ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೃಹ ಸಚಿವ ಪರಮೇಶ್ವರ್‌ಗೆ ಖಡಕ್ ಎಚ್ಚರಿಕೆ ನೀಡಿದ ಪೊಲೀಸ್ ಸಂಘ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 22: ಗೃಹ ಸಚಿವರ ನಿಗಾದಲ್ಲಿರುವ ಪೊಲೀಸ್ ಇಲಾಖೆ ಅದೇ ಗೃಹ ಸಚಿವರಿಗೆ ಖಡಕ್ ಎಚ್ಚರಿಕೆ ನೀಡಿದೆ.

ಹೌದು, ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘ ಗೃಹ ಸಚಿವರಿಗೆ ಎಚ್ಚರಿಕೆ ಪತ್ರ ರವಾನಿಸಿದ್ದು, ತಾವು ಈ ಹಿಂದೆ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಇದ್ದರೆ ಮುಂದಾಗುವ ಪರಿಣಾಮಗಳಿಗೆ ನೀವೇ ಹೊಣೆಗಾರರಾಗಬೇಕಾಗುತ್ತದೆ ಎಂದು ಸಂಘವು ಎಚ್ಚರಿಕೆ ನೀಡಿದೆ.

ಸಿಬಿಐನಲ್ಲಿ ಲಂಚ ಪ್ರಕರಣ: ಡಿಎಸ್‌ಪಿ ದೇವೇಂದರ್ ಕುಮಾರ್ ಬಂಧನಸಿಬಿಐನಲ್ಲಿ ಲಂಚ ಪ್ರಕರಣ: ಡಿಎಸ್‌ಪಿ ದೇವೇಂದರ್ ಕುಮಾರ್ ಬಂಧನ

ಈ ಹಿಂದೆ 2016ರಲ್ಲಿ ಪೊಲೀಸರು ಪ್ರತಿಭಟನೆಗೆ ಮುಂದಾಗಿ ಆ ನಂತರ ನಡೆದ ಬೆಳವಣಿಗೆಗಳ ಸಮಯದಲ್ಲಿ ನೀವೆ ಗೃಹ ಮಂತ್ರಿ ಆಗಿದ್ದಿರಿ, ಆಗ ನೀವು ನೀಡಿದ ಭರವಸೆಗಳೆಲ್ಲಾ ಪೊಳ್ಳು ಭರವಸೆಗಳಾಗಿ ಉಳಿದುಬಿಟ್ಟವು' ಎಂದು ಪತ್ರದಲ್ಲಿ ಗೃಹ ಸಚಿವ ಪರಮೇಶ್ವರ್ ಅವರನ್ನು ಖಾರವಾಗಿಯೇ ಪ್ರಶ್ನಿಸಲಾಗಿದೆ.

ತೆಲಂಗಾಣ ಮಾದರಿ ಸಂಬಳ ನೀಡಿ

ತೆಲಂಗಾಣ ಮಾದರಿ ಸಂಬಳ ನೀಡಿ

ಪೊಲೀಸರ ವೇತನ ಹೆಚ್ಚಿಸಿ ತೆಲಂಗಾಣ ಮಾದರಿಯಲ್ಲಿ ಸಂಬಳ ಕೊಡುವ ಬಗ್ಗೆ ಶೀಘ್ರವಾಗಿ ನಿರ್ಣಯ ಕೈಗೊಳ್ಳಬೇಕು, ಇತರೆ ರಾಜ್ಯಗಳಲ್ಲಿ ಇರುವಂತೆ ಏಕರೂಪ ಪೊಲೀಸ್ ವ್ಯವಸ್ಥೆ ನಮ್ಮ ರಾಜ್ಯದಲ್ಲೂ ಜಾರಿ ಆಗಬೇಕು ಇವುಗಳ ಬಗ್ಗೆ ನೀವು ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಸಂಘವು ಪತ್ರದಲ್ಲಿ ಒತ್ತಾಯಿಸಿದೆ.

ಪರಿಣಾಮ ಎದುರಿಸಬೇಕಾಗುತ್ತದೆ ಜಾಗೃತೆ

ಪರಿಣಾಮ ಎದುರಿಸಬೇಕಾಗುತ್ತದೆ ಜಾಗೃತೆ

ಸಂಘದ ವತಿಯಿಂದ ಅಧ್ಯಕ್ಷ ವಿ.ಶಶಿಧರ ಅವರು ಪತ್ರವನ್ನು ಬರೆದಿದ್ದು, ಪೊಲೀಸ್ ಸಮುದಾಯದ ಮನವಿಗೆ ಶೀಘ್ರವಾಗಿ ಸ್ಪಂದಿಸಬೇಕು ಒಂದೊಮ್ಮೆ ಸ್ಪಂದಿಸಲು ವಿಫಲರಾದರೆ ಮುಂದಿನ ಪರಿಣಾಮಗಳನ್ನು ಗೃಹ ಸಚಿವರಾಗಿ ನೀವೆ ಎದುರಿಸಬೇಕಾಗುತ್ತದೆ ಎಂದು ಪತ್ರದಲ್ಲಿ ಎಚ್ಚರಿಕೆ ಸಹ ನೀಡಲಾಗಿದೆ.

