ರಾಜ್ಯದ 5 ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ, ಉಳಿದೆಡೆ ಒಣಹವೆ ಮುಂದುವರಿಕೆ
ಬೆಂಗಳೂರು, ಅಕ್ಟೋಬರ್ 16: ಇಂದು ಕರ್ನಾಟಕದ ಐದು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಉಳಿದೆಡೆ ಒಣಹವೆ ಮುಂದುವರೆಯಲಿದೆ.
ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿಯಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಯೆಲ್ಲೋ ಅಲರ್ಟ್ ಘೋಷಿಸಿದೆ.
ಕರ್ನಾಟಕದ 6 ಜಿಲ್ಲೆಗಳಿಗೆ ರೆಡ್ ಅಲರ್ಟ್: ಗಾಳಿ ಸಹಿತ ಧಾರಾಕಾರ ಮಳೆ
ಕೊಲ್ಲೂರಿನಲ್ಲಿ 22 ಸೆಂ.ಮೀ, ಹೊಸನಗರದಲ್ಲಿ 21ಸೆಂ.ಮೀ ಮಳೆಯಾಗಿದೆ. ಕೊಟ್ಟಿಗೆಹಾರ, ಹುಂಚದಕಟ್ಟೆ, ಆಗುಂಬೆ, ಭಟ್ಕಳದಲ್ಲೂ ಹೆಚ್ಚು ಮಳೆಯಾಗಿದೆ.
ಮಂಕಿ, ಕದ್ರ, ಕಾರವಾರ, ಹೊನ್ನಾವರ, ಶಿರಾಲಿ, ಸಿದ್ದಾಪುರ, ಗೋಕರ್ಣ, ಕುಡಚಿ, ಶೃಂಗೇರಿ,ವಿಟ್ಲ, ಹಿರೇಕೆರೂರು, ಪಣಂಬೂರು, ಧಾರವಾಡ, ಕೂಡ್ಲಿಗಿ, ದಾವಣಗೆರೆ, ಭರಮಸಾಗರ, ಚಿಕ್ಕಮಗಳೂರು, ಅಜ್ಜಂಪುರ,ಸೋಮವಾರಪೇಟೆಯಲ್ಲಿ ಮಳೆಯಾಗಿದೆ.
ಶಿರಾಲಿಯಲ್ಲಿ
ಅತಿ
ಹೆಚ್ಚು
ಅಂದರೆ
29.2
ಡಿಗ್ರಿ
ಸೆಲ್ಸಿಯಸ್
ಉಷ್ಣಾಂಶ
ದಾಖಲಾಗಿದೆ.
ದಾವಣಗೆರೆಯಲ್ಲಿ
ಅತಿ
ಕಡಿಮೆ
ಅಂದರೆ
19.3
ಡಿಗ್ರಿ
ಸೆಲ್ಸಿಯಸ್
ಉಷ್ಣಾಂಶ
ದಾಖಲಾಗಿದೆ.
ಬೆಂಗಳೂರಿನಲ್ಲಿ
ಮೋಡಕವಿದ
ವಾತಾವರಣವಿದ್ದು
27
ಡಿಗ್ರಿ
ಸೆಲ್ಸಿಯಸ್
ಗರಿಷ್ಠ
ಉಷ್ಣಾಂಶ,
20
ಡಿಗ್ರಿ
ಸೆಲ್ಸಿಯಸ್
ಕನಿಷ್ಠ
ಉಷ್ಣಾಂಶ
ದಾಖಲಾಗಿದೆ.
Recommended Video
ಅಕ್ಟೋಬರ್ 16 ರಂದು ಕೆಲವು ಪ್ರದೇಶಗಳಲ್ಲಿ ಸಾಧಾರಣದಿಂದ ಕೂಡಿದ ಭಾರಿ ಮಳೆಯಾಗುವ ಸಾದ್ಯತೆ ಇದೆ. ಕರ್ನಾಟಕದ ಕರಾವಳಿಯ ಹಲವು ಪ್ರದೇಶಗಳಲ್ಲಿ, ಗೋವಾ ಮತ್ತು ಕೊಂಕಣ ಪ್ರದೇಶದಲ್ಲಿ ಭಾರಿ ಮಳೆ (ದಿನಕ್ಕೆ 20ಸೆಂಟಿಮೀಟರ್ ಗೂ ಅಧಿಕ) ಸಾಧ್ಯತೆ. ಮತ್ತು ಮಧ್ಯ ಮಹಾರಾಷ್ಟ್ರ ಹಾಗೂ ದಕ್ಷಿಣ ಗುಜರಾತ್ ನಲ್ಲೂ ಭಾರಿ ಮಳೆಯಾಗುವ ನಿರೀಕ್ಷೆ ಇದೆ.