ಅಶೋಕ್ ಖೇಣಿಯನ್ನು ಸ್ವಾಗತಿಸಿದ ಕಾಂಗ್ರೆಸ್ ಗೆ ಜಾವ್ಡೇಕರ್ ಟೀಕಾಸ್ತ್ರ!
ಬೆಂಗಳೂರು, ಮಾರ್ಚ್ 06: ಅಶೋಕ್ ಖೇಣಿಯವರನ್ನು ಕಾಂಗ್ರೆಸ್ ಗೆ ಸೇರಿಸಿಕೊಂಡಿದ್ದು ಕಾಂಗ್ರೆಸ್ ನ ರೈತ ವಿರೋಧಿ ನೀತಿಯನ್ನು ತೋರಿಸುತ್ತದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಮತ್ತು ಬಿಜೆಪಿ ಕರ್ನಾಟಕ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.
ನಿನ್ನೆ(ಮಾ.5) ಕಾಂಗ್ರೆಸ್ ಗೆ ಸೇರ್ಪಡೆಯಾದ ನೈಸ್ ಕಂಪನಿ ಮುಖಂಡ, ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಅಶೋಕ್ ಖೇಣಿ ಅವರ ನಡೆಯನ್ನು ಮತ್ತ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡ ಕಾಂಗ್ರೆಸ್ ನಡೆಯನ್ನು ಅವರು ಟ್ವೀಟ್ ಊಲಕ ಟೀಕಿಸಿದರು.
Ashok Kheny is also alleged to have been involved in duping farmers. This proves that the @INCIndia is anti-farmer. The arrogance of power displayed by Congress leaders & their kin in #Bengaluru has also proved that there is a ‘Goonda Raj’ in #Karnataka. @BJP4Karnataka (2/3)
— Prakash Javadekar (@PrakashJavdekar) March 6, 2018
ಕೈ' ಹಿಡಿದ ಖೇಣಿ, ಕಾಂಗ್ರೆಸ್ ಕಾಲೆಳೆದ ಟ್ವಿಟ್ಟಿಗರು!
"ನೈಸ್ ಹಗರಣದ ರೂವಾರಿ ಅಶೋಕ್ ಖೇಣಿಯ ವಿರುದ್ಧ ತನಿಖೆ ನಡೆಸಿ ಜೈಲಿಗೆ ಅಟ್ಟಬೇಕಿದ್ದ ಸಿದ್ದರಾಮಯ್ಯನವರು ಇಂದು ಖೇಣಿಯನ್ನು ಅಪ್ಪಿ ಕಾಂಗ್ರೆಸ್ ಪಾರ್ಟಿಗೆ ಸೇರಿಸಿಕೊಂಡಿರುವುದು ಸಿದ್ದರಾಮಯ್ಯನವರ ಸರ್ಕಾರವು ಪ್ರಧಾನಿಗಳು ಹೇಳಿದಂತೆ 'ಸೀದಾ ರೂಪೈಯ್ಯ' ಸರ್ಕಾರ ಎಂಬುದನ್ನು ಸಾಬೀತು ಮಾಡಿದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.
Ashok Kheny is also alleged to have been involved in duping farmers. This proves that the @INCIndia is anti-farmer. The arrogance of power displayed by Congress leaders & their kin in #Bengaluru has also proved that there is a ‘Goonda Raj’ in #Karnataka. @BJP4Karnataka (2/3)
— Prakash Javadekar (@PrakashJavdekar) March 6, 2018
"ನೈಸ್ ಹಗರಣದ ಭೂಗಳ್ಳ ಅಶೋಕ್ ಖೇಣಿ ರೈತರ ಸಾವಿರಾರು ಎಕರೆ ಭೂಮಿಯನ್ನು ಅಕ್ರಮವಾಗಿ ಅತಿಕ್ರಮಣ ಮಾಡಿರುವ ಆರೋಪವನ್ನೂ ಎದುರಿಸುತ್ತಿದ್ದಾರೆ. ಇಂತಹ ವ್ಯಕ್ತಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸೊಕೊಂಡಿರುವುದು ರೈತ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ. ಇಂತಹ ಭ್ರಷ್ಟ, ರೈತ ವಿರೋಧಿ ಕಾಂಗ್ರೆಸ್ಸನ್ನು ಕನ್ನಡಿಗರು ಹೊರಹಾಕಲಿದ್ದಾರೆ" ಎಂದು ಸಹ ಅವರು ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕೆಣಕಿದ್ದಾರೆ.