ಗಂಗಾಧರ ಚಡಚಣ ಹತ್ಯೆ : ಸಿಐಡಿ ಕೈಗೆ ಸಿಕ್ಕಿಬಿದ್ದ ಎಂ.ಬಿ.ಅಸೋಡೆಗಂಗಾಧರ ಚಡಚಣ ಹತ್ಯೆ : ಸಿಐಡಿ ಕೈಗೆ ಸಿಕ್ಕಿಬಿದ್ದ ಎಂ.ಬಿ.ಅಸೋಡೆ

2016ರಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ಪೊಲೀಸರು

2016ರಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ಪೊಲೀಸರು

2016 ರಲ್ಲಿ ಪೊಲೀಸ್ ಇಲಾಖೆಯಲ್ಲಿನ ಅಸಮಾನತೆ ಹೋಗಲಾಡಿಸಿ, ಸಂಬಳ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಆದರೆ ಸರ್ಕಾರವು ಎಸ್ಮಾ ಜಾರಿ ಮಾಡಿದ ಕಾರಣ ಪ್ರತಿಭಟನೆ ನಡೆಯಲಿಲ್ಲ, ಉದ್ದೇಶಿತ ಪ್ರತಿಭಟನೆಯ ಹಿಂದಿನ ದಿನ ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘದ ಅಧ್ಯಕ್ಷ ಶಶಿಧರ್ ಅವರನ್ನು ಬಂಧಿಸಲಾಗಿತ್ತು.

ವಿಡಿಯೋ: ಪೊಲೀಸ್‌ ಮೇಲೆ ನಿರ್ದಯ ಹಲ್ಲೆ ನಡೆಸಿದ ಬಿಜೆಪಿ ಕೌನ್ಸಿಲರ್‌ವಿಡಿಯೋ: ಪೊಲೀಸ್‌ ಮೇಲೆ ನಿರ್ದಯ ಹಲ್ಲೆ ನಡೆಸಿದ ಬಿಜೆಪಿ ಕೌನ್ಸಿಲರ್‌

ಭರವಸೆಗಳನ್ನು ಈಡೇರಿಸಿಲ್ಲವೆಂಬ ಆರೋಪ

ಭರವಸೆಗಳನ್ನು ಈಡೇರಿಸಿಲ್ಲವೆಂಬ ಆರೋಪ

ಪೊಲೀಸರ ಪ್ರತಿಭಟನೆಯ ಎಚ್ಚರಿಕೆಯಿಂದ ಎಚ್ಚೆತ್ತ ಸರ್ಕಾರವು ಆರ್ಡರ್ಲಿ ಪದ್ಧತಿಯನ್ನು ತೆಗೆದುಹಾಕಿತ್ತು. ಹಾಗು ಪೊಲೀಸರಿಗೆ ಕಡ್ಡಾಯ ರಜೆಯ ಸೌಲಭ್ಯವನ್ನು ನೀಡಿತ್ತು. ಅದೇ ಸಮಯದಲ್ಲಿ ಗೃಹ ಸಚಿವರಾದ ಪರಮೇಶ್ವರ್ ಅವರು ಕೆಲವು ಭರವಸೆಗಳನ್ನು ನೀಡಿದ್ದರು ಆದರೆ ಅವು ಜಾರಿ ಆಗಿಲ್ಲವೆಂದು ಸಂಘವು ಆರೋಪಿಸುತ್ತಿದೆ.

ಸಿಎಂ ಕುಮಾರಸ್ವಾಮಿ ಡೈನಾಮಿಕ್ ನಿರ್ಧಾರಕ್ಕೆ ಸಾರ್ವಜನಿಕರ ಉಘೇ..ಉಘೇ..ಸಿಎಂ ಕುಮಾರಸ್ವಾಮಿ ಡೈನಾಮಿಕ್ ನಿರ್ಧಾರಕ್ಕೆ ಸಾರ್ವಜನಿಕರ ಉಘೇ..ಉಘೇ..

English summary
Police organization writes letter to Home minister G Parameshwar demanding wage increase and many more demands. They warn Home minister that if he fails he will be responsible for future outcome.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X