ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂರರ ಗಡಿಯತ್ತ ಈರುಳ್ಳಿ, ಬೆಳ್ಳುಳ್ಳಿ ಬೆಲೆ ಕೇಳ್ಳೇಬೇಡಿ

|
Google Oneindia Kannada News

Recommended Video

ಭಾರಿ ಮಳೆಯಿಂದ ದೇಶಾದ್ಯಂತ ಈರುಳ್ಳಿ ಬೆಲೆ ಏರಿಕೆ |Oneindia kannada

ಬೆಂಗಳೂರು, ನವೆಂಬರ್ 7: ಈರುಳ್ಳಿ ಬೆಲೆ 65 ರೂಗೆ ಬಂದು ತಲುಪಿದೆ. ಇನ್ನೂ ಒಂದು ವಾರದಲ್ಲಿ 100ರೂ ಗಡಿ ದಾಟಲಿದೆ.

ರಾಜ್ಯದಲ್ಲಿ ಭಾರಿ ಮಳೆಗೆ ಈರುಳ್ಳಿ , ಬೆಳ್ಳುಳ್ಳಿ ಬೆಲೆ ನೆಲಕಚ್ಚಿ ರೈತರು ಸಂಕಷ್ಟದಲ್ಲಿದ್ದರೂ, ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಆದರೂ ಬೆಂಗಳೂರಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬೆಲೆ ಗಗನಕ್ಕೇರಿದೆ.

ಒಂದು ತಿಂಗಳ ಹಿಂದಷ್ಟೇ ಈರುಳ್ಳಿ ಬೆಲೆ 80ರವರೆಗೂ ತಲುಪಿತ್ತು, ಬಳಿಕ ಕೇಂದ್ರ ಸರ್ಕಾರವು ವಿದೇಶ ರಫ್ತು ಕಡಿಮೆ ಮಾಡಿದ ಬಳಿಕ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡಿತ್ತು.

ದೇಶಾದ್ಯಂತ ಈರುಳ್ಳಿ ಬೆಲೆ ಏರಿಕೆಯಾಗುತ್ತಿದ್ದಂತೆ ಎಚ್ಚರಗೊಂಡ ಕೇಂದ್ರ ಸರ್ಕಾರ ಬೆಲೆ ಏರಿಕೆ ತಡೆಯಲು, ಅಕ್ರಮ ದಾಸ್ತಾನು ಮಾಡದಂತೆ ಹಲವು ಬಿಗಿ ಕ್ರಮ ಕೈಗೊಂಡಿದೆ.

ರಾಷ್ಟ್ರ ರಾಜಧಾನಿಯಲ್ಲಿಈರುಳ್ಳಿ ಬೆಲೆ ಕೆಜಿಗೆ 80 ರೂಪಾಯಿ ತಲುಪುತ್ತಿದ್ದಂತೆಯೇ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಬುಧವಾರ ದೇಶಾದ್ಯಂತ ಬೆಲೆ ಮತ್ತು ಪೂರೈಕೆ ಲಭ್ಯತೆಯನ್ನು ಪರಿಶೀಲಿಸಿದ್ದಾರೆ.

ದಿಢೀರನೆ ಕುಸಿತ ಕಂಡ ಈರುಳ್ಳಿ ಬೆಲೆ, ಈಗೆಷ್ಟಿದೆ?ದಿಢೀರನೆ ಕುಸಿತ ಕಂಡ ಈರುಳ್ಳಿ ಬೆಲೆ, ಈಗೆಷ್ಟಿದೆ?

ಕಾರ್ಯದರ್ಶಿ ಗ್ರಾಹಕ ವ್ಯವಹಾರಗಳ ಅವಿನಾಶ್ ಕೆ ಶ್ರೀವಾಸ್ತವ ಮತ್ತು ಆಹಾರ ಇಲಾಖೆ ಕಾರ್ಯದರ್ಶಿ ರವಿ ಕಾಂತ್ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ಮಾಡಿ ಬೆಲೆ ಏರಿಕೆಯನ್ನು ತಡೆಯಲು ಸರ್ಕಾರ ಕೈಗೊಂಡಿರುವ ಕ್ರಮಗಳ ಜೊತೆಗೆ ಬೆಲೆಗಳ ಹೆಚ್ಚಳಕ್ಕೆ ಕಾರಣಗಳನ್ನು ಹುಡುಕಿದೆ.

