ನವೆಂಬರ್ 19ರಿಂದ ರಾಹುಲ್ ಗಾಂಧಿ ರಾಜ್ಯ ಪ್ರವಾಸ
ಬೆಂಗಳೂರು, ಅಕ್ಟೋಬರ್ 20 : ಎಐಸಿಸಿ ಉಪಾಧ್ಯಕ್ಷ ಮೂರು ದಿನಗಳ ಕಾಲ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ನವೆಂಬರ್ 19ರಂದು ರಾಜ್ಯಕ್ಕೆ ಆಗಮಿಸಲಿರುವ ಅವರು ಮೂರು ಜಿಲ್ಲೆಗಳಿಗೆ ಭೇಟಿ ನೀಡಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ನವೆಂಬರ್ 21ರ ಕುಮಟಾ ಮೀನುಗಾರರ ಸಮಾವೇಶಕ್ಕೆ ರಾಹುಲ್ ಗಾಂಧಿ
ಕಾಂಗ್ರೆಸ್ 2018ರ ವಿಧಾನಸಭೆ ಚುನಾವಣೆ ಸಿದ್ಧತೆ ಆರಂಭಿಸಿದೆ. ಮೊದಲ ಹಂತದಲ್ಲಿ ಮೂರು ಜಿಲ್ಲೆಗಳಲ್ಲಿ ಪ್ರಚಾರ ನಡೆಸಲು ರಾಹುಲ್ ಗಾಂಧಿ ಆಗಮಿಸುತ್ತಿದ್ದಾರೆ. ನವೆಂಬರ್ 19, 20 ಮತ್ತು 21ರಂದು ರಾಹುಲ್ ಗಾಂಧಿ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ.
ರಾಹುಲ್ ಗಾಂಧಿ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಿಗೆ ಭೇಟಿ ನೀಡಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶ ಉದ್ದೇಶಿಸಿ ಮಾತನಾಡಲಿರುವ ರಾಹುಲ್ ಗಾಂಧಿ, ಪಕ್ಷದ ಕಾರ್ಯಕರ್ತರನ್ನು ಉತ್ಸಾಹ ತುಂಬಿ, ಚುನಾವಣೆಗೆ ಕೆಲಸ ಮಾಡುವಂತೆ ಕರೆ ನೀಡಲಿದ್ದಾರೆ.
ರಾಹುಲ್ ಗಾಂಧಿ ಕಾರ್ಯಕ್ರಮಗಳು
*
ನ.19
ಚಿಕ್ಕಮಗಳೂರಿನಲ್ಲಿ
ಇಂದಿರಾ
ಗಾಂಧಿ
ಜನ್ಮ
ಶತಮಾನೋತ್ಸವ
ಕಾರ್ಯಕ್ರಮದಲ್ಲಿ
ಭಾಗಿ
*
ನ.20
ಚಿಕ್ಕಮಗಳೂರಿನಲ್ಲಿ
ಸಮಾವೇಶ
ಉದ್ದೇಶಿಸಿ
ಭಾಷಣ,
ಶಿವಮೊಗ್ಗದ
ಸಮಾವೇಶದಲ್ಲಿ
ಭಾಗಿ
*
ನ.21
ಕುಮಟಾದಲ್ಲಿ
ನಡೆಯುವ
ಮೀನುಗಾರರ
ಸಮಾವೇಶದಲ್ಲಿ
ಭಾಗಿ