ನೂತನ ಸಿಎಂ ಬಸವರಾಜ ಬೊಮ್ಮಾಯಿಗೆ ರಾಜಕೀಯ ನಾಯಕರ ಅಭಿನಂದನೆ
ಬೆಂಗಳೂರು, ಜುಲೈ 27: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಹಾವೇರಿ ಜಿಲ್ಲೆ ಶಿಗ್ಗಾವಿ ಕ್ಷೇತ್ರದ ಶಾಸಕರಾಗಿರುವ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಪುತ್ರನಾಗಿರುವ ಬಸವರಾಜ ಬೊಮ್ಮಾಯಿ ರಾಜ್ಯದ 30ನೇ ಸಿಎಂ ಆಗಿ ಆಯ್ಕೆಯಾಗಿದ್ದಾರೆ.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಕ್ಕೆ ರಾಷ್ಟ್ರ ಹಾಗೂ ರಾಜ್ಯದ ಹಲವು ರಾಜಕೀಯ ನಾಯಕರು ಅಭಿನಂದಿಸಿದ್ದಾರೆ.
ಕೆಪಿಸಿಸಿ
ಅಧ್ಯಕ್ಷ
ಡಿ.ಕೆ.
ಶಿವಕುಮಾರ್
"ಕರ್ನಾಟಕದ
ಮುಂದಿನ
ಮುಖ್ಯಮಂತ್ರಿಯಾಗಿ
ಆಯ್ಕೆಯಾಗಿದ್ದಕ್ಕಾಗಿ
ಬಸವರಾಜ
ಬೊಮ್ಮಾಯಿಗೆ
ಅಭಿನಂದನೆಗಳು.
ಈಗ
ಮತ್ತೆ
ರಾಜ್ಯದ
ಆಡಳಿತದತ್ತ
ಗಮನ
ಹರಿಸಿ
ಎಂದು
ಕಾಂಗ್ರೆಸ್
ಪಕ್ಷ
ಮತ್ತು
ರಾಜ್ಯ
ಆಶಿಸುತ್ತಿದೆ,''
ಎಂದು
ಕೆಪಿಸಿಸಿ
ಅಧ್ಯಕ್ಷ
ಡಿ.ಕೆ.
ಶಿವಕುಮಾರ್
ಟ್ವೀಟ್
ಮಾಡಿದ್ದಾರೆ.
ಮಾಜಿ
ಸಿಎಂ
ಯಡಿಯೂರಪ್ಪ
ಶುಭ
ಹಾರೈಕೆ
"ರಾಜ್ಯದ
ಮುಖ್ಯಮಂತ್ರಿಗಳಾಗಿ
ಪ್ರಮಾಣ
ವಚನ
ಸ್ವೀಕರಿಸಲಿರುವ
ಬಸವರಾಜ
ಬೊಮ್ಮಾಯಿಗೆ
ಹೃತ್ಪೂರ್ವಕ
ಅಭಿನಂದನೆಗಳು.
ಪಕ್ಷದ
ಎಲ್ಲ
ನಾಯಕರ
ಬೆಂಬಲದೊಂದಿಗೆ,
ಲಕ್ಷಾಂತರ
ಕಾರ್ಯಕರ್ತರ
ಆಶೀರ್ವಾದದೊಂದಿಗೆ
ಆಡಳಿತದ
ಚುಕ್ಕಾಣಿ
ಹಿಡಿಯಲಿರುವ
ಬೊಮ್ಮಾಯಿ
ಅವರ
ಸಮರ್ಥ,
ಯಶಸ್ವಿ
ಕಾರ್ಯನಿರ್ವಹಣೆಗೆ
ಹಾರೈಸುತ್ತೇನೆ,"
ಎಂದು
ಮಾಜಿ
ಸಿಎಂ
ಬಿ.ಎಸ್.
ಯಡಿಯೂರಪ್ಪ
ಟ್ವೀಟ್
ಮೂಲಕ
ಅಭಿನಂದಿಸಿದ್ದಾರೆ.
ಕೆ.ಎಸ್.
