ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಅರ್ಚಕ
ಬೆಂಗಳೂರು, ಜೂ. 26 : ಅರ್ಚಕರೊಬ್ಬರು ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ನಡೆದಿದೆ. ಮೃತ ಅರ್ಚಕರು ಉಡುಪಿ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದರು.
ಆತ್ಮಹತ್ಯೆಗೆ
ಶರಣಾದ
ಅರ್ಚಕರನ್ನು
ಶಿವಶಂಕರ್
ಹೆಬ್ಬಾರ್
(45)
ಎಂದು
ಗುರುತಿಸಲಾಗಿದೆ.
ಗುರುವಾರ
ಬೆಳಗ್ಗೆ
ಕೆಂಗೇರಿ
ಹೋಬಳಿಯ
ಚಿಕ್ಕನಹಳ್ಳಿ
ಬಳಿಯ
ವಿಶ್ವೇಶ್ವರಯ್ಯ
ಬಡಾವಣೆಯ
ನೈಸ್
ರಸ್ತೆಗೆ
ಸೇರಿದ
ಜಮೀನಿನಲ್ಲಿ
ತಮ್ಮ
ಮಾರುತಿ
800
ಕಾರಿನಲ್ಲಿ
ಕುಳಿತು
ಸೀಮೆಎಣ್ಣೆ
ಸುರಿದು
ಬೆಂಕಿ
ಹಚ್ಚಿಕೊಂಡು
ಹೆಬ್ಬಾರ್
ಆತ್ಮಹತ್ಯೆ
ಮಾಡಿಕೊಂಡಿದ್ದಾರೆ.
[ಮಾಗಡಿ
ರಂಗನಾಥಸ್ವಾಮಿ
ಮುಂದೆ
ಅರ್ಚಕರ
ಕಿತ್ತಾಟ]
ಮೈಸೂರು-ಮಾಗಡಿ ರಿಂಗ್ ರಸ್ತೆಯಲ್ಲಿರುವ ಮರಿಯಪ್ಪನ ಪಾಳ್ಯದ ಅಮ್ಮ ಆಶ್ರಮದ ರಸ್ತೆಯಲ್ಲಿರುವ ಶನೇಶ್ವರ ದೇವಾಲಯದಲ್ಲಿ ಶಿವಶಂಕರ್ ಹೆಬ್ಬಾರ್ ಅರ್ಚಕರಾಗಿದ್ದರು. ಉಡುಪಿ ಮೂಲದವರಾದ ಹೆಬ್ಬಾರ್ ಪತ್ನಿ ಅನುಪಮಾ, ಪುತ್ರ ದ್ರುವ ಜೊತೆ ಕೆಂಗೇರಿ ಉಪನಗರದಲ್ಲಿ ನೆಲೆಸಿದ್ದರು. [ಮುಜರಾಯಿ ದೇವಾಲಯಕ್ಕೆ ವಾರ್ಷಿಕ 36 ಸಾವಿರ ಅನುದಾನ]
ಘಟನೆ ವಿವರ : ಗುರುವಾರ ಬೆಳಗ್ಗೆ 10.45ರ ಸುಮಾರಿಗೆ ಶಿವಶಂಕರ್ ಹೆಬ್ಬಾರ್ ಮನೆಯಿಂದ ಹೊರಟಿದ್ದರು. ಸ್ನೇಹಿತನನ್ನು ನೋಡಿಕೊಂಡು ಬರುತ್ತೇನೆ ಎಂದು ಹೇಳಿ ಹೊರಟಿದ್ದ ಅವರು 11.30ರ ಸುಮಾರಿಗೆ ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. [ದೇವಾಲಯಗಳ ಆನ್ ಲೈನ್ ಸೇವೆ ಬುಕ್ ಮಾಡುವುದು ಹೇಗೆ?]
ಕಾರಿನಿಂದ ಹೊಗೆ ಬರುವುದನ್ನು ಗಮನಿಸಿದ ಸ್ಥಳೀಯರು ಕುಂಬಳಗೋಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ನೋಡುವಾಗ ಶಿವಶಂಕರ್ ಹೆಬ್ಬಾರ್ ಮೃತಪಟ್ಟಿದ್ದರು. ನಂತರ ಶವವನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ಸಾಗಿಸಲಾಯಿತು.
ಶಿವಶಂಕರ್ ಹೆಬ್ಬಾರ್ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿದ್ದ ಮರದಡಿ ಕಾರಿನ ದಾಖಲೆಗಳನ್ನು ಇಟ್ಟಿದ್ದರು. ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದು, ತನಿಖೆ ಆರಂಭಿಸಿದ್ದಾರೆ. [ಚಿತ್ರ : ಐಸಾಕ್ ರಿಚರ್ಡ್, ಮಂಗಳೂರು]