ರೈಲ್ವೆ ಬಜೆಟ್: 'ಪ್ರಭು' ದಯೆ ಕರ್ನಾಟಕಕ್ಕೆ ಸಿಗುವುದೇ?
ಬೆಂಗಳೂರು, ಫೆ.25: ಕನ್ನಡಿಗರಾದ ಮಲ್ಲಿಕಾರ್ಜುನ ಖರ್ಗೆ, ಸದಾನಂದ ಗೌಡ ಅವರು ಕೇಂದ್ರ ರೈಲ್ವೆ ಬಜೆಟ್ ನಲ್ಲಿ ಕರ್ನಾಟಕಕ್ಕೆ ಒಂದಷ್ಟು ಕೊಡುಗೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಘೋಷಿಸಿದ್ದರು.
ಆದರೆ, ಈ ಬಾರಿ ಎನ್ ಡಿಎ ಸರ್ಕಾರದ ಪೂರ್ಣ ಪ್ರಮಾಣದ ರೈಲ್ವೆ ಬಜೆಟ್ ನಲ್ಲಿ ಸುರೇಶ್ 'ಪ್ರಭು' ದಯೆ ನಮ್ಮ ರಾಜ್ಯದ ಮೇಲೆ ಬೀಳುವುದೇ ಕಾದು ನೋಡೋಣ.. ಫೆ.26ರಂದು ಒನ್ ಇಂಡಿಯಾದಲ್ಲಿ ಬಜೆಟ್ ಲೈವ್ ಕವರೇಜ್ ತಪ್ಪದೇ ಓದಿ...[ವಿಡಿಯೋ: ಜನರ ನಿರೀಕ್ಷೆಗಳೇನು?]
ಈ ಬಾರಿಯೂ ಕೂಡಾ ಕನ್ನಡಿಗರು ಹೆಚ್ಚಿನ ಇಂಟರ್ ಸಿಟಿ ರೈಲು, ಹೊಸ ಮಾರ್ಗಗಳು, ಸೂಪರ್ ಫಾಸ್ಟ್ ರೈಲುಗಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪಕ್ಕದ ರಾಜ್ಯ ಆಂಧ್ರಪ್ರದೇಶ ಹಾಗೂ ತೆಲಂಗಾಣಕ್ಕೆ ಭರ್ಜರಿ ಗಿಫ್ಟ್ ಸಿಕ್ಕರೆ ಅದರಲ್ಲಿ ಸ್ವಲ್ಪ ಪಾಲು ಗಡಿಭಾಗದ ಕರ್ನಾಟಕಕ್ಕೂ ಸಿಗಲಿದೆ. ಮುಖ್ಯವಾಗಿ ಕಡಪ-ಬೆಂಗಳೂರು ಹೊಸ ರೈಲು ಮಾರ್ಗದ ಬಗ್ಗೆ ನಿರೀಕ್ಷೆ ಹೆಚ್ಚಿದೆ.[ರೈಲು ಪ್ರಯಾಣಿಕರ ಮೇಲೆ ಬೆಲೆ ಏರಿಕೆ ಹೊರೆ?]
ಹುಬ್ಬಳ್ಳಿ-ಅಂಕೋಲ, ಚಾಮರಾಜನಗರ-ಮೆಟ್ಟುಪಾಳ್ಯ, ಚಾಮರಾಜನಗರ-ಸತ್ಯಮಂಗಲ, ಕುಶಾಲನಗರ-ಮಡಿಕೇರಿ ಮತ್ತು ತಾಳಗುಪ್ಪ-ಹೊನ್ನಾವರ ನೂತನ ಮಾರ್ಗಗಳು ಹಾಗೂ ಸಕಲೇಶಪುರ-ಸುಬ್ರಹ್ಮಣ್ಯ ಜೋಡಿ ಮಾರ್ಗ ರಚನೆ ಆಗಬೇಕಿದೆ ಚಾಲ್ತಿಯಲ್ಲಿರುವ ಈ ಕಾಮಗಾರಿಗಳ ನಡುವೆ ಹೊಸ ಮಾರ್ಗಗಳ ಬೇಡಿಕೆ ಈ ಬಾರಿ ಹೆಚ್ಚಾಗಿದೆ. [ರೈಲ್ವೆ ಬಜೆಟ್ 2014 : ಕರ್ನಾಟಕಕ್ಕೆ ಸಿಕ್ಕಿದ್ದೇನು?]