ಈಶ್ವರಪ್ಪ
ಅಭಿನಂದನೆ
ನಿಯೋಜಿತ
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿಗೆ
ಮಾಜಿ
ಸಚಿವ
ಕೆ.ಎಸ್.
ಈಶ್ವರಪ್ಪ
ಅಭಿನಂದನೆ
ಸಲ್ಲಿಸಿದ್ದಾರೆ.
"ಕರ್ನಾಟಕದ
ನೂತನ
ಮುಖ್ಯಮಂತ್ರಿಯಾಗಿ
ಆಯ್ಕೆಯಾದ
ಬಸವರಾಜ
ಬೊಮ್ಮಾಯಿಗೆ
ಶುಭ
ಕೋರುತ್ತೇನೆ,"
ಎಂದು
ಟ್ವೀಟ್
ಮಾಡಿದ್ದಾರೆ.
ಶುಭ
ಕೋರಿದ
ಡಾ.ಕೆ.
ಸುಧಾಕರ್
"ಕರ್ನಾಟಕದ
ನೂತನ
ಮುಖ್ಯಮಂತ್ರಿಗಳಾಗಿ
ಆಯ್ಕೆಯಾಗಿರುವ
ಬಸವರಾಜ
ಬೊಮ್ಮಾಯಿಗೆ
ಹೃತ್ಪೂರ್ವಕ
ಅಭಿನಂದನೆಗಳು.
ತಮ್ಮ
ನೇತೃತ್ವದಲ್ಲಿ
ರಾಜ್ಯ
ಅಭಿವೃದ್ಧಿ
ಪಥದಲ್ಲಿ
ಇನ್ನಷ್ಟು
ಉತ್ತುಂಗಕ್ಕೆ
ಏರಲಿ
ಎಂದು
ಶುಭ
ಕೋರುತ್ತೇನೆ.
ನಾಡಿನ
ಸಮಸ್ತ
ಜನರ
ಆಶೋತ್ತರಗಳನ್ನು
ಸಾಕಾರಗೊಳಿಸಲು
ಒಗ್ಗಟ್ಟಿನಿಂದ
ಕೆಲಸ
ಮಾಡೋಣವೆಂದು,"
ಮಾಜಿ
ಸಚಿವ
ಡಾ.ಕೆ.
ಸುಧಾಕರ್
ಶುಭಕೋರಿದ್ದಾರೆ.
ಬೊಮ್ಮಾಯಿಗೆ
ಅಭಿನಂದಿಸಿದ
ಬಿ.ಎಲ್.
ಸಂತೋಷ್
"ಶಾಸಕಾಂಗ
ಪಕ್ಷದ
ನಾಯಕರಾಗಿ
ಹಾಗೂ
ಸರ್ವಾನುಮತದಿಂದ
ಸಿಎಂ
ಆಗಿ
ಆಯ್ಕೆಯಾದ
ಬಸವರಾಜ
ಬೊಮ್ಮಾಯಿಗೆ
ಅಭಿನಂದನೆಗಳು.
ಒಬ್ಬ
ನುರಿತ
ರಾಜಕಾರಣಿ
ಮತ್ತು
ಆಡಳಿತದಲ್ಲಿ
ಹಳೆಯ
ಕೈ
ಆಗಿರುವ
ಬಸವರಾಜ
ಬೊಮ್ಮಾಯಿ
ರಾಜ್ಯವನ್ನು
ಅಭಿವೃದ್ಧಿಯಲ್ಲಿ
ಹೊಸ
ಎತ್ತರಕ್ಕೆ
ಕೊಂಡೊಯ್ಯುತ್ತಾರೆ,"
ಎಂದು
ಆರ್ಎಸ್ಎಸ್
ನಾಯಕ
ಹಾಗೂ
ರಾಷ್ಟ್ರೀಯ
ಬಿಜೆಪಿ
ಸಂಘಟನಾ
ಕಾರ್ಯದರ್ಶಿಯಾಗಿರುವ
ಬಿ.ಎಲ್.
ಸಂತೋಷ್
ಟ್ವೀಟ್
ಮೂಲಕ
ಅಭಿನಂದಿಸಿದ್ದಾರೆ.
ಬಿ.
