ಕಲ್ಯಾಣ ಕರ್ನಾಟಕದಲ್ಲಿ ಕರಾಳ ದಿನ ಆಚರಣೆ
ರಾಯಚೂರು, ನ.01: ನಾಡಿನ ಎಲ್ಲೆಡೆ ರಾಜ್ಯೋತ್ಸವದ ಸಂಭ್ರಮ ಕಂಡು ಬಂದಿದ್ದರೆ, ರಾಯಚೂರು, ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗ, ಮಡಿಕೇರಿ ಹಾಗೂ ತುಳುನಾಡಿನ ಕೆಲ ಪ್ರದೇಶಗಳಲ್ಲಿ ಪ್ರತಿಭಟನೆ, ಕರಾಳ ದಿನ ಆಚರಣೆ ಜರುಗಿದೆ.
ರಾಯಚೂರು
ಜಿಲ್ಲೆಗೆ
ಐಐಟಿ
ಕೈ
ತಪ್ಪಿರುವ
ಹಿನ್ನೆಲೆಯಲ್ಲಿ
ಸ್ಥಳೀಯ
ಹೋರಾಟಗಾರರು
ಪ್ರತಿಭಟನೆ
ನಡೆಸಿ,
ಉಸ್ತುವಾರಿ
ಸಚಿವ
ಶರಣ
ಪ್ರಕಾಶ್
ಪಾಟೀಲ
ಅವರಿಗೆ
ರಾಜ್ಯೋತ್ಸವ
ಧ್ವಜಾರೋಹಣಕ್ಕೆ
ಅಡ್ಡಿಪಡಿಸಿದರು.
ಜಿಲ್ಲಾ
ಕ್ರೀಡಾಂಗಣಕ್ಕೆ
ಬರುತ್ತಿದ್ದ
ಸಚಿವರ
ಕಾರಿಗೆ
ಹೋರಾಟಗಾರರು
ಮುತ್ತಿಗೆ
ಹಾಕಿ
ಸರ್ಕಾರದ
ವಿರುದ್ದ
ಘೋಷಣೆ
ಕೂಗಿದರು.
ಸಮಯಕ್ಕೆ
ಸರಿಯಾಗಿ
ಪೊಲೀಸರು
ಆಗಮಿಸಿ
ಪರಿಸ್ಥಿತಿಯನ್ನು
ಶಾಂತಗೊಳಿಸಿದರು.
[ಕನ್ನಡವನ್ನು
ಪ್ರೀತಿಸಿ,
ಗೌರವಿಸಿ,
ವ್ಯವಹರಿಸಿ:
ಸಿಎಂ
ಸಿದ್ದು]
ಕರಾಳ ದಿನ: ಹೈದರಾಬಾದ್ ಕರ್ನಾಟಕ ಭಾಗಕ್ಕ ಅನ್ಯಾಯವಾಗಿದೆ. ಈ ಅನ್ಯಾಯ ಸರಿಪಡಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ರಾಯಚೂರು ನಗರದ ಪ್ರಮುಖ ಬೀದಿಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸಿದರು. ಮೆರವಣಿಗೆಯ ಸಂದರ್ಭದಲ್ಲಿ ಹೋರಾಟಗಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿಯೂ ನಡೆಯಿತು. [ಕನ್ನಡ ರಾಜ್ಯೋತ್ಸವಕ್ಕೆ ಶುಭ ಹಾರೈಸಿದ ಪ್ರಧಾನಿ ಮೋದಿ]
ಕಲಬುರಗಿಯಲ್ಲಿ ಪ್ರತ್ಯೇಕ ರಾಜ್ಯದ ಕೂಗು : ಹೈದ್ರಾಬಾದ್ ಕರ್ನಾಟಕ ಪ್ರದೇಶದ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳುತ್ತಿದೆ, ಪ್ರತ್ಯೇಕ ರಾಜ್ಯದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.
ರಾಜ್ಯ ಸರ್ಕಾರ 371 ರ ಕಲಂ ಸಮರ್ಪಕವಾಗಿ ಅನುಷ್ಠಾನಕ್ಕೆ ತರುತ್ತಿಲ್ಲ. ಪ್ರತ್ಯೇಕ ರಾಜ್ಯದಿಂದ ಮಾತ್ರ ಹೈದ್ರಾಬಾದ್ ಕರ್ನಾಟಕದ ಸಮಗ್ರ ಅಭಿವೃದ್ಧಿ ಸಾಧ್ಯ. ಹಾಗಾಗಿ ಪ್ರತ್ಯೇಕ ರಾಜ್ಯ ಕೊಡಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸಮಿತಿಯ ಅಧ್ಯಕ್ಷ ಎಂ.ಎಸ್.ಪಾಟೀಲ್ ನರಿಬೋಳ ಸೇರಿದಂತೆ ಹದಿನೈದಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದರು.
ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಕೇಂದ್ರಾಡಳಿತ ಪ್ರದೇಶ ಮಾಡಿ ವಿಶೇಷ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಲಾಯಿತು. ಅಂಬಟಿ ಪೆರಂಬು ಸ್ಥಳದಲ್ಲಿ ಕೊಡವರು ಹುತಾತ್ಮರಾಗಿದ್ದು, ಜಲಿಯಾನ್ ವಾಲ್ ಬಾಗ್ ಮಾದರಿಯಲ್ಲಿ ಸ್ಮಾರಕ ಸ್ಥಾಪಿಸಬೇಕು ಎಂದು ಕೊಡವರು ಆಗ್ರಹಿಸಿದರು.
ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ: ಸ್ಥಳೀಯ ಕನ್ನಡ ಕಾರ್ಯಕರ್ತನೊಬ್ಬನಿಗೆ ಚಾಕುವಿನಿಂದ ಇರಿದ ಎಂಇಎಸ್ ಕಾರ್ಯಕರ್ತರು ನಗರದ ಹಲವೆಡೆ ಕನ್ನಡ ವಿರೋಧಿ ಘೋಷಣೆ ಕೂಗಿ ಮೆರವಣಿಗೆ ಮಾಡಿದ್ದಾರೆ. ಕೆಲ ಅಂಗಡಿಗಳ ಮೇಲೆ ಕಲ್ಲುತೂರಾಟ ನಡೆಸಿ, ಪೊಲೀಸರು ಬರುವಷ್ಟರಲ್ಲಿ ಪರಾರಿಯಾಗಿದ್ದಾರೆ.(ಒನ್ ಇಂಡಿಯಾ ಸುದ್ದಿ)