ಪಾರ್ವತಮ್ಮ ನಿಧನ: ಚಿತ್ರಮಂದಿರಗಳು ಬಂದ್, ಹಲವು ಶಾಲೆಗಳಿಗೆ ರಜೆ
ಬೆಂಗಳೂರು, ಮೇ 31: ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕಿ, ಡಾ ರಾಜ್ ಕುಮಾರ್ ಧರ್ಮಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಇಂದು ಬೆಳಿಗ್ಗೆ 4.40ಕ್ಕೆ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರ ನಿಧನದ ಗೌರವಾರ್ಥ ಇಂದು ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಚಿತ್ರ ಮಂದಿರಗಳು ಬಂದ್ ಆಗಲಿವೆ.
ಇನ್ನು ಮೃತ ದೇಹ ಇಡಲಾಗಿರುವ ಸದಾಶಿವ ನಗರದ ಹೆಚ್ಚಿನ ಶಾಲೆಗಳು ಇಂದು ಕಾರ್ಯಚರಿಸುತ್ತಿಲ್ಲ. ಅಧಿಕಾರಿಗಳು ಶಾಲಾ ಆಡಳಿತ ಮಂಡಳಿ ಜತೆ ವಿಚಾರಿಸಿ ಮಕ್ಕಳನ್ನು ಶಾಲೆಗೆ ಕಳುಹಿಸವಂತೆ ಸಲಹೆ ನೀಡಿದ್ದಾರೆ.[ದಿ. ಪಾರ್ವತಮ್ಮ ರಾಜ್ ಕುಮಾರ್ ಅವರ ಮರೆಯಲಾರದ ಚಿತ್ರಗಳು]
ಇನ್ನು ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದಾದ್ಯಂತ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಪೂರ್ಣ ಪ್ರಜ್ಞಾ ಮೈದಾನದಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕಂಠೀರವ ಸ್ಟುಡಿಯೋದಲ್ಲಿ ರಾಜ್ ಕುಮಾರ್ ಸಮಾಧಿಯ ಸಮೀಪದಲ್ಲೇ ಪಾರ್ವತಮ್ಮ ಅಂತ್ಯಸಂಸ್ಕಾರ ನಡೆಯಲಿದೆ.
ಪಾರ್ವತಮ್ಮ ನಿಧನದ ಗೌರವಾರ್ಥ ಸಿನಿಮಾ ಪ್ರದರ್ಶನದ ಜತೆಗೆ ಸಿನಿಮಾ ಶೂಟಿಂಗ್ ಕೂಡಾ ಇವತ್ತು ಸ್ಥಗಿತಗೊಳ್ಳಲಿದೆ.