Breaking: ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಅನಾರೋಗ್ಯ
ಬೆಂಗಳೂರು, ಜೂನ್ 01: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಕೊರೊನಾ ಪರೀಕ್ಷೆಯನ್ನು ಕೂಡ ಮಾಡಿಸಲಾಗಿದೆ. ಕಳೆದ ರಾತ್ರಿಯಿಂದ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಸೋಮವಾರ
ರಾತ್ರಿ
ತೀವ್ರ
ಜ್ವರ
ಕಾಣಿಸಿಕೊಂಡಿದೆ,
ಈ
ಹಿನ್ನೆಲೆಯಲ್ಲಿ
ಕೊರೊನಾ
ಪರೀಕ್ಷೆಯನ್ನು
ಕೂಡ
ಮಾಡಿಸಲಾಗಿದೆ.
ಅನಾರೋಗ್ಯದ
ಹಿನ್ನೆಲೆಯಲ್ಲಿ
ಸಿದ್ದರಾಮಯ್ಯ
ಅವರ
ಆಪ್ತ
ವೈದ್ಯ
ಡಾ.
ರವಿ
ಕುಮಾರ್
ಅವರು
ಆರೋಗ್ಯ
ತಪಾಸಣೆ
ನಡೆಸಿದ್ದು,
ಎರಡು
ದಿನಗಳ
ಕಾಲ
ವಿಶ್ರಾಂತಿ
ಪಡೆಯಲು
ಸೂಚಿಸಿದ್ದಾರೆ.
ಸಿದ್ದರಾಮಯ್ಯ
ಅವರಿಗೆ
ಕೊರೊನಾ
ವರದಿ
ನೆಗೆಟಿವ್
ಬಂದಿದೆ,
ಆದರೂ
ಜ್ವರ
ಇರುವ
ಕಾರಣ
ವಿಶ್ರಾಂತಿ
ಪಡೆಯಲು
ಸೂಚಿಸಲಾಗಿದೆ.
ವೈದ್ಯರ ಸಲಹೆ ಮೇರೆಗೆ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅನಾರೋಗ್ಯ ಹಿನ್ನೆಲೆಯಲ್ಲಿ ಇಂದು ನಿಗದಿಪಡಿಸಲಾಗಿದ್ದ ಎಲ್ಲಾ ಕಾರ್ಯಕ್ರಮಗಳನ್ನು ಸಿದ್ದರಾಮಯ್ಯ ಅವರು ರದ್ದುಪಡಿಸಿದ್ದಾರೆ.ಇಂದು ಬೆಂಗಳೂರಿನ ಅನೇಕ ಕ್ಷೇತ್ರಗಳಿಗೆ ತೆರಳಿ ಉಚಿತ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇನ್ನು
ತಮ್ಮ
ನಿವಾಸದಲ್ಲಿಯೂ
ಸಹ
ಯಾರನ್ನೂ
ಭೇಟಿ
ಮಾಡದಿರಲು
ತೀರ್ಮಾನ
ತೆಗೆದುಕೊಳ್ಳಲಾಗಿದೆ.
ಸಿದ್ದರಾಮಯ್ಯ
ಅನುಪಸ್ಥಿತಿಯಲ್ಲಿ
ಬೆಂಗಳೂರಿನ
ವಿವಿಧೆಡೆ
ಕೆಪಿಸಿಸಿ
ಅಧ್ಯಕ್ಷ
ಡಿಕೆ
ಶಿವಕುಮಾರ್
ಕಿಟ್
ವಿತರಣೆ
ಮಾಡಲಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಕೊರೊನಾ ವರದಿ ನೆಗೆಟಿವ್ ಬಂದಿದ್ದರೂ ಕೂಡ ಜ್ವರ ಕಡಿಮೆಯಾಗದ ಹಿನ್ನೆಲೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ಮುಂದಾಗಿದ್ದಾರೆ.