ಪ್ರತಿಭಟನೆ ಕೈ ಬಿಡಲು ಪೊಲೀಸರಿಗೆ ಪೇಜಾವರ ಶ್ರೀ ಕರೆ
ಉಡುಪಿ, ಜೂನ್ 02 : 'ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪೊಲೀಸರು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯನ್ನು ವಾಪಸ್ ಪಡೆಯಬೇಕು. ಸರ್ಕಾರ ಆರಕ್ಷಕರ ಬೇಡಿಕೆಗಳಿಗೆ ಸ್ಪಂದಿಸಿ ಅವರಿಗೆ ನ್ಯಾಯವನ್ನು ಒದಗಿಸಬೇಕು' ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರು ಮನವಿ ಮಾಡಿದ್ದಾರೆ.
ಉಡುಪಿಯಲ್ಲಿ
ಮಾಧ್ಯಮಗಳ
ಜೊತೆ
ಮಾತನಾಡಿದ
ಶ್ರೀಗಳು,
'ಬೇಡಿಕೆಗಳನ್ನು
ಈಡೇರಿಸುವಂತೆ
ಒತ್ತಾಯಿಸಿ
ಪೊಲೀಸರು
ಜೂ.4ರಂದು
ರಾಜ್ಯಾದ್ಯಂತ
ಮುಷ್ಕರ
ನಡೆಸಲು
ನಿರ್ಧರಿಸಿದ್ದಾರೆ
ಎಂದು
ತಿಳಿದುಬಂದಿದೆ.
ರಾಜ್ಯದ
ರಕ್ಷಣೆಯ
ವಿಶೇಷ
ಹೊಣೆ
ಹೊತ್ತಿರುವ
ಆರಕ್ಷಕರ
ಮುಷ್ಕರದಿಂದ
ಜನರಿಗೆ
ತೊಂದರೆಯಾಗುತ್ತದೆ'
ಎಂದರು.
[ಪೊಲೀಸರ
ಪ್ರತಿಭಟನೆ
ಏಕೆ?]
'ಜನರ ದೈನಂದಿನ ವ್ಯವಹಾರ, ರಕ್ಷಣೆ, ಭದ್ರತೆಗಳ ವ್ಯವಸ್ಥೆಗಳೆಲ್ಲವೂ ಅಸ್ತವ್ಯಸ್ತವಾಗುತ್ತದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಆರಕ್ಷಕರು ತಮ್ಮ ನಿರ್ಧಾರವನ್ನು ಬದಲಿಸಿ ಮುಷ್ಕರವನ್ನು ಸ್ಥಗಿತಗೊಳಿಸಬೇಕು. ಬೇಡಿಕೆಗಳಿಗೆ ಸ್ಪಂದಿಸಿ ಅವರಿಗೆ ನ್ಯಾಯವನ್ನು ಒದಗಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆ' ಎಂದು ಹೇಳಿದರು. [ಪೊಲೀಸರ ಪ್ರತಿಭಟನೆ : ಶಶಿಧರ್ ವೇಣುಗೋಪಾಲ್ ಬಂಧನ]
ಶಿರೂರು ಶ್ರೀ ಬೆಂಬಲ : ಹಗಲು-ರಾತ್ರಿ ಎನ್ನದೆ ಸಮಾಜದ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಾಮಾಣಿಕ ಕರ್ತವ್ಯ ನಿರ್ವಹಿಸುವ ಪೊಲೀಸರ ನ್ಯಾಯಸಮ್ಮತ ಬೇಡಿಕೆಗೆ ಬೆಂಬಲ ಸೂಚಿಸಿರುವ ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥರು, ಸರಕಾರ ಕೂಡಲೇ ಪೊಲೀಸ್ ಇಲಾಖೆಯ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದ್ದಾರೆ.[ಪ್ರತಿಭಟನೆ : ಪೊಲೀಸರಿಂದ ಬಲವಂತದ ಮುಚ್ಚಳಿಕೆ]