ಪಿಂಗಾರ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನ
ಮಂಗಳೂರು: ಸೆ. 18: ಹತ್ತನೇ ವರ್ಷದ ಪಿಂಗಾರ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗೆ ಸೇರಿರುವವರು ಅರ್ಜಿ ಸಲ್ಲಿಸಬಹುದು.
ಈ ಮೂರು ಜಿಲ್ಲೆಯ ಯಾವುದಾದರೂ ಭಾಗದಲ್ಲಿ ಹುಟ್ಟಿ ಸ್ಥಳೀಯ, ರಾಜ್ಯ , ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರು ಅರ್ಜಿ ಸಲ್ಲಿಸಬಹುದಾಗಿದೆ. ಸಾಧಕರು ಸ್ವತಃ ಇಲ್ಲವೇ ಅವರ ಪರವಾಗಿ ಯಾರಾದರೂ ಅರ್ಜಿ ಸಲ್ಲಿಸಬಹುದು. ಪ್ರಶಸ್ತಿ ಆಯ್ಕೆ ಸಮಿತಿಯು ಮಂಗಳೂರು ಧರ್ಮಾಧ್ಯಕ್ಷ ಬಿಷಪ್ ಅಲೋಶಿಯಸ್ ಪೌಲ್ ಡಿಸೋಜ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.(ನೆಲಮಂಗಲದಲ್ಲಿ ಶೀಘ್ರವೇ ನ್ಯಾನೊ ಪಾರ್ಕ್)
ಅರ್ಜಿ ಸಲ್ಲಿಸಲು ಅಕ್ಟೋಬರ್ 10 ಕೊನೆ ದಿನವಾಗಿದೆ. ನವೆಂಬರ್ 11 ರಂದು ಸಾಧಕರನ್ನು ಮಂಗಳೂರಿನ ಡಾನ್ ಬಸ್ಕೋ ಹಾಲ್ ನಲ್ಲಿ ಬಿಷಪ್ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸುವರು.
ಅರ್ಜಿ
ಸಲ್ಲಿಸಬೇಕಾದ
ವಿಳಾಸ
ಸಂಚಾಲಕರು
ಪಿಂಗಾರ
ರಾಜ್ಯೋತ್ಸವ
ಪ್ರಶಸ್ತಿ
2014
ಬಿಷಪ್
ಹೌಸ್
ಕೋಡಿಯಾಲ್
ಬೈಲ್
ಬಿಲ್ಡಿಂಗ್
ಕೋಡಿಯಾಲ್
ಪೋಸ್ಟ್,
ದಕ್ಷಿಣ
ಕನ್ನಡ
-575003
ಇಮೇಲ್-
[email protected]
ದೂರವಾಣಿ-
9845419482