ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಟಿ20 ಕ್ರಿಕೆಟ್ ಅಲ್ಲ, ಯೋಚಿಸಿ ಮತ ಚಲಾಯಿಸಿ: ಪ್ರಕಾಶ್ ರೈ

By Manjunatha
|
Google Oneindia Kannada News

ಬೆಂಗಳೂರು, ಮೇ 12: ಬಿಜೆಪಿಯನ್ನು ಸೋಲಿಸಲೇ ಬೇಕೆಂದು ಜಸ್ಟ್ ಆಸ್ಕಿಂಗ್ ಅಭಿಯಾನ ಪ್ರಾರಂಭಿಸಿರುವ ಪ್ರಕಾಶ್ ರೈ ಅವರು, ಕರ್ನಾಟಕ ವಿಧಾನಸಭೆ ಚುನಾವಣೆಗೆ ತಪ್ಪದೆ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ.

In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು

ಟ್ವಿಟ್ಟರ್ ನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿರುವ ಪ್ರಕಾಶ್ ರೈ, ನಾವು ಈ ಮುಂಚೆ ಮಾಡಿರುವ ತಪ್ಪುಗಳನ್ನು ತಿದ್ದಿಕೊಳ್ಳುವ ಸಮಯ ಈಗ ಬಂದಿದೆ, ಜಾತಿ ಹೆಸರಲ್ಲಿ, ಹಣ ಪಡೆದು, ನಮ್ಮವ ಎಂಬ ಕಾರಣಕ್ಕೆ ಮತಹಾಕುವ ಪರಿಪಾಠ ಬಿಟ್ಟು ಉತ್ತಮ ಅಭ್ಯರ್ಥಿಗಾಗಿ ಈ ಬಾರಿ ಮತ ಹಾಕೋಣ ಎಂದು ಅವರು ಹೇಳಿದ್ದಾರೆ.

LIVE: ಹಸೆಮಣೆಗೆಗೂ ಮುನ್ನ ಮತಗಟ್ಟೆಗೆ, ಆದರ್ಶ ಮೆರೆದ ವಧುLIVE: ಹಸೆಮಣೆಗೆಗೂ ಮುನ್ನ ಮತಗಟ್ಟೆಗೆ, ಆದರ್ಶ ಮೆರೆದ ವಧು

ಚುನಾವಣೆ ಟಿ20 ಪಂದ್ಯವಲ್ಲ, ಸತ್ಯದ ಬಗ್ಗೆ ಯೋಚನೆ ಮಾಡಿ, ಮನಃಸಾಕ್ಷಿಯಿಂದ ಕೆಲ ಕಾಲ ಕೂತು ಸುಮ್ಮನೆ ಯೋಚಿಸಿ ಆ ನಂತರ ನಿರ್ಧಾರ ಮಾಡಿ ಮತಗಟ್ಟೆಗೆ ಹೋಗಿ ಮತ ಚಲಾಯಿಸಿ. ಇದು ಅತ್ಯಂತ ಜವಾಬ್ದಾರಿಯ ವಿಷಯ ಹಾಗಾಗಿ ಆತುರದ ನಿರ್ಧಾರ ಬೇಡ ಎಂದು ಅವರು ಹೇಳಿದ್ದಾರೆ.

Prakash Rai video message to Karnataka voters

ರಜೆ ಇದೆಯೆಂದು ಅಲ್ಲಿ-ಇಲ್ಲಿ ತೆರಳದೆ ತಪ್ಪದೆ ಮತ ಚಲಾಯಿಸಿ ಕರ್ನಾಟಕದ ಭವಿಷ್ಯವನ್ನು ನಿರ್ಧಾರ ಮಾಡಿ, ಉತ್ತಮ ಭವಿಷ್ಯವೇ ನಿಮ್ಮ ಆಯ್ಕೆ ಆಗಿರಲಿ ಎಂದು ಅವರು ಸಂದೇಶ ನೀಡಿದ್ದಾರೆ.

English summary
Prakash Rai request to vote responsibly in this Karnataka assembly elections 2018. He posted a video in his twitter account. he said election is not t20 match think before you vote.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X