ಸಚಿವ ಸ್ಥಾನ ತೊರೆಯುತ್ತಾರಂತೆ ಪ್ರಕಾಶ್ ಹುಕ್ಕೇರಿ
ಬೆಂಗಳೂರು, ಮೇ 19 : ಪಕ್ಷದ ಒತ್ತಾಯಕ್ಕೆ ಕಟ್ಟುಬಿದ್ದು ಚಿಕ್ಕೋಡಿ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿರುವ ಸಚಿವ ಪ್ರಕಾಶ್ ಹುಕ್ಕೇರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ. ಇದರಿಂದ ಹುಕ್ಕೇರಿ ಅವರ ಮುಂದಿನ ತೀರ್ಮಾನವೇನು? ಎಂಬ ಪ್ರಶ್ನೆಗೆ ಉತ್ತರ ದೊರಕಿದೆ.
ಲೋಕಸಭೆ
ಚುನಾವಣೆಯಲ್ಲಿ
ಕರ್ನಾಟಕದಲ್ಲಿ
ಕಾಂಗ್ರೆಸ್
ಪಕ್ಷಕ್ಕೆ
ಹೆಚ್ಚಿನ
ಸ್ಥಾನಗಳನ್ನು
ಗಳಿಸಲಿ
ಎಂಬ
ಕಾರಣಕ್ಕಾಗಿ
ಮುಜರಾಯಿ
ಮತ್ತು
ಸಕ್ಕರೆ
ಖಾತೆ
ಸಚಿವ
ಪ್ರಕಾಶ್
ಹುಕ್ಕೇರಿ
ಅವರನ್ನು
ಚಿಕ್ಕೋಡಿ
ಲೋಕಸಭಾ
ಕ್ಷೇತ್ರದಿಂದ
ಕಣಕ್ಕಿಳಿಸಲಾಗಿತ್ತು.
3,003
ಮತಗಳ
ಅಂತರದಿಂದ
ಅವರು
ಜಯಗಳಿಸಿದ್ದರು.
[ಕರ್ನಾಟಕದಲ್ಲಿ
ಸೋತು
ಗೆದ್ದವರು]
ಆದರೆ, ತಾವು ರಾಜ್ಯದಲ್ಲಿ ಸಚಿವನಾಗಿ ಕಾರ್ಯನಿರ್ವಹಿಸುತ್ತೇನೆ. ದೆಹಲಿಗೆ ಹೋಗುವುದಿಲ್ಲ ಎಂದು ಪ್ರಕಾಶ್ ಹುಕ್ಕೇರಿ ರಾಜ್ಯದ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದ್ದರು. ಆದರೆ, ಈ ಕುರಿತು ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದು ರಾಜ್ಯನಾಯಕರು ಹೇಳಿದ್ದರು.
ಸೋಮವಾರ ವಿಧಾನಸೌಧದಲ್ಲಿ ಮಾತನಾಡಿದ ಪ್ರಕಾಶ್ ಹುಕ್ಕೇರಿ, ತಾವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಸಂಸದನಾಗಿ ಮುಂದುವರೆಯುತ್ತೇನೆ ಎಂದು ಹೇಳಿದರು. ಆದ್ದರಿಂದ ಹುಕ್ಕೇರಿ ಅವರು ಚಿಕ್ಕೋಡಿ-ಸದಲಗಾ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲಿದ್ದು, ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುವುದು ಖಚಿತವಾಗಿದೆ.
ಚಿಕ್ಕೋಡಿ ಕ್ಷೇತ್ರದ ಫಲಿತಾಂಶ : ಲೋಕಸಭೆ ಚುನಾವಣೆಯಲ್ಲಿ 4,74,373 ಮತಗಳನ್ನು ಪಡೆದು ಪ್ರಕಾಶ್ ಹುಕ್ಕೇರಿ ಜಯಗಳಿಸಿದ್ದರು. ಹುಕ್ಕೇರಿ ಅವರಿಗೆ ಪ್ರಬಲ ಪೈಪೋಟಿ ನೀಡಿದ ಬಿಜೆಪಿಯ ರಮೇಶ್ ಕತ್ತಿ ಅವರು 4,71,370 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದರು. ಎಸ್ ಸಿಪಿಯ ಪ್ರತಾಪರಾವ್ ಪಾಟೀಲ 42,735 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.