ಈ
ಬಾರಿಯ
ಬೇಡಿಕೆಗಳನ್ನು
ವಲಯವಾರು
ರೀತಿಯಲ್ಲಿ
ಮುಂದೆ
ನೋಡಿ..
ಮೋದಿ ಕನಸಿನಂತೆ ಬಜೆಟ್ ಮಂಡನೆ
*
ಮೋದಿ
ಕನಸಿನ
ಡೈಮಂಡ್
ಚತುಷ್ಪಥ
ಯೋಜನೆ-ದೇಶದ
ಮೆಟ್ರೋ
ನಗರಗಳನ್ನು
ಹೈ
ಸ್ಪೀಡ್
ರೈಲಿನ
ಮೂಲಕ
ಸಂಪರ್ಕ
ಸಾಧಿಸುವ
ಯೋಜನೆ.
*
ಬಾಕಿ
ಉಳಿದಿರುವ
300
ಯೋಜನೆಗೆ
1.7
ಲಕ್ಷ
ಕೋಟಿ
ಸಂಗ್ರಹ
*
ಪ್ರಯಾಣಿಕರ
ಸುರಕ್ಷತೆಗೆ
ತಂತ್ರಜ್ಞಾನ
ಬಳಕೆ,
ರೈಲ್ವೆ
ಸುರಕ್ಷತಾ
ದಳ(ಆರ್
ಪಿಎಫ್)ಕ್ಕೆ
ಹೆಚ್ಚಿನ
ಶಕ್ತಿ.
*
ಈಶಾನ್ಯ
ರಾಜ್ಯಗಳಿಗೆ
ಹೆಚ್ಚಿನ
ಅನುದಾನ,
ಹೊಸ
ಮಾರ್ಗ.
*
ವೈಫೈ
ಬಳಕೆ
ಹೆಚ್ಚಳ,
ಆರ್
ಎಫ್
ಐಡಿ
ಮೂಲಕ
ರೈಲುಗಳ
ಸಂಚಾರ
ಟ್ರ್ಯಾಕಿಂಗ್.
*
ಸ್ವಚ್ಛ
ಭಾರತ
ಅಭಿಯಾನ
ರೈಲುಗಳಿಗೂ
ಅಳವಡಿಕೆ
ಉತ್ತರ ಕರ್ನಾಟಕ ಭಾಗದ ಜನರ ನಿರೀಕ್ಷೆಗಳೇನು
*
ಬಾಗಲಕೋಟೆ-ಕುಡಚಿಗೆ
ಹೊಸ
ಮಾರ್ಗದ
ನಿರೀಕ್ಷೆಯಿದೆ.
*
ಬಳ್ಳಾರಿ-ಹೊಸಪೇಟೆ
ಟು
ಬೆಂಗಳೂರು
ಇಂಟರ್ಸಿಟಿ
ರೈಲು
ಓಡಾಡಿದ್ರೆ
ಲಕ್ಷಾಂತರ
ಜನರಿಗೆ
ಅನುಕೂಲವಾಗಲಿದೆ.
*
ಗುಂತಕಲ್,
ಬಿಜಾಪುರ-ಬಳ್ಳಾರಿ
ಇಂಟರ್ಸಿಟಿ
ರೈಲು
ಹಾಗೇ
ಬೀದರ್
ಗುಲ್ಬರ್ಗಾ
ನಡುವೆ
ರೈಲು
ಮಾರ್ಗ
ಬೇಕಿದೆ.
*
ರಾಯಚೂರಿನಲ್ಲಿ
ರೈಲು
ವಿಭಾಗದ
ಕಚೇರಿ
ಸ್ಥಾಪನೆಯಾಗಲಿ
ಅನ್ನೋ
ಬೇಡಿಕೆ
ಉತ್ತರ
ಕರ್ನಾಟಕ
ಭಾಗದ
ಜನರಲ್ಲಿದೆ.
ಮಲೆನಾಡು ಭಾಗದ ನಿರೀಕ್ಷೆಗಳೇನು..?
