ಸೈಬರ್ ವಂಚನೆ ಕುರಿತು ಇನ್ಮುಂದೆ ಆನ್ಲೈನ್ನಲ್ಲೇ ದೂರು ಕೊಡಿ
ಬೆಂಗಳೂರು, ಏಪ್ರಿಲ್ 30: ಸೈಬಲ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿತ್ತು, ಅದನ್ನು ನಿರ್ವಹಿಸುವ ಠಾಣೆಗಳೂ ಕಡಿಮೆ ಇದೆ.
ರಾಜ್ಯದ ಏಕೈಕ ಸೈಬರ್ ಕ್ರೈಂ ಠಾಣೆಗೆ ಬೆರಳೆಣಿಕೆಯಷ್ಟು ಸಿಬ್ಬಂದಿ!
ಅಷ್ಟೇ ಅಲ್ಲದೆ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳುವ ಕಾರಣ ಎಷ್ಟೋ ದೂರುಗಳು ಸ್ವೀಕೃತವಾಗದೆಯೇ ಉಳಿದಿದೆ. ಇದೆಲ್ಲವನ್ನೂ ತಪ್ಪಿಸುವ ಉದ್ದೇಶದಿಂದ ಸೈಬರ್ ವಂಚನೆ ಬಗ್ಗೆ ಆನ್ಲೈನ್ನಲ್ಲೇ ದೂರು ನೀಡುವ ಅವಕಾಶ ಮಾಡಿಕೊಟ್ಟಿದೆ.
ಸೈಬರ್ ಅಪರಾಧ: ರಾಜ್ಯದ ಮೊದಲ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆ
ಅಪರಾಧ ಕೃತ್ಯಗಳು: ಎಟಿಎಂ, ಕ್ರೆಡಿಟ್, ಡೆಬಿಟ್ ಕಾರ್ಡ್ ವಂಚನೆ, ಬಹುಮಾನದ ಹೆರಿನಲ್ಲಿ ದೋಖಾ, ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಡಿಯೋ-ಫೋಟೊ ಅಪ್ಲೋಡ್, ಅವಹೇಳನಕಾರಿ ಬರಹ, ಹ್ಯಾಕಿಂಗ್ ಹೀಗೆ ಸೈಬರ್ ಕ್ರೈಂಗಳಿಗೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಬಹುದಾಗಿದೆ.
ದೂರು ಸ್ವೀಕಾರ ಹೇಗೆ?: ಅಪರಾಧ ಕೃತ್ಯಗಳ ಸಂಬಂಧ ಆನ್ಲೈನ್ನಲ್ಲಿ ದೂರು ಸ್ವೀಕಾರಕ್ಕೆ ಅಮೆರಿಕ ಮಾದರಿ ಅನುಸರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರದ ಸಹಕಾರದಲ್ಲಿ ಎಲ್ಲಾ ತನಿಖಾ ಸಂಸ್ಥೆಗಳನ್ನು ಒಂದೇ ಸೂರಿನಡಿ ತರುವ ಉದ್ದೇಶವಿದೆ. ದೇಶದಲ್ಲಿ ಯಾವುದೇ ಮೂಲೆಯಲ್ಲಾದರೂ ಸೈಬರ್ ವಂಚಕರು ಬಲೆಗೆ ಬಿದ್ದು ನೊಂದವರು ತಕ್ಷಣವೇ ದೂರು ಸಲ್ಲಿಸಬಹುದಾಗಿದೆ.
ಸೈಬರ್ ಕ್ರೈಂ ಭಾರತದ ಭದ್ರತೆಗೆ ದೊಡ್ಡ ಸವಾಲು: ರಾಜನಾಥ್
ಈ ಮೊದಲು ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಕಿಗ ದೌರ್ಜನ್ಯಗಳ ಕುರಿತು ದೂರಿಗೆ cybercrime.gov.in ನಲ್ಲಿ ಅವಕಾಶ ನೀಡಲಾಗಿತ್ತು. ಈಗ ಅದೇ ರೀತಿ ಸೈಬರ್ ಅಪರಾಧಗಳಿಗೆ cycord.gov.inನಲ್ಲಿ ದೂರು ನೀಡಬಹುದಾಗಿದೆ.