರ್ಮಾಡಿ ಘಾಟ್ನಲ್ಲಿ ಗುಡ್ಡದ ಮಣ್ಣು ಕುಸಿದಿದೆ.