*
ಶಿವಮೊಗ್ಗ-ಹೊನ್ನಾವರ
ಮಾರ್ಗ
*
ಶಿವಮೊಗ್ಗ-ಹರಿಹರ
ಮಾರ್ಗ
*
ಶಿವಮೊಗ್ಗ-ಬೆಂಗಳೂರಿಗೆ
ಹೆಚ್ಚುವರಿ
ರೈಲು
*
ಶಿವಮೊಗ್ಗ-ಅರಸೀಕೆರೆ
ಮಾರ್ಗ
ಡಬ್ಲಿಂಗ್
*
ಶಿವಮೊಗ್ಗ
ಕಡೂರು
ಚಿಕ್ಕಮಗಳೂರು
ರೈಲು
ಹಾಸನದವರೆಗೂ
ವಿಸ್ತರಣೆ
ಮಧ್ಯ ಕರ್ನಾಟಕ ಭಾಗದ ನಿರೀಕ್ಷೆಗಳೇನು..?
*
ಹೈದರಾಬಾದ್-
ಚಿತ್ರದುರ್ಗ-
ಮೈಸೂರು
ರೈಲು
*
ಯಶವಂತಪುರ-
ಜೋಧಪುರ
ರೈಲು
ಮಾರ್ಗವನ್ನು
ಖಾಯಂಗೊಳಿಸ್ಬೇಕು
*
ಚಿತ್ರದುರ್ಗ
ರೈಲು
ನಿಲ್ದಾಣವನ್ನು
"
ಡಿ"
ದರ್ಜೆಯಿಂದ
"ಬಿ"
ದರ್ಜೆಗೆ
ಏರಿಸಬೇಕು
*
ಹುಬ್ಬಳ್ಳಿಯಿಂದ
ಬೆಂಗಳೂರಿಗೆ
ಹೋಗುವ
ಎಲ್ಲ
ರೈಲುಗಳನ್ನು
ಧಾರವಾಡದಿಂದ
ಬಿಡಬೇಕು
ಹಳೇ ಮೈಸೂರು ಪ್ರಾಂತ್ಯದ ಬೇಡಿಕೆಗಳೇನು?
*
ಮೈಸೂರು-ದೆಹಲಿ
ಸ್ವರ್ಣ
ಜಯಂತಿ
ಏಕ್ಸ್
ಪ್ರೆಸ್
(ವಾರಕೊಮ್ಮೆ
ಇರುವ
ರೈಲು
ವಾರಕ್ಕೆ
2
ಬಾರಿ
ಬರಲಿ)
*
ಬೆಂಗಳೂರು-ಮುಂಬೈ
ಉದ್ಯಾನ್
ಏಕ್ಸ್
ಪ್ರೆಸ್
ಮೈಸೂರಿಗೆ
ವಿಸ್ತರಣೆಯಾಗಲಿ
*
ಮೈಸೂರಿನಿಂದ
ವಾರಣಾಸಿಗೆ
ಹೊಸ
ರೈಲು
ಓಡಾಡಬೇಕಿದೆ.
*
ಹಾಸನ-ಬೆಂಗಳೂರು
ರೈಲ್ವೆ
ಮಾರ್ಗ
ನಿರ್ಮಾಣ
ಕಾಮಗಾರಿ
ಪೂರ್ಣವಾಗಲಿ
*
ಚನ್ನಪಟ್ಟಣ
ರೇಲ್ವೆ
ಗೇಟ್,ಸ್ಟೇಷನ್
ನವೀಕರಣ
*
ಚಿಕ್ಕಬಳ್ಳಾಪುರದಿಂದ
ಪುಟ್ಟಪರ್ತಿ,
ಗೌರಿಬಿದನೂರಿಗೆ
ನೂತನ
ಮಾರ್ಗ.