 ಈರುಳ್ಳಿ ಪೂರೈಕೆಯಲ್ಲಿ ವ್ಯತ್ಯಯ

ಈರುಳ್ಳಿ ಪೂರೈಕೆಯಲ್ಲಿ ವ್ಯತ್ಯಯ

ಇತ್ತೀಚೆಗೆ ಈರುಳ್ಳಿ ಪೂರೈಕೆಯಲ್ಲಿ ವ್ಯತ್ಯಯ ಆಗಿರುವುದರಿಂದ ಈರುಳ್ಳಿ ಬೆಲೆ ಬೆಂಗಳೂರಿನಲ್ಲಿ ಮತ್ತೆ ಗಗನಕ್ಕೇರಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಈರುಳ್ಳಿ 65 ರೂ.ಕ್ಕಿಂತಲೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

 ಎಲ್ಲೆಲ್ಲಿ ಬೆಳೆಗಳಿಗೆ ಹಾನಿ

ಎಲ್ಲೆಲ್ಲಿ ಬೆಳೆಗಳಿಗೆ ಹಾನಿ

ದಕ್ಷಿಣ ಭಾರತದ ರಾಜ್ಯಗಳು, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶಗಳಲ್ಲಿ ಭಾರಿ ಮಳೆಯಿಂದಾಗಿ ಬೆಳೆಗಳು ಹಾನಿಗೊಳಗಾಗಿವೆ. ಕಳೆದ ವರ್ಷವೂ ಅರ್ಧದಷ್ಟು ಮಾತ್ರ ಬೆಳೆ ಬಂದಿತ್ತು.ಈ ಬಾರಿಯೂ ಕೊಯ್ಲಿಗೆ ಬಂದಿದ್ದ ಈರುಳ್ಳಿ, ಬೆಳ್ಳುಳ್ಳಿಯೂ ಮಳೆಗೆ ಕೊಳೆತು ಹೋಗಿದೆ. ಇದರಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಬೆಳೆ ಪ್ರಮಾಣ ಕಡಿಮೆಯಾಗಿದ್ದು, ಬೆಲೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಲೆ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.

 ಬೆಳೆ ಕೊಳೆತಿದ್ದರಿಂದ ರೈತರಿಗೆ ಸಂಕಟ

ಬೆಳೆ ಕೊಳೆತಿದ್ದರಿಂದ ರೈತರಿಗೆ ಸಂಕಟ

ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರ ಭಾಗಗಳಲ್ಲಿ ದೇಶಕ್ಕೆ ಅಗತ್ಯವಿರುವ ಶೇ.50ರಷ್ಟು ಬೆಳ್ಳುಳ್ಳಿ, ಈರುಳ್ಳಿ ಬೆಳೆಯಲಾಗುತ್ತದೆ. ಆದರೆ, ಮಳೆಗೆ ಈರುಳ್ಳಿ, ಬೆಳ್ಳುಳ್ಳಿ ಜಮೀನಿನಲ್ಲೇ ಕೊಳೆತು ಹೋಗಿದೆ. ಬೆಲೆ ಏರಿಕೆಯಿದ್ದರೂ ಬೆಳೆದ ರೈತರಿಗೆ ಮಾತ್ರ ಲಾಭ ಸಿಗದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.

 ಬೆಳ್ಳುಳ್ಳಿಗೂ ಇದೇ ಪರಿಸ್ಥಿತಿ

ಬೆಳ್ಳುಳ್ಳಿಗೂ ಇದೇ ಪರಿಸ್ಥಿತಿ

ಈರುಳ್ಳಿಯ ಪರಿಸ್ಥಿತಿ ಬೆಳ್ಳುಳ್ಳಿಗೂ ಬಂದಿದೆ. ತಿಂಗಳ ಹಿಂದಷ್ಟೇ ಕೆ.ಜಿಗೆ 100 ರಿಂದ 120 ರೂ. ಆಸುಪಾಸಿನಲ್ಲಿದ್ದ ಬೆಳ್ಳುಳ್ಳಿ ಬೆಲೆಯು ನೆರೆ, ಪ್ರವಾಹದಿಂದ ಹಾನಿಯ ಹಿನ್ನೆಲೆ ದುಪ್ಪಟ್ಟಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಕೆ.ಜಿಗೆ 200ರೂ.ನಿಂದ 220 ರೂ.ವರೆಗೆ ಮಾರಾಟವಾಗುತ್ತಿದೆ.

English summary
Traders associations attributed the price rise to the floods in Maharashtra and parts of north Karnataka, where the crops have been badly affected. Onion Price Shoot Up to 65 Rupees In Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X