ದಾವಣಗೆರೆ : ಕೆರೆಗೆ ಉರುಳಿದ ಖಾಸಗಿ ಬಸ್
ದಾವಣಗೆರೆ, ಮೇ 29 : ಚನ್ನಗಿರಿ ಬಸ್ ಅಪಘಾತದಲ್ಲಿ ಮೃತಪಟ್ಟವರನ್ನು ಉಮೇಶ್, ಮೂರ್ತಿ, ಪ್ರವೀಣ್ ಎಂದು ಗುರುತಿಸಲಾಗಿದೆ. ಇವರು ಎಲ್ಲಿಯವರು ಎಂಬ ಮಾಹಿತಿ ಲಭ್ಯವಾಗಿಲ್ಲ.
ಸಮಯ 2.30 : ಚನ್ನಗಿರಿಯಲ್ಲಿ ನಡೆದ ಬಸ್ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಖಾಸಗಿ ಬಸ್ ಚಾಲಕ ಮೂರ್ಛೆ ರೋಗದಿಂದ ಬಳಲುತ್ತಿದ್ದ ಎಂದು ತಿಳಿದುಬಂದಿದೆ.
ಹಿಂದಿನ ಸುದ್ದಿ : ಖಾಸಗಿ ಬಸ್ ಕೆರೆಗೆ ಉರುಳಿ ಬಿದ್ದು ಇಬ್ಬರು ಸಾವನ್ನಪ್ಪಿರುವ ಘಟನೆ ಚನ್ನಗಿರಿಯಲ್ಲಿ ನಡೆದಿದೆ. ಅಪಘಾತದಲ್ಲಿ 25 ಪ್ರಯಾಣಿಕರು ಗಾಯಗೊಂಡಿದ್ದಾರೆ. ಚನ್ನಗಿರಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಶುಕ್ರವಾರ
ಚನ್ನಗಿರಿಯಿಂದ
ಬೀರೂರಿಗೆ
ತೆರಳುತ್ತಿದ್ದ
ಖಾಸಗಿ
ಬಸ್
ಚಾಲಕನ
ನಿಯಂತ್ರಣ
ತಪ್ಪಿ
ಕೆರೆಗೆ
ಬಿದ್ದಿದೆ.
ಸ್ಥಳದಲ್ಲಿಯೇ
ಇಬ್ಬರು
ಪ್ರಯಾಣಿಕರು
ಮೃತಪಟ್ಟಿದ್ದು,
25
ಜನರು
ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು
ಚನ್ನಗಿರಿ
ಮತ್ತು
ಶಿವಮೊಗ್ಗದ
ಆಸ್ಪತ್ರೆಗಳಿಗೆ
ದಾಖಲಿಸಲಾಗಿದೆ.
ಬಸ್ ಚಾಲಕನ ಅತಿ ವೇಗವೇ ಘಟನೆಗೆ ಕಾರಣ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.