ವಾಯುಭಾರ ಕುಸಿತ: ರಾಜ್ಯದ 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ
ಬೆಂಗಳೂರು, ಆಗಸ್ಟ್ 27: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಉಂಟಾಗಿದ್ದು ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರಿಯಲಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಒಟ್ಟು 16 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
Recommended Video
ಬೆಂಗಳೂರು ಹಾಗೂ ಸುತ್ತಮುತ್ತ ಸಾಮಾನ್ಯವಾದ ಮೋಡ ಕವಿದ ವಾತಾವರಣವಿರಲಿದ್ದು, ಹಗುರ ಮಳೆಯಾಗುವ ಸಾಧ್ಯತೆಯಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಇದೇ 30ರವರೆಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಕಾಟ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಆಗಸ್ಟ್ 28 ರಿಂದ 2 ದಿನ ರಾಜ್ಯದ 13 ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ
ರಾಜ್ಯದಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಕಳೆದ ಕೆಲ ದಿನಗಳಿಂದ ವರುಣನ ಅಬ್ಬರ ಮುಂದುವರೆದಿದೆ. ಕೆಲವೆಡೆ ಜಿಟಿ ಜಿಟಿ ಮಳೆಯಾದರೆ, ಇನ್ನೂ ಕೆಲವೆಡೆ ಧಾರಾಕಾರ ಮಳೆ ಸುರಿದಿದೆ.
ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ರಾಜ್ಯದ ಇಂದು ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಉಳಿದಂತೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲೂ ಇಂದು ಮಳೆ ಮುಂದುವರೆಯಲಿದೆ.
ಮಲೆನಾಡು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿದ್ದು, ಇಂದೂ ಸಹ ಮಳೆ ಮುಂದುವರೆಯಲಿದೆ. ಆ. 28ರಿಂದ 2 ದಿನ ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಶಿವಮೊಗ್ಗ, ರಾಮನಗರ, ಕೊಡಗು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ ಮತ್ತು ಕೋಲಾರ ಈ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಲಿದೆ.
ಮಳೆಯಾಗಿರುವ ಪ್ರದೇಶಗಳು
ಭಟ್ಕಳ, ಕಮಲಾಪುರ, ಬೀದರ್, ಶಿರಾಲಿ, ಗೋಕರ್ಣ, ಆಗುಂಬೆ, ಕುಣಿಗಲ್, ಚಾಮರಾಜನಗರ, ಕೃಷ್ಣರಾಜಪೇಟೆ, ಎಂಎಂ ಹಿಲ್ಸ್, ಕಾರವಾರ, ಮಂಕಿ, ಅಂಕೋಲ, ಹಳಿಯಾಳ, ಮುಲ್ಕಿ, ಜೇವರಗಿ, ಕಲಬುರಗಿ, ಹುಮ್ನಾಬಾದ್, ಹೊಸದುರ್ಗದಲ್ಲಿ ಮಳೆಯಾಗಿದೆ.
ಬೆಂಗಳೂರು ಹವಾಮಾನ ವರದಿ
ಬೆಂಗಳೂರಲ್ಲಿ 30 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಎಚ್ಎಎಲ್ನಲ್ಲಿ 29.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 28.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಕೆಐಎಎಲ್ನಲ್ಲಿ 28.6 ಡಿಗ್ರಿಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಉತ್ತರ ಒಳನಾಡಿನಲ್ಲಿ ಮಳೆ
ಈ
ಬಾರಿ
ಉತ್ತರ
ಒಳನಾಡಿನ
ಎಲ್ಲ
ಜಿಲ್ಲೆಗಳಲ್ಲಿಯೂ
ವಾಡಿಕೆಗಿಂತ
ಹೆಚ್ಚು
ಮಳೆಯಾಗಿದೆ.
ದಕ್ಷಿಣ
ಒಳನಾಡಿನ
16
ಜಿಲ್ಲೆಯ
ಪೈಕಿ
10
ಜಿಲ್ಲೆಗಳಲ್ಲಿ
ಉತ್ತಮ
ಮಳೆಯಾಗಿದೆ.
