ಚರಂಡಿ ದಾಟಲು ಸ್ಥಳೀಯರ ಹೆಗಲೇರಿದ ರಾಯಚೂರು ಜಿ.ಪಂ ಸಿಇಒ
ಹರಿಯುತ್ತಿದ್ದ ಚರಂಡಿಯನ್ನು ದಾಟಲು ರಾಯಚೂರು ಜಿಲ್ಲಾ ಪಂಚಾಯತ್ ಸಿಇಒಗೆ ಆಗುವುದಿಲ್ಲವಂತೆ. ಕಾರಣ ಕಾಲಿಗೆ ಕೊಳೆಯಾಗುತ್ತದೆ. ಇದಕ್ಕೆ ಸ್ಥಳೀಯರು ಅವರನ್ನು ಹೊತ್ತುಕೊಂಡು ಚರಂಡಿ ದಾಟಿಸಿದ್ದಾರೆ.
ರಾಯಚೂರು, ಮಾರ್ಚ್ 24: ಹರಿಯುತ್ತಿದ್ದ ಚರಂಡಿಯನ್ನು ದಾಟಲು ರಾಯಚೂರು ಜಿಲ್ಲಾ ಪಂಚಾಯತ್ ಸಿಇಒ ಕುರ್ಮಾ ರಾವ್ ಗೆ ಆಗುವುದಿಲ್ಲವಂತೆ. ಕಾರಣ ಕಾಲಿಗೆ ಕೊಳೆಯಾಗುತ್ತದೆ. ಇದಕ್ಕೆ ಸ್ಥಳೀಯರು ಅವರನ್ನು ಹೊತ್ತುಕೊಂಡು ಚರಂಡಿ ದಾಟಿಸಿದ್ದಾರೆ. ರಾಯಚೂರಿನ ಲಿಂಗಸಗೂರಿನಲ್ಲಿ ಈ ಘಟನೆ ನಡೆದಿದೆ.
ಸರಕಾರ ಸಂಬಳ ತಿನ್ನುವ ಈ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಆರಾಮವಾಗಿ ಸ್ಥಳೀಯರ ಹೆಗಲೇರಿ ಚರಂಡಿ ದಾಟಿ ದರ್ಪ ಮೆರೆದಿದ್ದಾರೆ. ಚರಂಡಿ ದಾಟಲು ಸ್ಥಳೀಯರು ಭುಜ ಬಳಸಿದ ಸಿಇಒ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಯಾವುದಕ್ಕೂ ಈ ಸಿಇಒನ ಚರಂಡಿ ದಂಡ ಯಾತ್ರೆಯ ಈ ವೀಡಿಯೋ ನೋಡಿ ಕಣ್ತುಂಬಿಕೊಳ್ಳಿ..
#WATCH Kurma Roa, CEO Zila Panchayat crosses a drain with help from locals, in Raichur, Karnataka. pic.twitter.com/kceNnP5W23
— ANI (@ANI_news) March 24, 2017
ಈ ಹಿಂದೆ ನೆರೆ ವೀಕ್ಷಣೆಗೆ ಬಂದಿದ್ದ ಮಧ್ಯ ಪ್ರದೇಶ ಬಿಜೆಪಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರನ್ನು ಪೊಲೀಸರು ಹೊತ್ತುಕೊಂಡು ಹೋಗಿದ್ದು ಇದೇ ರೀತಿ ಭಾರೀ ವಿವಾದಕ್ಕೆ ಕಾರಣವಾಗಿತ್ತು.