ಶ್ರೀರಾಮುಲು
ಅಭಿನಂದನೆ
"ಭಾರತೀಯ
ಜನತಾ
ಪಾರ್ಟಿಯ
ಶಾಸಕಾಂಗ
ಪಕ್ಷದ
ನಾಯಕರಾದ
ಹಾಗೂ
ನೂತನ
ಮುಖ್ಯಮಂತ್ರಿಗಳಾಗಿ
ಆಯ್ಕೆಯಾದ
ಬಸವರಾಜ
ಬೊಮ್ಮಾಯಿಗೆ
ಹೃತ್ಪೂರ್ವಕ
ಅಭಿನಂದನೆಗಳು,"
ಎಂದು
ಮಾಜಿ
ಸಚಿವ
ಬಿ.
ಶ್ರೀರಾಮುಲು
ಟ್ವೀಟ್
ಮೂಲಕ
ತಿಳಿಸಿದ್ದಾರೆ.
ಮೋದಿ,
ಶಾಗೆ
ಧನ್ಯವಾದ
ತಿಳಿಸಿದ
ಬೊಮ್ಮಾಯಿ
ಪುತ್ರ
ಭರತ್
"ತಂದೆಗೆ
ಅವಕಾಶ
ನೀಡಿರುವುದು
ತುಂಬಾ
ಖುಷಿ
ತಂದಿದೆ,
ಮುಂದಿನ
ದಿನಗಳಲ್ಲಿ
ಒಳ್ಳೆಯ
ಕೆಲಸ
ಮಾಡುವ
ವಿಶ್ವಾಸವಿದೆ.
ಎಲ್ಲರನ್ನೂ
ಒಗ್ಗಟ್ಟಾಗಿ
ತೆಗೆದುಕೊಂಡು
ಕೆಲಸ
ಮಾಡುತ್ತಾರೆ,
ಅವಕಾಶ
ನೀಡಿದ್ದಕ್ಕೆ
ಪ್ರಧಾನಿ
ನರೇಂದ್ರ
ಮೋದಿ
ಹಾಗೂ
ಗೃಹ
ಸಚಿವ
ಅಮಿತ್
ಶಾಗೆ
ಧನ್ಯವಾದಗಳು,"
ಎಂದು
ನೂತನ
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ
ಪುತ್ರ
ಭರತ್
ಹೇಳಿದ್ದಾರೆ.
Recommended Video
ಮಾಜಿ
ಸಿಎಂ
ಎಚ್.
ಡಿ.
ಕುಮಾರಸ್ವಾಮಿ
ಶುಭಾಶಯ
"ಮುಖ್ಯಮಂತ್ರಿ
ಸ್ಥಾನಕ್ಕೆ
ಆಯ್ಕೆಯಾದ
ಬಸವರಾಜ
ಬೊಮ್ಮಾಯಿ
ಅವರಿಗೆ
ಶುಭಾಶಯಗಳು.
ಸಮಸ್ಯೆಗಳ
ಸುಳಿಯಲ್ಲಿ
ಸಿಲುಕಿರುವ
ರಾಜ್ಯಕ್ಕೆ
ಪರಿಹಾರಾತ್ಮಕವಾಗಿ
ಕೆಲಸ
ಮಾಡುವಿರೆಂದು
ನಿರೀಕ್ಷಿಸುವೆ.
ನೀರಾವರಿ
ವಿಚಾರಗಳಲ್ಲಿ
ತಮಗೆ
ಜ್ಞಾನವುಂಟು.
ಅಣೆಕಟ್ಟು
ನಿರ್ಮಾಣದಂಥ
ವಿಷಯದಲ್ಲಿ
ರಾಜ್ಯಕ್ಕೆ
ಆಗುತ್ತಿರುವ
ಅನ್ಯಾಯಗಳತ್ತ
ತಾವು
ಗಮನಹರಿಸುವಿರೆಂದು
ಭಾವಿಸುವೆ,"
ಎಂದು
ಮಾಜಿ
ಸಿಎಂ
ಎಚ್.ಡಿ.
ಕುಮಾರಸ್ವಾಮಿ
ಶುಭಾಶಯ
ತಿಳಿಸಿದ್ದಾರೆ.