ಕರಾವಳಿಯ
ಮೂರು
ಜಿಲ್ಲೆಯಲ್ಲಿಯೂ
ಇಂದಿನಿಂದ
ಆ.
30ರವರೆಗೆ
ವ್ಯಾಪಕ
ಮಳೆಯಾಗಲಿದೆ.
ತಮಿಳುನಾಡು
ಮತ್ತು
ಕೇರಳ,
ಬಿಹಾರ,
ಉತ್ತರ
ಪ್ರದೇಶ,
ಉತ್ತರಾಖಂಡ
ರಾಜ್ಯಗಳಲ್ಲಿ
ಇಂದು
ಅಧಿಕ
ಮಳೆಯಾಗಲಿದೆ
ಎಂದು
ಹವಾಮಾನ
ಇಲಾಖೆ
ಮುನ್ಸೂಚನೆ
ನೀಡಿದೆ.
ಅಸ್ಸಾಂ,
ಮೇಘಾಲಯದಲ್ಲಿ
ಕೂಡ
ಭಾರೀ
ಮಳೆಯಾಗಲಿದೆ.
ಕರ್ನಾಟಕದ
ಬಾಗಲಕೋಟೆ,
ಬೆಳಗಾವಿ,
ಬೀದರ್,
ರಾಯಚೂರು,
ಧಾರವಾಡ,
ಹಾವೇರಿ,
ಗದಗ,
ಬಳ್ಳಾರಿ,
ಮಂಡ್ಯ,
ತುಮಕೂರು
ಜಿಲ್ಲೆಗಳಲ್ಲಿ
ಕಳೆದ
ವರ್ಷಕ್ಕಿಂತಲೂ
ಹೆಚ್ಚು
ಮಳೆಯಾಗಿದೆ.
ಈ
ಜಿಲ್ಲೆಗಳಲ್ಲಿ
ಇನ್ನೆರಡು
ದಿನ
ಹಗುರ
ಮಳೆಯಾಗಲಿದೆ.
ಇಂದು
ಬೆಂಗಳೂರು
ನಗರ,
ಬೆಂಗಳೂರು
ಗ್ರಾಮಾಂತರ,
ಚಿಕ್ಕಬಳ್ಳಾಪುರ,
ಚಿಕ್ಕಮಗಳೂರು,
ಹಾಸನ,
ಕೊಡಗು,
ಕೋಲಾರ,
ರಾಮನಗರ,
ಶಿವಮೊಗ್ಗ
ಜಿಲ್ಲೆಗಳಲ್ಲಿ
ಮಳೆ
ಹೆಚ್ಚಾಗಲಿದೆ.
ಕರಾವಳಿಯ
ಉಡುಪಿ,
ದಕ್ಷಿಣ
ಕನ್ನಡ,
ಉತ್ತರ
ಕನ್ನಡ,
ಉತ್ತರ
ಒಳನಾಡಿನ
ಜಿಲ್ಲೆಗಳಾದ
ಬೆಳಗಾವಿ,
ಬೀದರ್,
ಧಾರವಾಡ,
ಗದಗ,
ಹಾವೇರಿ,
ಕಲಬುರ್ಗಿ,
ಕೊಪ್ಪಳ,
ರಾಯಚೂರು,
ವಿಜಯಪುರ,
ಯಾದಗಿರಿಯಲ್ಲಿ
ಇನ್ನೆರಡು
ದಿನ
ಮಳೆಯಾಗಲಿದೆ.
ಯೆಲ್ಲೋ ಅಲರ್ಟ್ ಘೋಷಿಸಿರುವ ಜಿಲ್ಲೆಗಳು
ತುಮಕೂರು, ರಾಮನಗರ, ಮಂಡ್ಯ, ಕೊಡಗು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ಕೊಪ್ಪಳ, ಬೀದರ್, ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.