ಅಂಚೆ ಇಲಾಖೆಯ ವಿಶೇಷ ಲಕೋಟೆ ಕೊಂಡುಕೊಳ್ಳಿ
ಬೆಂಗಳೂರು, ಜ.14 : ನವೆಂಬರ್ 1ರಿಂದ ಜಾರಿಗೆ ಬರುವಂತೆ ಕರ್ನಾಟಕದ ಹನ್ನೆರಡು ನಗರಗಳ ಹೆಸರುಗಳನ್ನು ಮರುನಾಮಕರಣ ಮಾಡಲಾಗಿದೆ. ಮರುನಾಮಕರಣದ ಸ್ಮರಣೆಗಾಗಿ ಅಂಚೆ ಇಲಾಖೆ ವಿಶೇಷ ಲಕೋಟೆಗಳನ್ನು ಹೊರತರಲಿದೆ. ಈ ಲಕೋಟೆಗಳು ಮಾರಾಟಕ್ಕೆ ಮಾತ್ರ ಲಭ್ಯವಿರಲಿವೆ.
ಅಂಚೆ
ಇಲಾಖೆಯ
ಕರ್ನಾಟಕ
ವೃತ್ತದ
ಅಂಚೆ
ಮಹಾ
ನಿರ್ದೇಶಕಿ
(ವ್ಯಾಪಾರ
ಅಭಿವೃದ್ಧಿ
ವಿಭಾಗ)
ವೀಣಾ
ಆರ್.ಶ್ರೀನಿವಾಸ್
ಅವರು
ಈ
ಕುರಿತು
ಮಾಹಿತಿ
ನೀಡಿದ್ದಾರೆ.
ಕಂಠೀರವ
ಕ್ರೀಡಾಂಗಣದಲ್ಲಿ
ಜ.16ರಿಂದ
ನಡೆಯಲಿರುವ
4ದಿನಗಳ
ಅಂಚೆ
ಚೀಟಿಗಳ
ಪ್ರದರ್ಶನದ
ಉದ್ಘಾಟನಾ
ಕಾರ್ಯಕ್ರಮದಲ್ಲಿ
ಸಿಎಂ
ಸಿದ್ದರಾಮಯ್ಯ
ಈ
ವಿಶೇಷ
ಲಕೋಟೆಗಳನ್ನು
ಅಧಿಕೃತವಾಗಿ
ಬಿಡುಗಡೆ
ಮಾಡಲಿದ್ದಾರೆ.
ಲಕೋಟೆ ವಿಶೇಷವೇನು : 12 ನಗರಗಳ ವಿಶೇಷ ಲಕೋಟೆಗಳನ್ನು ಅಂಚೆ ಇಲಾಖೆ ಹೊರತರಲಿದೆ. ಪ್ರತಿ ನಗರದ ಲಕೋಟೆಯ ಮೇಲೆ ಆಯಾ ನಗರ/ಪಟ್ಟಣಗಳ ಐತಿಹಾಸಿಕ ಸ್ಮಾರಕಗಳ ಚಿತ್ರವನ್ನು ಮುದ್ರಿಸಲಾಗಿರುತ್ತದೆ. ವಿಶೇಷ ಲಕೋಟೆಗಳು ಮಾರಾಟಕ್ಕೆ ಮಾತ್ರ ಲಭ್ಯವಿರುತ್ತದೆ. [12 ನಗರಗಳಿಗೆ ಹೊಸ ಹೆಸರು]
ಮೈಸೂರು ನಗರದ ಲಕೋಟೆ ಮೇಲೆ ಅರಮನೆ ಚಿತ್ರವಿದ್ದರೆ, ವಿಜಯಪುರದ ಲಕೋಟೆ ಮೇಲೆ ಗೋಲಗುಮ್ಮಟದ ಚಿತ್ರವಿರಲಿದೆ. ಇದೇ ರೀತಿ ಬೆಂಗಳೂರು, ತುಮಕೂರು, ಬಳ್ಳಾರಿ, ಶಿವಮೊಗ್ಗ ಹೀಗೆ 12 ನಗರಗಳಿಗೆ ವಿಶೇಷ ಲಕೋಟೆ ಮುದ್ರಿಸಲಾಗುತ್ತದೆ. [ಇನ್ನು ವಿಜಯಾಪುರವಲ್ಲ, ವಿಜಯಪುರ ಎಂದು ಹೇಳಿರಿ]
ಒಮ್ಮೆ
ಮಾತ್ರ
ಬಿಡುಗಡೆ
:
ಅಂಚೆ
ಇಲಾಖೆ
ಈ
ವಿಶೇಷ
ಲಕೋಟೆಗಳನ್ನು
ಒಮ್ಮೆ
ಮಾತ್ರ
ಬಿಡುಗಡೆ
ಮಾಡಲಿದ್ದು,
ಸಾರ್ವಜನಿಕರು
ಇವುಗಳನ್ನು
ಖರೀದಿಸಿ
ತಮ್ಮ
ಸಂಗ್ರಹದಲ್ಲಿ
ಇಟ್ಟುಕೊಳ್ಳಬಹುದು.
ಜ.16ರಂದು
ಈ
ಲಕೋಟೆ
ಬಿಡುಗಡೆಯಾಗಲಿದೆ.
ಅಂದಹಾಗೆ ನ.1ರಿಂದ ಜಾರಿಗೆ ಬರುವಂತೆ ಬೆಂಗಳೂರು, ಮಂಗಳೂರು, ಬಳ್ಳಾರಿ, ವಿಜಯಪುರ, ಬೆಳಗಾವಿ, ಚಿಕ್ಕಮಗಳೂರು, ಕಲಬುರಗಿ, ಮೈಸೂರು, ಸೇರಿದಂತೆ ರಾಜ್ಯದ 12 ನಗರಗಳ ಹೆಸರನ್ನು ಶುದ್ಧ ಕನ್ನಡದಲ್ಲಿ ಉಚ್ಛರಿಸುವ ಹಾಗೆಯೇ ಬದಲಾವಣೆ ಮಾಡಲಾಗಿತ್ತು.