ಕಾಂಗ್ರೆಸ್ ನ ತಂತ್ರಗಳಿಗೆ ಕರ್ನಾಟಕದ ಜನ ಬಗ್ಗೋಲ್ಲ: ಪಿಯೂಶ್ ಗೋಯಲ್
ಬೆಂಗಳೂರು, ಫೆಬ್ರವರಿ 10: "ಕರ್ನಾಟಕದ ಜನರು ಬುದ್ಧಿವಂತರು. ಅವರು ಕಾಂಗ್ರೆಸ್ಸಿನ ಇಂಥ ತಂತ್ರಗಳಿಗೆ ಬಗ್ಗುವುದಿಲ್ಲ" ಎಂದು ರಾಹುಲ್ ಗಾಂಧಿಯವರ ಕರ್ನಾಟಕ ಭೇಟಿಯನ್ನು ಕೇಂದ್ರ ರೈಲ್ವೇ ಸಚಿವ, ಬಿಜೆಪಿ ಮುಖಂಡ ಪಿಯೂಶ್ ಗೋಯಲ್ ಟೀಕಿಸಿದ್ದಾರೆ.
'ಅವರು ಕರ್ನಾಟಕಕ್ಕೆ ಧಾರ್ಮಿಕ ಪ್ರವಾಸಕ್ಕಾಗಿ ಹೋಗಿದ್ದಾರೆ ಎಂದು ಕೇಳ್ಪಟ್ಟೆ. ಆದರೆ ಕರ್ನಾಟಕದ ಜನರು ಬುದ್ಧಿವಂತರು. ಅವರು ಇಂಥ ತಂತ್ರಗಳಿಂದೆಲ್ಲ ಆಕರ್ಷಿತರಾಗುವುದಿಲ್ಲ. ರಾಹುಲ್ ಗಾಮಧಿಯವರ ಭೇಟಿ ಕರ್ನಾಟಕ ರಾಜ್ಯ ಸರ್ಕಾರದ ಪಾಪಗಳನ್ನು ತೊಳೆದುಬಿಡುವುದಿಲ್ಲ' ಎಂದು ಅವರು ಹೇಳಿದ್ದಾರೆ.
LIVE : ಹೊಸಪೇಟೆಯಲ್ಲಿ ರಾಹುಲ್ ಗಾಂಧಿ ಚುನಾವಣಾ ಅಬ್ಬರ
ಕಾಂಗ್ರೆಸ್ ಅಧ್ಯಕ್ಷ ರಾಹಲ್ ಗಾಂಧಿಯರು ಇಂದಿನಿಂದ ನಾಲ್ಕು ದಿನಗಳ ಕಾಲ ಹೈ-ಕ ಮತ್ತು ಉತ್ತರ ಕರ್ನಾಟಕ ಭಾಗದ ಕೆಲವು ಜಿಲ್ಲೆಗಳಿಗೆ ಭೇಟಿ ನೀಡಿ, ಜನ ಆಶೀರ್ವಾದ ಯಾತ್ರೆ ಆರಂಭಿಸಿದ್ದಾರೆ. ಕರ್ನಾಟಕದಲ್ಲಿ ಈ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರ ಈ ಭೇಟಿ ಕಾಂಗ್ರೆಸ್ ನಾಯಕರಲ್ಲಿ ಹೊಸ ಉತ್ಸಾಹ ಮೂಡಿಸಿದೆ.