ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆ ಹಾನಿ: ರಾಜ್ಯದಲ್ಲಿ ವಿಕೋಪದಿಂದ 10 ಸಾವಿರ ಕೋಟಿ ರು ನಷ್ಟ!

|
Google Oneindia Kannada News

ಬೆಂಗಳೂರು, ಆ. 14: ಮಳೆ ಹಾನಿ, ಪ್ರವಾಹದಿಂದ ಬಳಲಿರುವ ಕರ್ನಾಟಕಕ್ಕೆ 4 ಸಾವಿರ ಕೋಟಿ‌ ಪರಿಹಾರಕ್ಕೆ ಮನವಿ ಮಾಡಿಕೊಂಡಿದೆ. ವಿಕೋಪದಿಂದ ರಾಜ್ಯದಲ್ಲಿ ಸುಮಾರು 10 ಸಾವಿರ ಕೋಟಿ ರು ಗೂ ಅಧಿಕ ಮೌಲ್ಯದಷ್ಟು ಆಸ್ತಿ ಪಾಸ್ತಿ ನಷ್ಟವಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ನಿಧಿಗೆ 395 ಕೋಟಿ ರೂ ಮುಂಗಡವಾಗಿ ಕೊಡಿ ಎಂದು ಮನವಿ ಮಾಡಿಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಎರಡು ಥರದ ಗಾಳಿ ಬೀಸಿದ್ದು, ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯಿಂದ ನದಿಗಳು ತುಂಬಿವೆ. 56 ತಾಲೂಕುಗಳಲ್ಲಿ ಹಾನಿಯಾಗಿದ್ದು, 885 ಗ್ರಾಮಗಳು ಪ್ರವಾಹ ಪೀಡಿತವವಾಗಿವೆ. 3,500 ಕಿ.ಮೀ ರಸ್ತೆ ಹಾಳಾಗಿದ್ದು, 85 ಸಾವಿರ ಎಕರೆ ಬೆಳೆ ಹಾನಿಯಾಗಿದೆ. 3 ಸಾವಿರ ಮನೆಗಳು, 250 ಸೇತುವೆಗಳು ಹಾನಿಯಾಗಿದೆ. 392 ಕಟ್ಟಡಗಳು ಮಳೆಗೆ ಹಾನಿಯಾಗಿದ್ದು, ಕೇಂದ್ರದ 4 ರಕ್ಷಣಾ ಹೆಲಿಕಾಪ್ಟರ್ ಮೀಸಲಿರಿಸಿದೆ. ರಾಜ್ಯದಲ್ಲಿ ಈಗಾಗಲೆ 4 NDRF ತಂಡಗಳಿವೆ. 4 ಸಾವಿರ ಕೋಟಿ ನಷ್ಟದ ಅಂದಾಜು ಮಾಡಲಾಗಿದೆ. ರಾಜ್ಯ ಕೈಗೊಂಡ ಕ್ರಮಗಳ ಬಗ್ಗೆಯೂ ಪ್ರಧಾನಿ ಗಮನಕ್ಕೆ ತಂದಿದ್ದೇವೆ ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Rain-related losses Rs 10,000 crore, Rs 4,000 crore financial assistance sought

ನೆರೆ ಪರಿಹಾರ: ಮನೆ ಕಳೆದುಕೊಂಡವರಿಗೆ 50,000 ದಿಂದ 5 ಲಕ್ಷ ಪರಿಹಾರ ನೆರೆ ಪರಿಹಾರ: ಮನೆ ಕಳೆದುಕೊಂಡವರಿಗೆ 50,000 ದಿಂದ 5 ಲಕ್ಷ ಪರಿಹಾರ

ಒಟ್ಟು 13 ಜಿಲ್ಲೆಗಳಲ್ಲಿ ಆಗಸ್ಟ್ 1ರತನಕ ಭಾರಿ ಮಳೆ ಸುರಿದಿದೆ. ನೂರಾರು ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ. 18 ಮಂದಿ ಹಾಗೂ 42 ಪ್ರಾಣಿಗಳನ್ನು ಮಳೆ ಬಲಿ ತೆಗೆದುಕೊಂಡಿವೆ, 125 ಮನೆಗಳು ಸಂಪೂರ್ಣ ನಾಶವಾಗಿದ್ದರೆ, 3639 ಮನೆ ಅರ್ಧಂಬರ್ಧ ಜಖಂಗೊಂಡಿವೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿಯಂತ್ರಣ ಸಂಸ್ಥೆ ಹೇಳಿದೆ.

Rain-related losses Rs 10,000 crore, Rs 4,000 crore financial assistance sought

ಮಳೆ ಹಾನಿ: ಪ್ರಧಾನಿ ಮೋದಿ ಎದುರು 5 ಬೇಡಿಕೆಗಳನ್ನು ಇಟ್ಟ ಕರ್ನಾಟಕಮಳೆ ಹಾನಿ: ಪ್ರಧಾನಿ ಮೋದಿ ಎದುರು 5 ಬೇಡಿಕೆಗಳನ್ನು ಇಟ್ಟ ಕರ್ನಾಟಕ

ಸುಮಾರು 43,827 ಹೆಕ್ಟರ್ ನಷ್ಟು ಕೃಷಿಭೂಮಿ, 48,696 ಹೆಕ್ಟರು ತೋಟ ಕೇವಲ 10 ದಿನಗಳ ಮಳೆಯಲ್ಲೇ ನಾಶವಾಗಿದೆ. 109ಕ್ಕೂ ಅಧಿಕ ಮಂದಿ ಪರಿಹಾರ ಕೇಂದ್ರಗಳಲ್ಲಿ 3500 ಮಂದಿ ಆಶ್ರಯ ಪಡೆದುಕೊಂಡಿದ್ದಾರೆ. 50 ರಿಂದ 100 ರಸ್ತೆ, ಸೇತುವೆಗಳು ಹಾನಿಗೊಂಡಿವೆ, ಒಟ್ಟಾರೆ, 16,633 ಕಿ. ಮೀ ರಸ್ತೆ, ಹೆದ್ದಾರಿಗಳು ನಾಶವಾಗಿವೆ ಎಂದು ಲೋಕೋಪಯೋಗಿ ಇಲಾಖೆ ಮಾಹಿತಿ ನೀಡಿದೆ.

English summary
The loss due to monsoon fury is estimated to be close to Rs 10,000 crore, as per the latest assessment. Based on the initial assessment, the government had sought Rs 4,000 crore financial assistance from the Centre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X