*
ಬೆಂಗಳೂರು-ಮಾರಿಕುಪ್ಪಂಗೆ
ಹೆಚ್ಚುವರಿ
ರೈಲು
*
ಬಂಗಾರಪೇಟೆ-ಬೆಂಗಳೂರಿಗೆ
ಹೆಚ್ಚುವರಿ
ರೈಲು
ಓಡಾಡಬೇಕು
ಸಾರ್ವಜನಿಕರಿಂದ ಬಂದಿರುವ ಇನ್ನಷ್ಟು ಬೇಡಿಕೆ-1
*
ಅಹಮದಾಬಾದ್-
ಮಂಗಳೂರು
ಸೆಂಟ್ರಲ್
(ರಜೆ
ಸಮಯದ
ರೈಲು
ನಿರಂತರಗೊಳಿಸಲು
ಮನವಿ)
*
ವಾಸ್ಕೋ-ಮಂಗಳೂರು
ಸೆಂಟ್ರಲ್
ಇಂಟರ್
ಸಿಟಿ
*
ಹುಬ್ಬಳ್ಳಿ-
ಮಂಗಳೂರು
ಸೆಂಟ್ರಲ್
(
ವಯಾ
ಹಾಸನ-ಅರಸೀಕೆರೆ)
ರಾತ್ರಿ
ಎಕ್ಸ್
ಪ್ರೆಸ್
*
ಭಟ್ಕಳ-ಮಂಗಳೂರು
ಸೆಂಟ್ರಲ್
ಡಿಎಂಯು
*
ವಾಸ್ಕೋ-ಮಂಗಳೂರು-
ತಿರುಪತಿ
*
ನವದೆಹಲಿ-
ಸುಬ್ರಮಣ್ಯ
ರಸ್ತೆ
(ವಯಾ
MAO-MAJN)
ಸಾರ್ವಜನಿಕರಿಂದ ಬಂದಿರುವ ಇನ್ನಷ್ಟು ಬೇಡಿಕೆ-2
*
16515/16
ಕಾರವಾರ-
ಯಶವಂತಪುರ
ಎಕ್ಸ್
ಪ್ರೆಸ್
ಪ್ರತಿದಿನ
ಸಂಚಾರಕ್ಕೆ
ಮನವಿ
(ಸದ್ಯಕ್ಕೆ
ವಾರಕ್ಕೆ
ಮೂರಾವರ್ತಿ
ಇದೆ)
*
ಮಂಗಳೂರು-
ಜಮ್ಮು
ಥಾವಿ
ನವ್
ಯುಗ್
ಎಕ್ಸ್
ಪ್ರೆಸ್
ಎರಡು
ವಾರಕ್ಕೊಮ್ಮೆ
ಸಂಚಾರಕ್ಕೆ
ಮನವಿ
*
ಮಂಗಳೂರು-
ಹೌರಾ
ವಿವೇಕ್
ಎಕ್ಸ್
ಪ್ರೆಸ್
ಎರಡು
ವಾರಕ್ಕೊಮ್ಮೆ
ಸಂಚಾರಕ್ಕೆ
ಮನವಿ
*
ಕಾರೈಕಲ್-ಬೆಂಗಳೂರು
ಸೂಪರ್
ಫಾಸ್ಟ್
ಎಕ್ಸ್
ಪ್ರೆಸ್
ವಯಾ
TPJ
*
ಕೊಯಮತ್ತೂರು-ಹುಬ್ಬಳ್ಳಿ
ಎಕ್ಸ್
ಪ್ರೆಸ್
ಪ್ರತಿದಿನ
ವಯಾ
ಯಶವಂತಪುರ
ಸಾರ್ವಜನಿಕರಿಂದ ಬಂದಿರುವ ಇನ್ನಷ್ಟು ಬೇಡಿಕೆ-3
*
ಮಂಗಳೂರು-
ಹೌರಾ
ವಯಾ
ಮಡಗಾಂವ್-
ಹುಬ್ಬಳ್ಳಿ
*
ಕೊಯಮತ್ತೂರು-ಹುಬ್ಬಳ್ಳಿ
ಎಕ್ಸ್
ಪ್ರೆಸ್
ಪ್ರತಿದಿನ
ವಯಾ
ಯಶವಂತಪುರ
*
ಡೀಸೆಲ್
ಲೋಕೋಮೋಟಿವ್
ಘಟಕ,
ಮಂಗಳೂರು
*
ನೀಲಂಬುರ್-ನಂಜನಗೂಡು
ರೈಲ್ವೆ
ಯೋಜನೆಗೆ
ಚಾಲನೆ
*
ಕೊಯಮತ್ತೂರು-ಬೆಂಗಳೂರು-ಮೈಸೂರು(
ಇಂಟರ್
ಸಿಟಿ
ವಯಾ
ತಿರುಪುರ್,
ಈರೋಡ್)