ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎರಡು ದಿನ ಬಂದ್ ಬಳಿಕ ಸಹಜ ಸ್ಥಿತಿಯತ್ತ ಉತ್ತರ ಕನ್ನಡ
ಉತ್ತರಕನ್ನಡ, ಡಿಸೆಂಬರ್ 13 : ಎರಡು ದಿನಗಳ ಕಾಲ ಕುಮಟಾ, ಶಿರಸಿಯಲ್ಲಿ ನಡೆದ ಕೋಮು ಗಲಭೆ ನಂತರ ಇದೀಗ ಶಾಂತ ರೂಪಕ್ಕೆ ಮರಳುತ್ತಿದೆ.
ಹೊತ್ತಿ ಉರಿದ ಶಿರಸಿ : ಇಂದಿನ ಪ್ರಮುಖ ಬೆಳವಣಿಗೆಗಳು
ಹೊನ್ನಾವರದಲ್ಲಿ ನಡೆದ ಕೋಮುಗಲಭೆ ನಂತರ ಪರೇಶ್ ಮೇಸ್ತ ಕಾಣೆಯಾಗಿದ್ದ, ನಂತರ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ, ಕೊಲೆ ಖಂಡಿಸಿ ವಿಶ್ ಹಿಂದೂ ಪರಿಷತ್ತು ಮತ್ತು ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದರು. ಅದರಿಂದಾಗಿ ಹೊನ್ನಾವರ, ಕುಮಟಾ, ಶಿರಸಿ ಬಂದ್ ಮಾಡಲಾಗಿತ್ತು.
ಶಿರಸಿ ಕೋಮು ಗಲಭೆ: ಯಾರ್ಯಾರು ಏನೇನು ಹೇಳಿದರು
ಮಂಗಳವಾರ ಸಿದ್ದಾಪುರದಲ್ಲಿ ಕೂಡ ಶಾಂತಿಯುತ ಬಂದ್ ಆಚರಿಸಲಾಗುತ್ತಿದೆ. ಕುಮಟಾ, ಶಿರಸಿ, ಹೊನ್ನಾವರ ಸಹಜ ಸ್ಥಿತಿಯತ್ತ ಮರಳುತ್ತಿದೆ. ಬಸ್ ಸಂಚಾರ, ವ್ಯಾಪಾರ ವಹಿವಾಟು ಆರಂಭವಾಗಿದೆ. ಅಹಿತಕರೆ ಘಟನೆ ನಡೆಯದಂತೆ ಮತ್ತಷ್ಟು ಪೊಲೀಸರನ್ನು ನಿಯೋಜಿಸಲಾಗಿದೆ. ವಿವಿಧ ಸಂಘಟನೆಗಳು ಜತೆಗೆ ಜಿಲ್ಲಾಧಿಕಾರಿಗಳು ಸಭೆ ಕರೆದಿದ್ದಾರೆ. ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
Comments
bundh sirsi kumta communal clash hindu vishwa hindu parishad paresh mesta uttara kannada district news ಉತ್ತರ ಕನ್ನಡ ಬಂದ್ ಶಿರಸಿ ಕುಮಟಾ ಹಿಂದೂ ವಿಶ್ವ ಹಿಂದು ಪರಿಷತ್ ಜಿಲ್ಲಾಸುದ್ದಿ
English summary
Peace prevails in kumta and sirsi: The situation has been come to normal in Kumta and sirsi in Uttara Kannada district. After clash between two communities. The police have deployed more personels in the effected area.